Publish Date: Tue, 09 May 2023 (19:30 IST)
Updated Date: Tue, 09 May 2023 (19:22 IST)
ನಾಳೆ ಸಮಯಕ್ಕೆ ತಕ್ಕಂತೆ ಸರ್ಕಾರಿ ಬಸ್ ಸಿಗೋದು ಡೌಟ್ .ತಮ್ಮ ತಮ್ಮ ಊರಿಗೆ ತೆರಳುವ ಮುಂಚೆ ಈ ಸುದ್ದಿ ನೋಡಿ.ಇಂದು ಮತ್ತು ನಾಳೆ ಸರ್ಕಾರಿ ಬಸ್ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.ಮತದಾನದ ದಿನ ಊರಿಗೆ ತೆರಳುವವರು ಒಂದು ದಿನ ಮುಂಚಿತವಾಗಿ ಹೋಗೋದೇ ಒಳಿತು.ಕೆ ಎಸ್ ಆರ್ ಟಿ ಸಿ ಹಾಗೂ ಬಿ ಎಂ ಟಿ ಸಿ ಸಂಚಾರದಲ್ಲಿ ವ್ಯತ್ಯಯ ಉಂಟಾಗಲಿದೆ.ರಾಜ್ಯ ವಿಧಾನಸಭಾ ಚುನಾವಣೆ ಹಿನ್ನೆಲೆ ವಾಹನಗಳ ಕಾರ್ಯಾಚರಣೆಯಲ್ಲಿ ವ್ಯತ್ಯಾಯ ಉಂಟಾಗಲಿದ್ದು,ಚುನಾವಣಾ ಕಾರ್ಯದ ಸಲುವಾಗಿ ಬಸ್ ನಿಯೋಜನೆ ಮಾಡಲಾಗಿದೆ.ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆಗೆ ಕೆ ಎಸ್ ಆರ್ ಟಿ ಸಿ ಬಸ್ ನಿಯೋಜನೆ ಮಾಡಲಾಗಿದೆ.ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಮಾಹಿತಿ ನೀಡಲಾಗಿದೆ.ಅಲ್ಲದೇ ಸಾರ್ವಜನಿಕರು ಸಹಕರಿಸಲು ಕೆ ಎಸ್ ಆರ್ ಟಿ ಸಿ ಇಂದ ಮನವಿ ಮಾಡಲಾಗಿದೆ.