ಯಾರು ತಪ್ಪು ಮಾಡಿದರೆ ಅವರಿಗೆ ಶಿಕ್ಷೆ ಆಗಬೇಕು,ನಾವು ಮಾಡಿದ್ರೆ ನಮ್ಮಗೂ ಶಿಕ್ಷೆ ಆಗಲಿ- ಡಿಕೆಶಿ

Webdunia
ಸೋಮವಾರ, 21 ನವೆಂಬರ್ 2022 (13:48 IST)
ವೋಟರ್ ಐಡಿ ಹಗರಣದ ಬಗ್ಗೆ ಭಾರತೀಯ ಚುನಾವಣಾ ಆಯೋಗಕ್ಕೆ ದೂರು ನೀಡುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.ನಾವು ನಾಳೆಗೆ ಟೈಮ್  ಕೇಳಿದ್ದೇವೆ.ನಮಗೆ‌ ಚಿಫ್ ಎಲೆಕ್ಷನ್ ಕಮಿಷನರೇ ಬೇಕು.ನಮ್ಮ  ಹತ್ರಾ ಅನೇಕ ಮಾಹಿತಿ ಇದಾವೆ.ಪೊಲೀಸ್ ಅಧಿಕಾರಿಗಳು ಏನು ಮಾಡ್ತಾ ಇದಾರೆ ಎಂದು ಗಮನಿಸುತ್ತಿದ್ದೇವೆ.ನಮ್ಮ‌ಕಡೆ ಏನೇನು MOU ಗಳಿವೆ, ಡಿಟೈಲ್ ತನಿಖೆ‌ ಮಾಡಿದ್ದೇವೆ.ಮ್ಯಾಪಿಂಗ್ ಯಾವ ರೀತಿ ಮಾಡಿದ್ದಾರೆ, ಅದಕ್ಕೆ ಅನುಮತಿ ಇದೆಯಾ?ಮಾಧ್ಯಮಗಳಲ್ಲಿ ಎಲೆಕ್ಷನ್ ಅಫೀಸರ್ ಒಪ್ಪಿಕೊಂಡಿದ್ದಾರೆ.ನಮಗೆ ಹೈರ್ ಅಫೀಸರಿಂದ ಆದೇಶ ಬಂತು.ಆದೇಶ ಬಂದಿದ್ದಕ್ಕೆ ನಮ್ಮ ಕರ್ತವ್ಯ ಮಾಡಿದ್ದೇವೆ ಎಂದು ಹೇಳಿದ್ದಾರೆ.ಯಾರು ಹೈರ್ ಅಫೀಸರ್, ಯಾರೋ ಒಬ್ಬರು ,ಇಬ್ಬರು.15000 ಸಾವಿರಕ್ಕೆ ಕೆಲಸಕ್ಕೆ ಬಂದಿರುವರನ್ನು ಅರೆಸ್ಟ್ ಮಾಡುವುದಲ್ಲ.ಯಾರು ಕಿಂಗ್ ಪಿನ್ ಇದ್ದಾರೆ, ಯಾರು ಮಂತ್ರಿಗಳು ಇದ್ದಾರೆ, ಯಾರು ಶಾಸಕರು ಇದಾರೆ.ಇವರೆಲ್ಲ ದಾಖಲಾತಿಗಳು ನಮಗೆ ಕಡೆ ಇದಾವೆ ಎಂದು ಡಿಕೆ ಶಿವಕುಮಾರ್ ಹೇಳಿದ್ದಾರೆ.
 
ಶಾಸಕರ ರೆಕಮೆಂಡ್ ಮಾಡಿರುವ ದಾಖಲಾತಿ, ಶಾಸಕರು, ಮಂತ್ರಿಗಳು ಪೋನ್ ನಲ್ಲಿ ಮಾತಾಡಿದ್ದು ದಾಖಲೆ ಇದೆ.ರಾಜರಾಜೇಶ್ವರಿ, ಮಲ್ಲೇಶ್ವರಂ, ಬೊಮ್ಮನಹಳ್ಳಿ, ಮಹಾದೇವಪ್ಪರ 28 ಕ್ಷೇತ್ರದ‌ AROಗಳ ಮೇಲೆ ಕೇಸ್ ದಾಖಲು ಆಗಬೇಕು.ಪೊಲೀಸ ರು ಏನು ಮಾಡ್ತಾರೆ ಎಂದು ವೇಟ್ ಮಾಡ್ತಾ ಇದೇವಿ.ವೋಟರ್ಸ್ ಮಾನಿಪುಲೇಷನ್ ವಿಚಾರವಾಗಿ ನಾನು ಅದರ ಬಗ್ಗೆ ಈಗ ಮಾತಾಡಲ್ಲ‌.ಯಾವ ರೀತಿ ಮುಚ್ಚಲು ನೋಡ್ತಾ ಇದಾರೆ.ಹಿಂದೆ ರೇಪ್ ‌ಕೇಸ್, 40% ಕಮಿಷನ್ ಸೇರಿದಂತೆ ಅನೇಕ ಪ್ರಕರಣಗಳ ಸಿಎಂ ಯಡಿಯೂರಪ್ಪ, ಕ್ಲೀನ್ ಹ್ಯಾಂಡ್ ಇದಾರೆ‌ಎಂದು ಹೇಳಿದ್ದರು.ಅವರ ಮಂತ್ರಿಗಳನ್ನು ರಕ್ಷಣೆ ಮಾಡಲು ,ಬಿ ರಿಪೋರ್ಟ್ ಬರೆಸಿದ್ದಾರೆ.ಇದನ್ನು ಕೂಡ ಮುಚ್ಚಿಹಾಕುವ ಅನುಮಾನವಿದೆ ಎಂದು ಡಿಕೆ ಶಿವಕುಮಾರ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟ ಪ್ರಕರಣ, ಸಾವಿನ ಸಂಖ್ಯೆ 15ಕ್ಕೆ ಏರಿಕೆ

ಕುಟುಂಬದಲ್ಲಿ ಕಲಹದ ನಡುವೆ ವಿರೋಧ ಪಕ್ಷದ ನಾಯಕನಾದ ತೇಜಸ್ವಿ ಯಾದವ್‌

ಮೆಕ್ಕಾ ಯಾತ್ರಿಕರ ಬಸ್ ದುರಂತ: ಪರಿಹಾರ ಘೋಷಿಸಿದ ತೆಲಂಗಾಣ ಸರ್ಕಾರ

6 ವರ್ಷಗಳ ಬಳಿಕ ಭಾರತ, ಚೀನಾ ನಡುವೆ ಏರ್ ಇಂಡಿಯಾ ಹಾರಾಟ ಪುನರಾರಂಭ

ನನ್ನ ವಿರುದ್ಧದ ರಾಜಕೀಯ ಪ್ರೇರಿತ ತೀರ್ಪು: ಬಾಂಗ್ಲಾ ಮಾಜಿ ಪ್ರಧಾನಿ ಹಸೀನಾ

ಮುಂದಿನ ಸುದ್ದಿ
Show comments