ಜೀವನದಿ ಕಾವೇರಿ ತೀರ್ಥೋದ್ಬವಕ್ಕೆ ಸಮಯ ನಿಗದಿ

Webdunia
ಭಾನುವಾರ, 17 ಸೆಪ್ಟಂಬರ್ 2017 (12:09 IST)
ಕೊಡಗು: ಜೀವನದಿ ಕಾವೇರಿಯ ಹುಟ್ಟಿದ ದಿನ ಎಂದೇ ಕರೆಯಲ್ಪಡುವ ಪವಿತ್ರ ತೀರ್ಥೋದ್ಬವ ಈ ಬಾರಿ ಅಕ್ಟೋಬರ್ 17ರಂದು ಅಪರಾಹ್ನ ಜರುಗುಲಿದೆ.

ದೇವಾಲಯದ ಮುಖ್ಯಸ್ಥರ ಪ್ರಕಾರ ಅಕ್ಟೋಬರ್ 17 ರಂದು ಸಲ್ಲುವ ಶುಭ ತುಲಾ ಲಗ್ನದಲ್ಲಿ"ಶ್ರೀ ಮೂಲ ಕಾವೇರಿ ತೀರ್ಥೋಧ್ಬವ ಪುಣ್ಯ ಕಾಲ"ದಲ್ಲಿ ಉಗಮಸ್ಥಾನ ತಲಕಾವೇರಿಯಲ್ಲಿ ಸರಿಯಾಗಿ ಮಧ್ಯಾಹ್ನ 12.33ಕ್ಕೆ ಆಗಲಿದೆ. ಕೊಡಗಿನ ಜಾತ್ರೆ ಎಂದು ಕರೆಸಿಸಿಕೂಳುವ ತೀರ್ಥೋಧ್ಬವದ ಮುನ್ನ ಕಾರ್ಯಕ್ರಮಗಳು ಸೆಪ್ಟೆಂಬರ್ 29ರಿಂದಲೇ ಆರಂಭಗೊಳ್ಳಲಿದ್ದು, ಬೆಳಗ್ಗೆ 8.45ಕ್ಕೆ ತುಲಾ ಲಗ್ನದಲ್ಲಿ 'ಪತಾಯಕ್ಕೆ ಅಕ್ಕಿ' ಹಾಕಲಾಗುತ್ತದೆ. ಅಕ್ಟೋಬರ್ 4ರಂದು  ವೃಶ್ಚಿಕ ಲಗ್ನದಲ್ಲಿ 'ಆಜ್ಞಾ ಮುಹೂರ್ತ', 14 ರಂದು  ಧನುರ್ ಲಗ್ನದಲ್ಲಿ 'ಅಕ್ಷಯ ಪಾತ್ರೆ ಇಡುವುದು', ಕುಂಭಾ ಲಗ್ನದಲ್ಲಿ 'ಕಾಣಿಕೆ ಡಬ್ಬ' ಇಡುವುದು, ಹಾಗೂ 17ರಂದು ತೀರ್ಥೋಧ್ಬವ ಜರುಗಲಿದೆ.

ಅಕ್ಟೋಬರ್ 17 ರಿಂದ ನವೆಂಬರ್ 17ರಂದು ನಡೆಯುವ ಕಿರು ಸಂಕ್ರಮಣದವರೆಗೂ ಶ್ರೀ ಕ್ಷೇತ್ರದಲ್ಲಿ ಹಬ್ಬದ ವಾತಾವರಣವಿರಲಿದೆ. ಈ ಸಂದರ್ಭದಲ್ಲಿ ಪಿಂಡ ಪ್ರಧಾನ, ಕಾವೇರಿ ದರ್ಶನ, ಪುಣ್ಯ ಸ್ನಾನಗಳು ನಡೆಯಲಿದೆ. ಈ ಸಂದರ್ಭ ಕಾವೇರಿ ನದಿ ಹರಿಯುವ ಪ್ರಮುಖ ಸ್ಥಳಗಳಾದ ಮೈಸೂರು, ಮಂಡ್ಯ, ರಾಮನಗರ, ಬೆಂಗಳೂರು ಸೇರಿದಂತೆ ತಮಿಳುನಾಡಿನ ಭಕ್ತರು ತಂಡೋಪತಂಡವಾಗಿ ಆಗಮಿಸಿ ಕಾವೇರಿ ಮಾತೆಯ ಕೃಪೆಗೆ ಪಾತ್ರವಾಗಲಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕರಾವಳಿ ಜಿಲ್ಲೆಗಳಲ್ಲಿ ಮಳೆ: ಗುಡುಗು ಸಹಿತ ಮಳೆ, ಮನೆಗಳಿಗೆ ಹಾನಿ, ಅಪಾರ ನಷ್ಟ

ಇಂಧನ ಬಳಕೆ ತಗ್ಗಿಸಲು ಮೋದಿ ಕರೆ ಬೆನ್ನಲ್ಲೇ ಅಮಿತ್ ಶಾ ಮಾಡಿದ್ದೇನು

ಕಾಂಗ್ರೆಸ್ ದಲಿತರು, ಸಂವಿಧಾನ, ಡಾ.ಅಂಬೇಡ್ಕರರ ಪರ ಇಲ್ಲ: ಛಲವಾದಿ ನಾರಾಯಣಸ್ವಾಮಿ

ತಾನೂ ತೆಗೆದುಕೊಂಡ ನಿರ್ಧಾರಕ್ಕೆ ಟೀಕೆ ಬರುತ್ತಿದ್ದ ಹಾಗೇ ದಿಟ್ಟ ನಿರ್ಧಾರ ಕೈಗೊಂಡ ಸಿಎಂ ವಿಜಯ್

ಪತ್ನಿ ಕಾಪಾಡಿ ಎಂದು ಕಿರುಚುವಾಗಲೇ ಯಮುನಾ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಪತಿ Video

ಮುಂದಿನ ಸುದ್ದಿ
Show comments