ನಾನು ಯಾರನ್ನೂ ದೂರಲ್ಲ, ಕಾಲ ಎಲ್ಲವನ್ನು ಬದಲಿಸುತ್ತದೆ ಎಂದು ಜೆಡಿಎಸ್ ಮುಖಂಡ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ನಾಗಮಂಗಲ ಕ್ಷೇತ್ರದ ಜೆಡಿಎಸ್ ಶಾಸಕ ಚೆಲುವರಾಯ ಸ್ವಾಮಿ ಸುದ್ದಿಗಾರರೊಂದಿಗೆ ಮಾತನಾಡಿ, ನನಗೆ ಅವಕಾಶ ಕಲ್ಪಿಸಿ ಇಲ್ಲಿಯವರೆಗೆ ತಂದವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಜೆಡಿಎಸ್ ಪಕ್ಷಕ್ಕೆ ನಾನು ಸದಾ ಚಿರಋುಣಿಯಾಗಿದ್ದೇನೆ ಎಂದು ತಿಳಿಸಿದ್ದಾರೆ.
ನಾನು ಮನೆ ಕಟ್ಟಿಸಿದ್ದು ಕುಮಾರಸ್ವಾಮಿಯವರಿಗೆ ನೋವು ತಂದಿದೆ ಎಂದು ಕೇಳಿದ್ದೇನೆ. ಒಂದು ವೇಳೆ ಅವರಿಗೆ ನೋವಾಗಿದ್ದರೆ ನಾನು ಚಿಕ್ಕ ಮನೆಯಲ್ಲಿಯೇ ವಾಸಿಸುತ್ತಿದ್ದೆ ಎಂದು ವ್ಯಂಗ್ಯವಾಡಿದ್ದಾರೆ.
ಜೆಡಿಎಸ್ ಪಕ್ಷಕ್ಕೆ ನನ್ನಿಂದ ತೀರ ಚಿಕ್ಕ ಕೊಡುಗೆ ದೊರೆತಿದೆ. ರಾಜಕೀಯ ಜೀವನದಲ್ಲಿ ಎಂದೂ ಅಹಂಕಾರದ ಮಾತನಾಡಿಲ್ಲ ನನ್ನ ಬಗ್ಗೆ ನಾಯಕರು ಯಾಕೆ ಆ ರೀತಿ ಮಾತನಾಡುತ್ತಾರೋ ಗೊತ್ತಿಲ್ಲ. ಜೆಡಿಎಸ್ ವರಿಷ್ಠರ ಹೇಳಿಕೆಯಿಂದ ಬೇಸರವಾಗಿದೆ ಎಂದು ಹೇಳಿದ್ದಾರೆ.
ಎಚ್ಡಿಕೆಗೆ ನೋವಾಗಿದೆ ಎಂದು ಕೇಳಿ ಬೇಸರವಾಗಿದೆ, ನನ್ನಿಂದಲೇ ಪಕ್ಷ ಬೆಳಗುತ್ತದೆ ಎಂದು ನಾನು ಹೇಳಿಲ್ಲ, ಈಗಲು ಸಹ ಎಚ್ಡಿಕೆ ನಮ್ಮ ನಾಯಕರು ಎಂದು ಘೋಷಿಸಿದ್ದಾರೆ.
ಜೆಡಿಎಸ್ನಿಂದ ನೋವು ನಲಿವು ಎಲ್ಲವನ್ನು ಕಂಡಿದ್ದೇನೆ. ನಾನು ಯಾವತ್ತೂ ವರಿಷ್ಠರ ವಿರೋಧವಾಗಿ ಮಾತನಾಡಿಲ್ಲ. ಕೆಲ ವಿಷಯಗಳಲ್ಲಿ ಭಿನ್ನಾಭಿಪ್ರಾಯ ಸಹಜ. ದೇವೇಗೌಡ, ಕುಮಾರಸ್ವಾಮಿಯವರಷ್ಟು ಕೀಳಾಗಿ ಮಾತನಾಡಲು ನನಗೆ ಸಾಧ್ಯವಿಲ್ಲ. ಎಂದು ಜೆಡಿಎಸ್ ಶಾಸಕ ಚೆಲುವರಾಯ ಸ್ವಾಮಿ ಹೇಳಿದ್ದಾರೆ.
ಎಚ್ಡಿಕೆ ಮತ್ತು ಜೆಡಿಎಸ್ ನಾಯಕರ ಭಿನ್ನಮತ ಬಹಿರಂಗವಾಗಿದ್ದು ಯಾವ ರೀತಿ ಅಂತ್ಯ ಕಾಣುತ್ತದೆ ಎನ್ನುವುದನ್ನು ಕಾದುನೋಡಬೇಕಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆಪ್ ಡೌನ್ಲೋಡ್ ಮಾಡಿಕೊಳ್ಳಿ.