Webdunia - Bharat's app for daily news and videos

Install App

ಯಡಿಯೂರಪ್ಪರನ್ನು ಹೊಗಳಿ, ಹೆಚ್.ಡಿ.ಕೆ, ರೇವಣ್ಣಗೆ ಟಾಂಗ್ ನೀಡಿದ ಅನರ್ಹ ಶಾಸಕ

Webdunia
ಮಂಗಳವಾರ, 5 ನವೆಂಬರ್ 2019 (18:30 IST)
ಸಿಎಂ ಬಿ.ಎಸ್.ಯಡಿಯೂರಪ್ಪ ರೈತ ನಾಯಕ, ರಾಜ್ಯದ ನೆರೆ ಪರಿಸ್ಥಿತಿ ನಿಭಾಯಿಸಿ ಅಭಿವೃದ್ಧಿಗೆ ದುಡಿಯುತ್ತಿರುವ ಧೀಮಂತ ನಾಯಕ ಅಂತೆಲ್ಲ ಅನರ್ಹ ಶಾಸಕರೊಬ್ಬರು ಹಾಡಿ ಹೊಗಳಿದ್ದಾರೆ.

ಮಂಡ್ಯದ ಬೂಕನಕೆರೆಯಲ್ಲಿ ಅನರ್ಹ ಶಾಸಕ ಡಾ.ನಾರಾಯಣಗೌಡರ ಅಭಿಮಾನಿಗಳು ಬೃಹತ್ ಸಭೆ ನಡೆಸಿದ್ರು. ಅನರ್ಹ ಶಾಸಕ ನಾರಾಯಣಗೌಡ ಮಾತನಾಡಿ, ತಾಲೂಕಿನ ಅಭಿವೃದ್ಧಿಗೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಅಂತ ಹೇಳಿದ್ರು.
ನನ್ನ ಕ್ಷೇತ್ರದ ಅಭಿವೃದ್ಧಿಗೆ ಕಾಡಿ ಬೇಡಿ  ಬಿಡುಗಡೆ ಮಾಡಿಸಿದ ಅನುದಾನವನ್ನು ಹೊಳೆನರಸೀಪುರ, ಹಾಸನಕ್ಕೆ ರೇವಣ್ಣ  ತಗೊಂಡು ಹೋಗ್ತಿದ್ದರು.

ನನ್ನ ವಿರುದ್ಧ ತಾಲೂಕಿನ ನಾಲ್ವರು ಕಿಡಿಗೇಡಿಗಳು ಹೇಳ್ತಿದ್ದ ಚಾಡಿ ಮಾತನ್ನು ವರಿಷ್ಠರು ಕೇಳ್ತಿದ್ರು.
ಕೆ.ಆರ್.ಪೇಟೆ ಕ್ಷೇತ್ರಕ್ಕೆ 700 ಕೋಟಿ ಅನುದಾನ ನೀಡಿದ್ದೇನೆ ಎಂದು ಸುಳ್ಳು ಹೇಳಿದ ಕುಮಾರಸ್ವಾಮಿ, ಕೊನೆಗೆ 100 ಕೋಟಿ ಅನುದಾನವನ್ನೂ ಕೊಡಲಿಲ್ಲ.

ಆದ್ದರಿಂದ ಬೇಸತ್ತು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದೆ ಎಂದು ನಾರಾಯಣಗೌಡ ಹೇಳಿದರು.
ಯಡಿಯೂರಪ್ಪ ಅವರು ದೈವಭಕ್ತರು, ರಾಜ್ಯದ ಅಭಿವೃದ್ಧಿಗೆ ಹಗಲಿರುಳೆನ್ನದೇ ದುಡಿಯುತ್ತಿದ್ದಾರೆ ಎಂದರು.  


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments