Webdunia - Bharat's app for daily news and videos

Install App

ರೈಲು ಹಳಿಯ ಕಬ್ಬಿಣ ಕದಿಯುತ್ತಿದ್ದ ಮಕ್ಕಳನ್ನು ಹಿಡಿದ ಸಿಬ್ಬಂದಿಗೆ ಸನ್ಮಾನ ಬದಲು ಕೇಸ್ (ವಿಡಿಯೋ)

Krishnaveni K
ಸೋಮವಾರ, 17 ಫೆಬ್ರವರಿ 2025 (14:54 IST)
ಉಡುಪಿ: ರೈಲು ಹಳಿಯ ಕಬ್ಬಿಣ ಕದಿಯುತ್ತಿದ್ದ ಇಬ್ಬರು ಬಾಲಕರನ್ನು ಹಿಡಿದು ಪ್ರಶ್ನಿಸಿದ ರೈಲು ಸಿಬ್ಬಂದಿಗೆ ಈಗ ಸನ್ಮಾನದ ಬದಲು ಕೇಸ್ ಜಡಿದು ಶಿಕ್ಷೆ ನೀಡಲಾಗುತ್ತಿದೆ!

ಇದು ನಡೆದಿರುವುದು ಉಡುಪಿಯಲ್ಲಿ. ಹಳಿಯ ಕಬ್ಬಿಣ ಕದಿಯುತ್ತಿದ್ದ ಇಬ್ಬರು ಶಾಲಾ ಬಾಲಕರನ್ನು ಅಲ್ಲಿಯೇ ರೆಡ್ ಹ್ಯಾಂಡ್ ಆಗಿ ಹಿಡಿದು ಕೊಂಕಣ ರೈಲ್ವೇ ಸಿಬ್ಬಂದಿಯೊಬ್ಬರು ಬೆತ್ತದಿಂದ ಹೊಡೆದಿದ್ದಾರೆ. ಬಳಿಕ ನೀವು ಯಾರು ನಿಮ್ಮ ಶಾಲೆ ಯಾವುದು ಎಂದೆಲ್ಲಾ ಪ್ರಶ್ನಿಸಿ ವಿಡಿಯೋ ಮಾಡಿದ್ದಾರೆ.

ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ರೈಲು ಹಳಿಯ ಕಬ್ಬಿಣ ಕಿತ್ತು ಹಾಕುವುದು ಗಂಭೀರ ವಿಚಾರವಾಗಿದ್ದು, ಇದರಿಂದ ರೈಲು ಹಳಿ ತಪ್ಪಿ ಭಾರೀ ಅನಾಹುತವಾಗುವ ಸಂಭವವಿದೆ. ಇಂತಹ ಅಪಾಯ ತಪ್ಪಿಸಿದ ಸಿಬ್ಬಂದಿಗೆ ಈಗ ಸನ್ಮಾನದ ಬದಲು ಶಿಕ್ಷೆಯಾಗುತ್ತಿರುವುದು ವಿಪರ್ಯಾಸ.

ಇಬ್ಬರು ಶಾಲಾ ಬಾಲಕರಾಗಿದ್ದು ಇವರಲ್ಲಿ ಒಬ್ಬಾತನ ಪೋಷಕರು ಘಟನೆ ಸಂಬಂಧ ಪೊಲೀಸರಿಗೆ ದೂರು ನೀಡಿದ್ದಾರೆ. ನನ್ನ ಮಗನ ಮೇಲೆ ಹಲ್ಲೆ ನಡೆಸಲಾಗಿದೆ ಎಂದು ದೂರು ನೀಡಿದ್ದಾರೆ. ಈ ಕಾರಣಕ್ಕೆ ಸಿಬ್ಬಂದಿ ಮೇಲೆ ಈಗ ಕೇಸ್ ದಾಖಲಾಗಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ರೈಲು ಹಳಿಗೆ ಹಾನಿ ಮಾಡುವುದು ಗಂಭೀರ ಅಪರಾಧವಾಗಿದೆ. ಈ ತಪ್ಪು ಮಾಡಿದವರನ್ನು ಹಿಡಿದುಕೊಟ್ಟ ಸಿಬ್ಬಂದಿ ಮೇಲೆಯೇ ಕೇಸ್ ಹಾಕಿದ್ದು ಸರಿಯಲ್ಲ ಎಂದು ಆಕ್ರೋಶ ವ್ಯಕ್ತವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಎಲ್ಲವನ್ನೂ ನೋಡು

ತಾಜಾ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments