Select Your Language

Notifications

webdunia
webdunia
webdunia
webdunia

ಕಬಾಲಿ ಚಿತ್ರ ಪ್ರದರ್ಶನಕ್ಕೆ ವಾಟಾಳ್ ನಾಗರಾಜ್ ವಿರೋಧ

ಕಬಾಲಿ ಚಿತ್ರ ಪ್ರದರ್ಶನಕ್ಕೆ ವಾಟಾಳ್ ನಾಗರಾಜ್ ವಿರೋಧ
ಬೆಂಗಳೂರು , ಶುಕ್ರವಾರ, 22 ಜುಲೈ 2016 (13:02 IST)
ಕಬಾಲಿ ಖ್ಯಾತಿಯ ರಜನಿಕಾಂತ್ ಕನ್ನಡ ವಿರೋಧಿ. ಅವರು ಕಾವೇರಿ ವಿಷಯದಲ್ಲಿ ಕರ್ನಾಟಕದ ಪರವಾಗಿಲ್ಲ. ಆದಾಗ್ಯೂ ಕರ್ನಾಟಕದಲ್ಲಿ ಚಿತ್ರದ ಪ್ರದರ್ಶನ ಜೋರಾಗಿದೆ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
 
ರಾಜ್ಯದಲ್ಲಿ ಪರ ಭಾಷೆ ಸಿನಿಮಾ ಹಾವಳಿಯನ್ನು ಖಂಡಿಸಿರುವ ವಾಟಾಳ್ ನಾಗರಾಜ್, ಪಕ್ಷದ ಕಾರ್ಯಕರ್ತರೊಂದಿಗೆ ನಗರದ ಶೇಷಾದ್ರಿಪುರಂನಲ್ಲಿ ಪ್ರತಿಭಟನೆ ಕೈಗೊಂಡಿದ್ದಾರೆ.
 
ಕಬಾಲಿ ಚಿತ್ರದ ನಾಯಕ ರಜನಿಕಾಂತ್ ಕಾವೇರಿ ವಿಷಯದಲ್ಲಿ ಕರ್ನಾಟಕವನ್ನು ಬೆಂಬಲಿಸಿಲ್ಲ. ಆದರೂ ರಾಜ್ಯದಲ್ಲಿ ಅವರು ಅಭಿನಯದ ಚಿತ್ರವನ್ನು ಅಷ್ಟು ಅದ್ದೂರಿಯಾಗಿ ಏಕೆ ಬಿಡುಗಡೆ ಮಾಡುತ್ತಿದ್ದೀರಿ ಎಂದು ಪ್ರಶ್ನಿಸಿದರು. 
 
ಕರ್ನಾಟಕದಲ್ಲಿ ರಜನಿಕಾಂತ ಅಭಿನಯದ ಕಬಾಲಿ ಚಿತ್ರ ಅದ್ದೂರಿ ಬಿಡುಗಡೆ ಖಂಡಿಸಿದ ವಾಟಾಳ್ ನಾಗರಾಜ್ ಪರಭಾಷಾ ಚಿತ್ರದ ರೀಲ್ ಸುಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕಬಾಲಿ ಟಿಕೆಟ್ ದೊರೆಯದಿದ್ದರಿಂದ ಆತ್ಮಹತ್ಯೆಗೆ ಯತ್ನಿಸಿದ ಅಭಿಮಾನಿ