Select Your Language

Notifications

webdunia
webdunia
webdunia
webdunia

ಇಂದು ಸ್ವಗ್ರಾಮದಲ್ಲಿ ಸಚಿವ ಮಹದೇವಪ್ರಸಾದ್ ಅಂತ್ಯ ಸಂಸ್ಕಾರ

ಸಹಕಾರಿ ಸಚಿವ
ಮೈಸೂರು , ಬುಧವಾರ, 4 ಜನವರಿ 2017 (09:28 IST)
ಸಹಕಾರಿ ಮತ್ತು ಸಕ್ಕರೆ ಸಚಿವರಾಗಿದ್ದ ಎಚ್.ಎಸ್.ಮಹದೇವಪ್ರಸಾದ್ ಅವರು ಹೃದಯಾಘಾತದಿಂದ ಮಂಗಳವಾರ ನಿಧನರಾಗಿದ್ದು, ಇಂದು ಅವರ ಸ್ವಗ್ರಾಮವಾದ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಅಂತ್ಯ ಸಂಸ್ಕಾರ ನೆರವೇರಲಿದೆ. 
ಮಹದೇವಪ್ರಸಾದ್ ಅವರ ತೋಟದಲ್ಲಿ ಅಂತ್ಯಕ್ರಿಯೆಗೆ ಸಕಲ ವ್ಯವಸ್ಥೆ ಮಾಡಲಾಗಿದ್ದು, ಜಿಲ್ಲಾಡಳಿತವೇ ಮುಂದೆ ನಿಂತ ಗುರು ಹಿರಿಯರ ಮಾರ್ಗದರ್ಶನದಲ್ಲಿ ಅಂತ್ಯಕ್ರಿಯೆಗೆ ಸಿದ್ಧತೆ ನಡೆಸುತ್ತಿದೆ. 
 
ಸಚಿವರ ಅಕಾಲಿಕ ಮರಣದ ಸುದ್ದಿ ತಿಳಿಯುತ್ತಿದ್ದಂತೆ ಗುಂಡ್ಲುಪೇಟೆ ತಾಲೂಕಿನ ಹಾಲಹಳ್ಳಿ ಗ್ರಾಮದಲ್ಲಿ ಶೋಕದ ವಾತಾಪರಣ ನಿರ್ಮಾಣವಾಗಿದ್ದು, ಚಾಮರಾಜಪೇಟೆಯಲ್ಲಿ ಇಂದು ಅಘೋಷಿತ ಬಂದ್ ಘೋಷಿಸಲಾಗಿದೆ.
 
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪದಲ್ಲಿರುವ ಖಾಸಗಿ ರೆಸಾರ್ಟ‌್‌ನಲ್ಲಿ ತಂಗಿದ್ದ ಸಹಕಾರ-ಸಕ್ಕರೆ ಸಚಿವ ಸಚಿವ ಎಚ್.ಸಿ.ಮಹದೇವಪ್ರಸಾದ್ ಅವರು, ಮಂಗಳವಾರ ಮುಂಜಾನೆ ಹೃದಯಘಾತದಿಂದ ವಿಧಿವಶರಾಗಿದ್ದರು. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ತಾಕತ್ತಿದ್ರೆ ನನ್ನನ್ನು ಬಂಧಿಸಿ: ಪ್ರಧಾನಿ ಮೋದಿಗೆ ಮಮತಾ ಬ್ಯಾನರ್ಜಿ ಸವಾಲ್