Webdunia - Bharat's app for daily news and videos

Install App

ಆ ವಿಷಯದಲ್ಲಿ ಈ ಜಿಲ್ಲೆಗೆ ಮೊದಲ ಸ್ಥಾನ

Webdunia
ಶುಕ್ರವಾರ, 10 ಜುಲೈ 2020 (15:09 IST)
ಮೊದಲ‌ ಬಾರಿಗೆ ಸಮುದಾಯದ ಜನರಿಗಾಗಿ ನೇರ ಉದ್ಯೋಗ ಸಾಲ ಯೋಜನೆ ಆರಂಭಿಸಿದ್ದು, ಫಲಾನುಭವಿಗಳ‌ ಪಟ್ಟಿಯಲ್ಲಿ ರಾಜ್ಯದ ಈ ಜಿಲ್ಲೆ ಪ್ರಥಮ‌ ಸ್ಥಾನದಲ್ಲಿದೆ.

ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಕಳೆದ ವರ್ಷ ಆರ್ಯ ವೈಶ್ಯ ಸಮುದಾಯ ಅಭಿವೃದ್ಧಿ ನಿಗಮವನ್ನು ಆರಂಭಿಸಿದ್ದು ಸಮುದಾಯದ ಅಭಿವೃದ್ಧಿಗೆ ಕೊಡುಗೆ ನೀಡಿದ್ದಾರೆ. ಮೊದಲ‌ ಬಾರಿಗೆ ಸಮುದಾಯದ ಜನರಿಗಾಗಿ ನೇರ ಉದ್ಯೋಗ ಸಾಲ ಯೋಜನೆ ಆರಂಭಿಸಿದ್ದು, ಫಲಾನುಭವಿಗಳ‌ ಪಟ್ಟಿಯಲ್ಲಿ ಕೊಪ್ಪಳ ಜಿಲ್ಲೆ ಪ್ರಥಮ‌ ಸ್ಥಾನದಲ್ಲಿದೆ ಎಂದು ನಿಗಮದ ಅಧ್ಯಕ್ಷ ಡಿ.ಎಸ್.ಅರುಣ್ ಹೇಳಿದ್ದಾರೆ.

ಅರಿವು ಶೈಕ್ಷಣಿಕ ಸಾಲ ಯೋಜನೆಯನ್ನು ಜಾರಿಗೊಳಿಸಿದ್ದು, ಸಮುದಾಯದ ವಿದ್ಯಾರ್ಥಿಗಳ ವೃತ್ತಿಪರ ಶಿಕ್ಷಣಕ್ಕೆ ಶೇಕಡಾ 2 ರ ಬಡ್ಡಿ ದರದಲ್ಲಿ ಲಕ್ಷ ಮಿತಿಗೆ ನಿಗಮವು ಸಾಲ ನೀಡುತ್ತದೆ. ನಾಲ್ಕು ವರ್ಷಗಳ ನಂತರ ಮರುಪಾವತಿ ಅವಧಿ ಆರಂಭವಾಗುತ್ತದೆ.
ಇನ್ನೊಂದು ಮಹತ್ವದ ಯೋಜನೆ ಎಂದರೆ‌ ನೇರ ಉದ್ಯೋಗ ಸಾಲ ಯೋಜನೆ. ಈ ಯೋಜನೆಯಡಿ ಸಮುದಾಯದ ಜನರ ಉದ್ಯೋಗಕ್ಕಾಗಿ ಶೇಕಡಾ 4 ರ ಬಡ್ಡಿ ದರದಲ್ಲಿ ಲಕ್ಷ ರೂ. ಮಿತಿಗೆ ಸಾಲ ನೀಡಲಾಗುತ್ತದೆ ಎಂದಿದ್ದಾರೆ.

ಈ‌ ಯೋಜನೆಯ ಪ್ರಯೋಜನ ಪಡೆಯಲು ರಾಜ್ಯಾದ್ಯಂತ 1,650 ಜನರು ಅರ್ಜಿ ಸಲ್ಲಿಸಿದ್ದರು. ಇದರಲ್ಲಿ 1,150 ಜನ ಫಲಾನುಭವಿಗಳನ್ನು‌ ಆಯ್ಕೆ ಮಾಡಲಾಗಿದೆ. ಕೊಪ್ಪಳ ಜಿಲ್ಲೆಯ 392 ಅರ್ಜಿಗಳ ಪೈಕಿ 97 ಜನ ಫಲಾನುಭವಿಗಳನ್ನು ಲಾಟರಿ ಮೂಲಕ ಆಯ್ಕೆ ಮಾಡಲಾಗಿದೆ ಎಂದಿದ್ದಾರೆ.  


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments