Publish Date: Tue, 07 Mar 2023 (18:30 IST)
Updated Date: Tue, 07 Mar 2023 (18:34 IST)
ಕೇಂದ್ರದ ನಾಯಕರು ಎಲ್ಲಿಂದ ನಿಲ್ಲೋದಕ್ಕೆ ಸೂಚನೆ ನೀಡ್ತಾರೆ ಅಲ್ಲೆ ವಿಜಯೇಂದ್ರ ನಿಲ್ತಾನೆ, ಶಿವಮೊಗ್ಗದ ಶಿಕಾರಿಪುರದಿಂದ ವಿಜಯೇಂದ್ರ ಸ್ಪರ್ಧಿಸಬಹುದು ಎಂದು ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪ ಹೇಳಿದ್ದಾರೆ. ಕಲಬುರಗಿಯಲ್ಲಿ ಮಾತನಾಡಿದ ಅವರು, ಮೋದಿ ಬಗ್ಗೆ ಮಲ್ಲಿಕಾರ್ಜುನ ಖರ್ಗೆ ಏಕವಚನದಲ್ಲಿ ಹಗುರವಾಗಿ ಮಾತಾಡಬಾರದು. ಬಿಜೆಪಿಗೆ ಯಾರು ಬರ್ತಾರೆ ಅವರನ್ನ ಸ್ವಾಗತ ಮಾಡ್ತೇವೆ. ಯಾರು ಬಿಜೆಪಿಯನ್ನ ಬಿಟ್ಟು ಹೊಗ್ತಾರೆ ಸಂತೋಷವಾಗಿ ಹೋಗಲಿ. ಬೊಮ್ಮಾಯಿ ನೇತೃತ್ವದಲ್ಲಿ ಚುನಾವಣೆ ಹೋಗ್ತಿದ್ದೇವೆ. ಚುನಾವಣೆಯ ನಂತರ ಶಾಸಕಾಂಗ ಪಕ್ಷದ ಸಭೆಯಲ್ಲಿ ಸಿಎಂ ಯಾರಾಗಬೇಕು ಅಂತಾ ಡಿಸೈಡ್ ಆಗುತ್ತೆ ಎಂದರು.