Webdunia - Bharat's app for daily news and videos

Install App

ನಾಳೆ ರಾಜಧಾನಿ ಬೆಂಗಳೂರು ಸ್ತಬ್ಧ..!

Webdunia
ಸೋಮವಾರ, 25 ಸೆಪ್ಟಂಬರ್ 2023 (17:03 IST)
ಕಾವೇರಿ ನದಿ ನೀರಿನ ಹೋರಾಟ ಮಂಡ್ಯ, ಮೈಸೂರು, ಬೆಂಗಳೂರು ನಂತರ ಇಡೀ ಕರ್ನಾಟಕದಾದ್ಯಂತ ವ್ಯಾಪಿಸುತ್ತಿದೆ. ನಾಳೆ ಬೆಂಗಳೂರು ಬಂದ್​​ಗೆ ಕರೆ ನೀಡಿಲಾಗಿದೆ. ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್​​ಗೆ ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಘೋಷಿಸಿದ್ದಾರೆ. ಹೀಗಾಗಿ ಅಖಂಡ ಕರ್ನಾಟ ಬಂದ್ ಇರಲಿದೆ. ಸೆಪ್ಟೆಂಬರ್ 29ರಂದು ಅಖಂಡ ಕರ್ನಾಟಕ ಬಂದ್​​ಗೆ ಯೋಜನೆ ಮಾಡಿದ್ದೇವೆ ಎಂದು ತಿಳಿಸಿದರು.

ಮಂಗಳವಾರ ಹಾಗೂ ಶುಕ್ರವಾರ ಬಂದ್ ವಿಚಾರಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿ.ಕೆ.ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಪ್ರತಿಭಟನೆ ಮಾಡುವುದಕ್ಕೆ, ರಾಜ್ಯದ ಹಿತ ಕಾಪಾಡಕ್ಕೆ ನಾವೆಲ್ಲ ಸಹಕಾರ ಕೊಡ್ತೇವಿ. ನಿಮ್ಮ ಹೋರಾಟಕ್ಕೆ ನಾವು ಅಡಚಣೆ ಮಾಡಲ್ಲ. ಆದರೆ ಶಾಂತಿ ಕಾಪಾಡಬೇಕು, ಜನರಿಗೆ ತೊಂದರೆ ಆಗಬಾರದು. ಹೋರಾಟ ಮಾಡಬಹುದು ಪ್ರಜಾಪ್ರಭುತ್ವದ‌ ಹಕ್ಕದು. ನಾವು ಯಾರು ಅದನ್ನು ಅಡ್ಡಿ ಪಡಿಸಲ್ಲ, ನಿಮ್ಮ ಹಕ್ಕನ್ನು ನೀವು ಉಳಿಸಿಕೊಳ್ಳಿ. ಇನ್ನೂ ಸುಪ್ರೀಂ, ಹೈಕೋರ್ಟ್ ಜಜ್ಮೆಂಟ್ ಇದೆ ಎಂದು ತಿಳಿಸಿದ್ದಾರೆ.

ನೀರಿನ ವಿಚಾರದಲ್ಲಿ ಕರ್ನಾಟಕ ಬಂದ್ ಮಾಡಿದ್ದೇನೆ ಎಂದು ಮಾಜಿ ಸಂಸದ ಶಿವರಾಮೇ ಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇದೇ ಮೊದಲ ಬಾರಿಗೆ ಬಂದ್‌ಗೆ ಕರೆ ನೀಡಿದಲ್ಲ, ಕಾವೇರಿ ವಿಚಾರದಲ್ಲಿ ಬರಿ ಬೆಂಗಳೂರು ಬಂದ್ ಮಾಡಿದ್ರೆ ಸಾಲದು. ಇಡೀ ಕರ್ನಾಟಕ ಬಂದ್ ಆಗಬೇಕು. ನಾವು ಕನ್ನಡ ‌ಹೋರಾಟಗಾರರಿಗೆ ಸಾಥ್ ನೀಡಬೇಕಾ ಅಥವಾ ರಾಜಕೀಯ ಪಕ್ಷಕ್ಕೆ ಸಾಥ್ ನೀಡಬೇಕಾ..? ಮುಖ್ಯಮಂತ್ರಿ ಚಂದ್ರು ಅವರಿಗೆ ಬೆಂಬಲ ನೀಡಬೇಕಾ. ನಾವೆಲ್ಲಾ ಒಟ್ಟಾಗಿ ಸೇರಿ ಕರ್ನಾಟಕ ಬಂದ್ ಮಾಡೋಣ ಅಂದರೆ ಅವರು ಒಪ್ಪುತ್ತಿಲ್ಲ ಎಂದು ತಿಳಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಮ್ಮು ಕಾಶ್ಮೀರ ಮೇಘಸ್ಫೋಟದಲ್ಲಿ 33ಮಂದಿ ಸಾವು: ಅತ್ಯಂತ ದುರಂತ ಸುದ್ದಿ, ದ್ರೌಪದಿ ಮುರ್ಮು

79ನೇ ಸ್ವಾತಂತ್ರ್ಯ ದಿನಾಚರಣೆ: ನಾಳೆ ರಾಷ್ಟ್ರ ರಾಜಧಾನಿ ಹವಾಮಾನದಲ್ಲಿ ಭಾರೀ ಬದಲಾವಣೆ

ರಾಹುಲ್ ಗಾಂಧಿ ಸಂವಿಧಾನವನ್ನೇ ಓದಿಲ್ಲ: ಕಿರಣ್‌ ರಿಜಿಜು ಆಕ್ರೋಶ

ಪತಿ ಸಾವಿಗೆ ನ್ಯಾಯ ಸಿಕ್ಕಿದ್ದಕ್ಕೆ ಯೋಗಿಯನ್ನು ಕೊಂಡಾಡಿದ್ದೆ ತಪ್ಪಾಯ್ತು, ಎಸ್‌ಪಿ ಶಾಸಕಿ ಪಕ್ಷದಿಂದಲೇ ಹೊರಕ್ಕೆ

ಆಪರೇಷನ್ ಸಿಂಧೂರ್‌ ಕಾರ್ಯಚರಣೆಯ ಕೆಚ್ಚೆದೆಯ 9 ವೀರರಿಗೆ ವೀರ ಚಕ್ರ ಪ್ರಶಸ್ತಿ

ಮುಂದಿನ ಸುದ್ದಿ
Show comments