Select Your Language

Notifications

webdunia
webdunia
webdunia
webdunia

ಉಪ ಚುನಾವಣೆ ಬಳಿಕ 2 ಸಚಿವ ಸ್ಥಾನ ಭರ್ತಿ: ಸಿಎಂ

ಉಪ ಚುನಾವಣೆ ಬಳಿಕ 2 ಸಚಿವ ಸ್ಥಾನ ಭರ್ತಿ: ಸಿಎಂ
ಬೆಂಗಳೂರು , ಭಾನುವಾರ, 26 ಫೆಬ್ರವರಿ 2017 (17:26 IST)
ರಾಜ್ಯ ಸಚಿವ ಸಂಪುಟದಲ್ಲಿ ಖಾಲಿಯಿರುವ ಎರಡು ಸಚಿವ ಸ್ಥಾನಗಳನ್ನು ಉಪಚುನಾವಣೆಯ ನಂತರ ಭರ್ತಿ ಮಾಡಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
 
ಡೈರಿ ಕಪ್ಪ ಕುರಿತಂತೆ ಬಿಜೆಪಿ ಹೋರಾಟ ಮಾಡಲಿ. ಹೋರಾಟ ಕಾಂಗ್ರೆಸ್ ಪಕ್ಷಕ್ಕೆ ಹೊಸದೇನೂ ಅಲ್ಲ.ಶತಮಾನದಿಂದ ಕಾಂಗ್ರೆಸ್ ಪಕ್ಷ ಹೋರಾಟ ನಡೆಸುತ್ತಾ ಬಂದಿದೆ ಎಂದು ತಿರುಗೇಟು ನೀಡಿದರು.
 
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿಎಂ, ಬ್ರಿಟಿಷರ ವಿರುದ್ಧ ಹೋರಾಟ ಮಾಡಿದ್ದು ಕಾಂಗ್ರೆಸ್ ಪಕ್ಷ ಎನ್ನುವುದನ್ನು ಬಿಜೆಪಿ ಮರೆತಂತಿದೆ. ನಮ್ಮದು ಅಧಿಕಾರದಲ್ಲಿರುವ ಪಕ್ಷ. ಬಿಜೆಪಿಯವರು ಮಾಡಿದಂತೆ ನಾವು ಮಾಡಲು ಆಗುವುದಿಲ್ಲ ಎಂದರು.
 
ಬಿಜೆಪಿ ಕಾಂಗ್ರೆಸ್ ವಿರುದ್ಧ ಷಡ್ಯಂತ್ರ ನಡೆಸಿದೆ. ಆದರೆ, ಇಂತಹ ಹೀನ ಷಡ್ಯಂತ್ರದಲ್ಲಿ ಯಶಸ್ವಿಯಾಗುವುದಿಲ್ಲ. ಮುಂಬರುವ ದಿನಗಳಲ್ಲಿ ಮುಖಭಂಗ ಅನುಭವಿಸುತ್ತದೆ ಎಂದು ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಬಿಜೆಪಿ ಡೈರಿ ಬಿಡುಗಡೆಗೆ ನಾನು ಸಿದ್ಧ: ಕುಮಾರಸ್ವಾಮಿ