ಕೋಗಿಲು ಲೇಔಟ್ ನಿವಾಸಿಗಳ ಬಗ್ಗೆ ಶಾಕಿಂಗ್ ಸತ್ಯ ರಿವೀಲ್

Krishnaveni K
ಮಂಗಳವಾರ, 27 ಜನವರಿ 2026 (10:12 IST)
ಬೆಂಗಳೂರು: ಕೆಲವು ದಿನಗಳ ಹಿಂದೆ ಕೇರಳ ಸಿಎಂ ಪಿಣರಾಯಿ ವಿಜಯನ್ ಟ್ವೀಟ್ ಮಾಡಿದ ಬೆನ್ನಲ್ಲೇ ಕೋಗಿಲು ಲೇಔಟ್ ನ ಅಕ್ರಮ ವಸತಿ ನಿರ್ಮಾಣ ತೆರವು ಕಾರ್ಯ ಸದ್ದು ಮಾಡಿತ್ತು. ಆದರೆ ಈಗ ನಿವಾಸಿಗಳ ಬಗ್ಗೆ ಶಾಕಿಂಗ್ ಸತ್ಯ ಹೊರಬಿದ್ದಿದೆ.

ಕೇರಳ ಸಿಎಂ ಬೆಂಗಳೂರಿನ ಕೋಗಿಲು ಲೇಔಟ್ ನಿವಾಸಿಗಳನ್ನು ತೆರವುಗೊಳಿಸಿದ್ದಕ್ಕೆ ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯ, ಬುಲ್ಡೋಜರ್ ಸಂಸ್ಕೃತಿ ಎಂದು ಕರ್ನಾಟಕ ಸರ್ಕಾರದ ವಿರುದ್ಧ ಕಿಡಿ ಕಾರಿದ್ದರು. ಇದರ ಬೆನ್ನಲ್ಲೇ ಕರ್ನಾಟಕ ಇಲ್ಲಿನ ನಿವಾಸಿಗಳಿಗೆ ವಿರೋಧದ ನಡುವೆಯೂ ಪುನರ್ವಸತಿ ಕಲ್ಪಿಸಲು ಮುಂದಾಗಿದೆ.

ಆದರೆ ಈಗ ಕೋಗಿಲು ನಿವಾಸಿಗಳ ಬಗ್ಗೆ ಶಾಕಿಂಗ್ ಸತ್ಯ ಹೊರಬೀಳುತ್ತಿದೆ. ಇಲ್ಲಿನ ನಿವಾಸಿಗಳು ಬಡವರು ಎಂದೇ ಎಲ್ಲರೂ ಅಂದುಕೊಂಡಿದ್ದರು. ಆದರೆ ಈಗ ಕೋಗಿಲು ಲೇಔಟ್ ನ ಫಕೀರ್ ಕಾಲೊನಿ ಮತ್ತು ವಸೀಂ ಲೇಔಟ್ ನಲ್ಲಿ ಸರ್ಕಾರೀ ಜಮೀನು ಒತ್ತುವರಿ ಮಾಡಿದವರಿಂದ ಲಕ್ಷ ಲಕ್ಷ ಹಣ ಪಡೆಯಲಾಗಿತ್ತು. ಶೆಡ್ ನಿರ್ಮಾಣ ಮಾಡಿಕೊಳ್ಳಲು ವಿಜಯ್ ಮತ್ತು ರಾಬಿನ್ ಎಂಬವರು ಲಕ್ಷಾಂತರ ರೂಪಾಯಿ ಹಣ ಪಡೆದಿದ್ದರು ಎಂಬ ವಿಚಾರ ಪೊಲೀಸ್ ತನಿಖೆಯಲ್ಲಿ ಹೊರಬಿದ್ದಿದೆ. ಒಂದು ವೇಳೆ ಅವರಿಗೆ ಲಕ್ಷಾಂತರ ರೂಪಾಯಿ ಕೊಡಲು ಸಾಧ್ಯವಾಗಿದೆ ಎಂದರೆ ಅವರು ಬಡವರು ಹೇಗಾಗುತ್ತಾರೆ ಎಂಬ ಪ್ರಶ್ನೆ ಮೂಡಿದೆ. ಇಲ್ಲಿ ತೆರವುಗೊಳಿಸಿದ್ದು ಬಡವರ ಮನೆ ಎನ್ನಲಾಗಿತ್ತು. ಆದರೆ ಇವರೆಲ್ಲಾ ಬಡವರಲ್ಲ ಎಂಬ ಅಂಶ ಹೊರಬಿದ್ದಿದೆ. ಹಾಗಾಗಿ ಇವರಿಗೆ ಪುನರ್ವಸತಿ ಕಲ್ಪಿಸಬೇಕೇ ಎಂಬ ಬಗ್ಗೆ ಈಗ ಚರ್ಚೆ ಶುರುವಾಗಿದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಪೆಟ್ರೋಲ್, ಡೀಸೆಲ್ ದರ ಹೆಚ್ಚಳದಿಂದ ರಾಜ್ಯ ಸರ್ಕಾರಕ್ಕೇ ಲಾಭ, ಆದ್ರೂ ಕಾಂಗ್ರೆಸ್ ಮೊಸಳೆ ಕಣ್ಣೀರು: ಆರ್ ಅಶೋಕ್

ಜಗತ್ತಿನಲ್ಲೇ ಅತಿ ಹೆಚ್ಚು ಪೆಟ್ರೋಲ್, ಡೀಸೆಲ್ ಬೆಲೆ ಹೊಂದಿರುವ ದೇಶ ಯಾವುದು ತಿಳಿದರೆ ಅಚ್ಚರಿಯಾಗುತ್ತೆ

ಅತಿಯಾದ ಬಿಸಿಲಿರುವಾಗ ಮನೆ ಹೊರಗೆ ಬಂದ ಮಗುವಿನ ಕತೆ ಏನಾಯ್ತು: ಶಾಕಿಂಗ್ ವಿಡಿಯೋ ಇಲ್ಲಿದೆ

ಶಾಂತಿ ಮಾತುಕತೆ ನಡುವೆಯೇ ಇರಾನ್ ಮೇಲೆ ಅಮೆರಿಕಾ ದಾಳಿ

ಸಿದ್ದರಾಮಯ್ಯನವರ ಮನವೊಲಿಸಲು ಹೈಕಮಾಂಡ್ ಮುಂದೆ ಇರುವುದು ಇದೊಂದೇ ಅಸ್ತ್ರ

ಮುಂದಿನ ಸುದ್ದಿ
Show comments