Webdunia - Bharat's app for daily news and videos

Install App

ಗ್ಯಾಸ್ ಬೆಲೆ ಏರಿಕೆ ವಿರುದ್ಧ ವಾಟಾಳ್ ಕಿಡಿ

Webdunia
ಶುಕ್ರವಾರ, 2 ಜುಲೈ 2021 (20:15 IST)
ಬೆಂಗಳೂರು: ಗ್ಯಾಸ್ ಬೆಲೆ ಏರಿಕೆ ವಿರುದ್ಧ ವಾಟಾಳ್ ಕಿಡಿಕಾರಿ  ಕೆಂಪೇಗೌಡ ಬಸ್ ನಿಲ್ದಾಣ ದಲ್ಲಿ ಖಾಲಿ ಸಿಲಿಂಡರ್ ನೊಂದಿಗೆ   ಕೇಂದ್ರದ ಸರ್ಕಾರದ ಡುಗೆ ಅನಿಲ ಬೇಲೆ ಏರಿಕೆಯ ವಿರುದ್ಧ ಪ್ರತಿಭಟನೆ ಮಾಡಿದರು.
 
ಈ ಸಂದರ್ಭದಲ್ಲಿ ಮಾತನಾಡಿದ ವಾಟಾಳ್ ನಾಗರಾಜ್ ಜನರ ಪರಿಸ್ಥಿಯನ್ನು ನೋಡಿ ನೋವಾಗುತ್ತದೆ, ಜನರಿಗಾಗಿ ಹೋರಾಟ ಮಾಡಿ ನನ್ನ ಜೀವನವನ್ನು ಅರ್ಪಣೆ ಮಾಡಿದ್ದೇನೆ, ಎಲ್ಲಿ ಜನಕ್ಕೆ ಅನ್ಯಾಯ  ಆಗುತ್ತದೆ ಅಲ್ಲಿ ಹೋರಾಟ ಮಾಡುವವವನೇ ವಾಟಾಳ ನಾಗರಾಜ್. ನನ್ನದು ನಿತ್ಯ ನಿರಂತ ಹೋರಾಟ, ಗ್ಯಾಸ್,ಪೆರ್ಟ್ರೋಲ್, ಡೀಸಲ್ ಬೆಲೆ ಏರಿಕೆಯಾದರು ಯಾಕೋ  ಜನ ಆರಾಮಾಗಿ ಕುಳಿತಿದ್ದಾರೆ ಎಂದು ಅಭಿಪ್ರಾಯಪಟ್ಟರು.
 
ಹೇಳಬೇಕಂದರೆ ಜನ ದಂಗೆ ಏಳಬೇಕು, ಕೇಂದ್ರದ ವಿರುದ್ಧ ಮಾತಾಡಬೇಕು , ರಾಜ್ಯ ರಾಜ್ಯಗಳಲ್ಲಿ, ಬೀದಿಯಲ್ಲಿ  ದಂಗೆ ಏಳಬೇಕು , ಕರ್ನಾಟಕ ಬಂಧ್ ಮಾಡಬೇಕು. ಸರ್ಕಾರ ಒಂದು ಕಡೆ ಕೊರೊನ ಪ್ಯಾಕೇಜ್ ಕೊಟ್ಟು ಮತ್ತೊಂದು ಕಡೆ ತೆರಿಗೆ ಹಾಕುವ ಮೂಲಕ ಮೂಲಕ ಹಣವನ್ನು ವಸೂಲಿ ಮಾಡುತ್ತಿದ್ದಾರೆ. ಈ ಕೆಲಸ ಬಡವರ ಮೇಲೆ ಬರೆಯಾಗಿದೆ , ಬೆನ್ನು ಮೂಳೆ ಮುರಿಯುವ ಕೆಲಸವಾಗಿದೆ, 6 ತಿಂಗಳಲ್ಲಿ ಎಲ್ಲಾ ತಿಂಗಳು ದರ ಏರಿಸಿದ್ದಾರೆ ಎಂದು ಕಿಡಿ ಕಾರಿದರು. 
 
ಎಲ್ಲಿ ಬಡವರು ದುಡ್ಡು ಕೊಡುವುದಕ್ಕಾಗುತ್ತೆ ಇದು ಬಹಳ ಅನ್ಯಾಯ, ಯಾವ ಮಂತ್ರಿ , ಎಂ.ಪಿ ಎಮ್ಮ್.ಎಲ್.ಎ ಗಳಿಗೆ ಈ ವಿಚಾರ ಬೇಕಾಗಿಲ್ಲ ಅದಕ್ಕೆ ಈ ಪರಿಸ್ಥಿತಿ ನಿರ್ಮಾಣ ಆಗಿದೆ. ನಿಜಕ್ಕೂ ಗ್ಯಾಸ್ ಬೆಲೆ ಏರಿಕೆಯನ್ನು , ತೀವ್ರವಾಗಿ , ಪ್ರಾಮಾಣಿಕವಾಗಿ ವಿರೀಧಿಸುತ್ತೇನೆ. ಈ ವಿಷಯವನ್ನು ಇಲ್ಲಿಗೆ ಬಿಡೋದಿಲ್ಲ , ರಾಜ್ಯದ ಜಿಲ್ಲೆ ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡುತ್ತೇನೆ  , ದರ ಏರಿಕೆಯನ್ನು ಹಿಂದೆ ಪಡೆಯಬೇಕೆಂದು ಕೇಂದ್ರ ಸರ್ಕಾರಕ್ಕೆ ಒತ್ತಾಯ ಮಾಡುತ್ತೇನೆ
ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಬೆಂಗಳೂರು-ಮಂಗಳೂರು ವಂದೇ ಭಾರತ್ ಪ್ರಾಯೋಗಿಕ ಸಂಚಾರಕ್ಕೆ ಡೇಟ್‌ ಫಿಕ್ಸ್, ಇಲ್ಲಿದೆ ಮಾಹಿತಿ

E20 ಇಂಧನವು ವಾಹನಗಳನ್ನು ಹಾಳುಮಾಡುತ್ತಿದೆ: ರಾಹುಲ್ ಗಾಂಧಿ

ಶೀಘ್ರದಲ್ಲೇ ಮೊಜ್ಬಾಬಾ ಖಮೇನಿ ಮರಣದ ಸುದ್ದಿ ಕೇಳಿಬಂದರೆ ಆಶ್ಚರ್ಯವಿಲ್ಲ: ಇಸ್ರೇಲ್‌

ದಬಾಯಿಸಿ, ಒತ್ತಡ ಹೇರಿ ರಾಜೀನಾಮೆ ಪಡೆದಿದ್ದಾರೆ: ಛಲವಾದಿ ನಾರಾಯಣಸ್ವಾಮಿ, Video

ವೈದ್ಯರ ಮೇಲಿನ ಹಲ್ಲೆ ಪ್ರಕರಣ: ಶಿವಸೇನೆ ಕಾರ್ಪೊರೇಟರ್ ರಮೇಶ್ ಮ್ಹಾತ್ರೆಗೆ ಬಿಗ್ ರಿಲೀಫ್‌

ಮುಂದಿನ ಸುದ್ದಿ
Show comments