Select Your Language

Notifications

webdunia
webdunia
webdunia
webdunia

ವಿದ್ಯಾವಾರಿಧಿ ಶಾಲೆ ಪ್ರಕರಣ: ಆಹಾರಕ್ಕೆ ವಿಷ ಬೆರೆಸಿರುವುದು ಬಹಿರಂಗ

ವಿದ್ಯಾವಾರಿಧಿ ಶಾಲೆ ಪ್ರಕರಣ: ಆಹಾರಕ್ಕೆ ವಿಷ ಬೆರೆಸಿರುವುದು ಬಹಿರಂಗ
ತುಮಕೂರು , ಶುಕ್ರವಾರ, 31 ಮಾರ್ಚ್ 2017 (21:07 IST)
ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿಯ ಹುಳಿಯಾರಿನ ತಾಲೂಕಿನಲ್ಲಿ ಮಾರ್ಚ್ 8 ರಂದು ವಿದ್ಯಾವಾರಿಧಿ ಶಾಲೆಯಲ್ಲಿ ವಿಷ ಸೇವಿಸಿ ನಾಲ್ವರು ಬಾಲಕರು ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ವಿಧಿ ವಿಜ್ಞಾನ ಸಂಸ್ಥೆಯಿಂದ ಎಫ್‌ಎಸ್‌ಎಲ್ ವರದಿ ಬಹಿರಂಗವಾಗಿದೆ.
 
ಬೆಂಗಳೂರಿನ ಮಡಿವಾಳದಲ್ಲಿರುವ ವಿಧಿ ವಿಜ್ಞಾನ ಪ್ರಯೋಗಾಲಯದ ಎಫ್‌ಎಸ್‌ಎಲ್ ವರದಿಯಲ್ಲಿ ವಿದ್ಯಾರ್ಥಿಗಳು ಸೇವಿಸಿದ ಸಾಂಬಾರ ಆಹಾರದಲ್ಲಿ ವಿಷ ಹಾಕಲಾಗಿತ್ತು ಎಂದು ಉಲ್ಲೇಖಿಸಲಾಗಿದೆ.
 
ಕೀಟನಾಶಕದಲ್ಲಿ ಬಳಸಲಾಗುವ ರಸಾಯನಿಕವಾದ ಅಲ್ಯೂಮಿನಿಯಂ ಫಾಸ್ಫೈಡ್ ಹಾಕಲಾಗಿತ್ತು ಎಂದು ವರದಿಯಲ್ಲಿ ತಿಳಿಸಲಾಗಿದೆ. ಘಟನೆಯಲ್ಲಿ ಮೂವರು ವಿದ್ಯಾರ್ಥಿಗಳು ಒಬ್ಬ ಸೆಕ್ಯೂರಿಟಿ ಗಾರ್ಡ್ ಮೃತಪಟ್ಟಿದ್ದನು.  
 
ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಎಫ್‌ಎಸ್‌ಎಲ್ ವರದಿ ತಲುಪಿದೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕೇಂದ್ರದಿಂದ ಒಂದೇ ಪುಟದ ಆದಾಯ ತೆರಿಗೆ ಸಲ್ಲಿಕೆ ನಮೂನೆ ಜಾರಿ