Publish Date: Mon, 25 Apr 2022 (20:57 IST)
Updated Date: Mon, 25 Apr 2022 (21:00 IST)
ಕರ್ನಾಟಕದಲ್ಲಿ ಶಾಂತಿ ಕದಡುವವರ ಆಸ್ತಿನಾಶಕ್ಕೆ ಬುಲ್ಡೋಜರ್ ಬಳಸುವ ಕ್ರಮ ಸರಿಯಲ್ಲ..ಜನರ ಜೀವನ ಕಿತ್ತುಕೊಳ್ಳಲು ಅಧಿಕಾರ ಕೊಟ್ಟವರು ಯಾರು ಎಂದು ವಿಧಾನ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಪ್ರ ಶ್ನಿಸಿದ್ದಾರೆ..ಈ ಸಂಬಂಧ ಇತ್ತೀಚೆಗೆ ರಾಜ್ಯದಲ್ಲಿ ನಡೆದ ಕೆಲ ಘಟನೆಗಳನ್ನು ವಿಶ್ಲೇಷಿಸಿದರು. 1976ರ ತುರ್ತು ಪರಿಸ್ಥಿತಿಯಲ್ಲಿ ಸಂಜಯ್ ಗಾಂಧಿ ಸಹ ಇದೇ ರೀತಿ ಬುಲ್ಡೋಜರ್ ಕ್ರಮ ಮಾಡಿದರು.. ನಂತರದ ಚುನಾವಣೆಯಲ್ಲಿ ಅವರಿಗೆ ದೊಡ್ಡ ಸೋಲಾಯಿತು..ಇದು ನೆನಪಿರಲಿ ಎಂದು ಎಚ್ಚರಿಕೆ ಕೊಟ್ರು.