Webdunia - Bharat's app for daily news and videos

Install App

ಡಿಬಾಸ್ ಎಂದು ದರ್ಶನ್ ಫ್ಯಾನ್ಸ್ ರಗಳೆ, ಮೈಕ್ ಬಿಸಾಕಿ ಕೂತೇ ಬಿಟ್ಟ ಸಿಎಂ ಡಿಕೆ ಶಿವಕುಮಾರ್ Video

ಕೃಷ್ಣವೇಣಿ ಕೆ
ಬುಧವಾರ, 5 ಆಗಸ್ಟ್ 2026 (10:47 IST)
ರಾಮನಗರ: ಇಲ್ಲಿನ ಕರಗ ಉತ್ಸವಕ್ಕೆ ಸಿಎಂ ಡಿಕೆ ಶಿವಕುಮಾರ್ ಬಂದಾಗ ಡಿಬಾಸ್ ಎಂದು ಕೂಗಿ ದರ್ಶನ್ ಅಭಿಮಾನಿಗಳು ರಗಳೆ ಮಾಡಿದ್ದು ಇದರಿಂದ ಸಿಟ್ಟಿಗೆದ್ದ ಅವರು ಮೈಕ್ ಬಿಸಾಕಿ ಕೂತ ಘಟನೆ ನಡೆದಿದೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ರಾಮನಗರ ಉತ್ಸವದಲ್ಲಿ ಭಾಗಿಯಾಗಿದ್ದ ಸಿಎಂ ಡಿಕೆ ಶಿವಕುಮಾರ್ ಮೈಕ್ ಹಿಡಿದುಕೊಂಡು ಮಾತನಾಡಲು ಎದ್ದು ನಿಂತರು. ಅವರು ಮಾತು ಆರಂಭಿಸುತ್ತಲೇ ದರ್ಶನ್ ಅಭಿಮಾನಿಗಳು ಡಿಬಾಸ್ ಎಂದು ಕೂಗುತ್ತಿದ್ದರು.

ಆಗ ಸಿಎಂ, ಓಕೆ, ನನಗೆ ಗೊತ್ತಾಯ್ತು, ನಿಮ್ಮ ನೋವು ಏನೆಂದು ಗೊತ್ತಾಗಿದೆ, ಸ್ವಲ್ಪ ತಾಳ್ಮೆಯಿಂದಿರಿ. ಇದೆಲ್ಲಾ ಪಬ್ಲಿಕ್ ನಲ್ಲಿ ಮಾತನಾಡುವ ವಿಚಾರವಲ್ಲ. ಎಲ್ಲಾ ಸರಿ ಮಾಡೋಣ ಎಂದು ಸಮಾಧಾನಿಸುವ ಪ್ರಯತ್ನ ಮಾಡಿದರು.

ಬಳಿಕ ಮತ್ತೆ ಡಿಕೆ ಶಿವಕುಮಾರ್ ಆರಂಭಿಸುತ್ತಿದ್ದಂತೇ ಅಭಿಮಾನಿಗಳು ಮತ್ತೆ ಡಿಬಾಸ್ ಎಂದು ಸದ್ದು ಮಾಡಲು ಆರಂಭಿಸಿದರು. ಇದರಿಂದ ಕಿರಿ ಕಿರಿಗೊಳಗಾದ ಸಿಎಂ, ಮೈಕ್ ಬಿಸಾಕಿ ಏಯ್ ಹೋಗ್ರೀ ಸುಮ್ನೇ.. ಡಿಬಾಸ್ ನ್ನೇ ಕಟ್ಕೊಂಡು ಹೋಗಲಿ ಅವರು ಎಂದು ಕುರ್ಚಿಯಲ್ಲಿ ಕೂತರು. ಬಳಿಕ ಸ್ಥಳೀಯ ಶಾಸಕ ಇಕ್ಬಾಲ್ ಹುಸೇನ್ ಅಭಿಮಾನಿಗಳನ್ನು ಗದರಿದರು. ಇದು ನಮಗೆಲ್ಲಾ ಅಗೌರವ, ಇದು ಇಡೀ ರಾಮನಗರಕ್ಕೆ ಅಗೌರವ. ದಯವಿಟ್ಟು ಮುಖ್ಯಮಂತ್ರಿಗಳು ಮಾತನಾಡುತ್ತಾರೆ, ಇದು ನಮ್ಮೆಲ್ಲರ ಕಾರ್ಯಕ್ರಮ. ನಾವೆಲ್ಲರೂ ಭಕ್ತಿಯಿಂದ ಆಚರಿಸುವ ಕಾರ್ಯಕ್ರಮ. ದಯವಿಟ್ಟು ನಿಶ್ಯಬ್ಧವಾಗಿರಿ ಎಂದು ಸುಮ್ಮನಾಗಿಸಿದರು. ಬಳಿಕ ಸಿಎಂ ಡಿಕೆ ಶಿವಕುಮಾರ್ ಮಾತು ಮುಂದುವರಿಸಿದರು.


 
 
 
 
 
 
 
 
 
 
 
 
 
 
 

A post shared by Srinivas SP (@royal_srinivassp1)

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಾಂಗ್ರೆಸ್ ರೆಬೆಲ್ ಶಾಸಕರ ಅಸಮಾಧಾನ ನಿಂತಿಲ್ಲ, ಸೀಕ್ರೆಟ್ ಆಗಿ ನಡೀತಿದೆ ಈ ಪ್ಲ್ಯಾನ್

ಫ್ರೆಂಡ್ಸ್ ಗಾಗಿ ಸಮಯವಿದೆ, ಜಾರ್ಖಂಡ್ ವಿದ್ಯಾರ್ಥಿಗಳ ಹೋರಾಟಕ್ಕಿಲ್ವಾ.. ಅಭಿಜೀತ್ ದಿಪ್ಕೆಗೆ ನೆಟ್ಟಿಗರ ಪ್ರಶ್ನೆ

ಭಾರತವನ್ನು ಹಿಂದೂ ರಾಷ್ಟ್ರ ಮಾಡಿದರೆ ಸಮಾನತೆ ಇರಲ್ಲ, ಶೋಷಣೆ ಹೆಚ್ಚಾಗುತ್ತದೆ: ಯತೀಂದ್ರ ಸಿದ್ದರಾಮಯ್ಯ

ಕಿತ್ತು ತಿನ್ನಬೇಡವೋ... ಮರಿ ಆನೆಗೆ ಬುದ್ಧಿ ಕಲಿಸಿದ ತಾಯಿ ಆನೆ, ಇದು ನಮಗೂ ಪಾಠ Video

Karnataka Weather: ಕರ್ನಾಟಕ ಈ ಭಾಗಗಳಲ್ಲಿ ಇಂದೂ ಭಾರೀ ಮಳೆ ನಿರೀಕ್ಷೆ

ಮುಂದಿನ ಸುದ್ದಿ
Show comments