Select Your Language

Notifications

webdunia
webdunia
webdunia
webdunia

ಕೆಪಿಸಿಸಿ ಕಚೇರಿ ಹತ್ತಿರ ಬಿಜೆಪಿ ಪ್ರತಿಭಟನೆಯ ವರದಿ ಕೇಳಿದ ವೇಣುಗೋಪಾಲ

ಕೆಪಿಸಿಸಿ ಕಚೇರಿ ಹತ್ತಿರ ಬಿಜೆಪಿ ಪ್ರತಿಭಟನೆಯ ವರದಿ ಕೇಳಿದ ವೇಣುಗೋಪಾಲ
ಬೆಂಗಳೂರು , ಗುರುವಾರ, 28 ಡಿಸೆಂಬರ್ 2017 (19:53 IST)
ಮಹಾದಾಯಿ ವಿಚಾರದಲ್ಲಿ ಬಿಜೆಪಿ ಮುಖಂಡರು ಕೆಪಿಸಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಲು ಅವಕಾಶ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿರುವ ಕಾಂಗ್ರೆಸ್ ಪಕ್ಷದ ಉಸ್ತುವಾರಿ ವೇಣುಗೋಪಾಲ್ ಅವರು ಕೆಪಿಸಿಸಿಯಿಂದ ವರದಿ ಕೇಳಿದ್ದಾರೆ.
 
ಬಿಜೆಪಿಯವರು ಕೆಪಿಸಿಸಿ ಕಚೇರಿ ಹತ್ತಿರ ಪ್ರತಿಭಟನೆ ನಡೆಸಿದ್ದಕ್ಕೆ ಗೃಹ ಸಚಿವ ರಾಮಲಿಂಗಾರೆಡ್ಡಿ ಹಾಗೂ ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್ ವಿರುದ್ಧ ಗರಂ ಆಗಿರುವ ವೇಣುಗೋಪಾಲ ಅವರು, ಗಂಟೆಗಟ್ಟಲೆ ಭಾಷಣ ಮಾಡಲಿಕ್ಕೆ ಅವಕಾಶ ಮಾಡಿಕೊಟ್ಟಿದ್ದು ಸರಿಯೇ, ಪ್ರತಿಭಟನೆ ತಾರಕ್ಕೇರಿ ಕಾಂಗ್ರೆಸ್ ಬಗ್ಗೆ ನಾಕಾರಾತ್ಮಕ ಧೋರಣೆ ಬಂದಿದೆ. ಇದನ್ನು ತಡೆಯಬಹುದಿತ್ತು ಎಂದಿದ್ದಾರೆ.
 
ಗೃಹ ಸಚಿವರ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೂಡ ಅಸಮಾಧಾನಗೊಂಡಿದ್ದಾರೆ. ಬಿಜೆಪಿಯವರ ಪ್ರತಿಭಟನೆಗೆ ಅವಕಾಶ ನೀಡಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಸಂವಿಧಾನದ ಮೇಲೆ ಬಿಜೆಪಿಯ ದಾಳಿ– ರಾಹುಲ್ ಗಾಂಧಿ