ಕಾಂಗ್ರೆಸ್ ಗ್ಯಾರಂಟಿಗಳಲ್ಲಿ ಸ್ಪಷ್ಟತೆ ಇಲ್ಲ : ಬೊಮ್ಮಾಯಿ ಕಿಡಿ

Webdunia
ಶನಿವಾರ, 3 ಜೂನ್ 2023 (10:45 IST)
ಬೆಂಗಳೂರು : ಪ್ರಣಾಳಿಕೆಯಲ್ಲಿ ಹೇಳಿದ 5 ಗ್ಯಾರಂಟಿಗಳನ್ನು ಕಾಂಗ್ರೆಸ್ ಸರ್ಕಾರ ಇಂದು ಘೋಷಣೆ ಮಾಡಿದ್ದು, ಈ ಸಂಬಂಧ ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಅವರು ಕಿಡಿಕಾರಿದ್ದಾರೆ.

ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಕಾಂಗ್ರೆಸ್ನ ಗ್ಯಾರಂಟಿಗಳಲ್ಲಿ ಸ್ಪಷ್ಟತೆ ಇಲ್ಲ ಎಂದು ಹೇಳಿದ್ದಾರೆ. ರಾಜ್ಯಕ್ಕೆ ಕೇಂದ್ರ ಸರ್ಕಾರ 5 ಕೆ.ಜಿ ಕೊಡುತ್ತೆ. ಇವರು ಕೊಡೋದು ಈಗ 5 ಕೆಜಿ. ಅನ್ನ ಭಾಗ್ಯದಲ್ಲಿ 10 ಕೆ.ಜಿ ಅಂತಾ ಹೇಳ್ತಿಲ್ಲ. 10 ಕೆಜಿ ಆಹಾರ ಧಾನ್ಯ ಅಂತಾ ಸಿಎಂ ಹೇಳ್ತಾರೆ. ಈ 10 ಕೆಜಿಯಲ್ಲಿ ರಾಗಿ, ಜೋಳ ಮತ್ತು ಗೋಧಿ ಕೊಡ್ತೀರಾ..?. ಇದರ ಬಗ್ಗೆ ಸ್ಪಷ್ಟತೆ ಕೊಡ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

2,000 ರೂ. ಮನೆ ಯಜಮಾನಿಗೆ ಕೊಡೋದರಲ್ಲಿಯೂ ಮಹಾಮೋಸ ಅಡಗಿದೆ. ಆನ್ ಲೈನ್ ಅರ್ಜಿಯಲ್ಲಿ ಅರ್ಧ ತೆಗೆದು ಹಾಕ್ತಾರೆ. ನಾವು ನಿಜವಾಗಲೂ ಬಡವರಿಗೆ ಅನುಕೂಲ ಮಾಡುತ್ತೇವೆ ಅಂದರೆ ಎಂಪವರ್ ಮೆಂಟ್ ಇರಬೇಕು. ಆನ್ ಲೈನ್ ಅರ್ಜಿ ಕರೆದು ಅರ್ಧ ತೆಗೆದು ಮೋಸ ಮಾಡ್ತಾರೆ.

ಬಹಳ ಸರಳವಾಗಿ ಮಾಡಬಹುದಿತ್ತು. ಪಿಡಿಓ ಗಳು ಇದ್ದಾರೆ ಅವರ ಮುಖಾಂತರ ಕೊಡಿಸಬಹುದಿತ್ತು. ಈವಾಗ ಆಗಸ್ಟ್ನಿಂದ ಕೊಡುತ್ತೇವೆ ಅಂತಾರೆ. ಜೂನ್, ಜುಲೈದು ಸೇರಿಸಿಕೊಡ್ತಾರಾ ಸ್ಪಷ್ಟತೆ ಇಲ್ಲ. ಜೂನ್, ಜುಲೈದು ಸೇರಿಸಿ ಕೊಟ್ಟರೆ ಪ್ರಾಮಾಣಿಕತೆ ಅಂತಾ ಹೇಳಬಹುದಿತ್ತು. ಈ ತಿಂಗಳಿಂದಲೇ ಕೊಡಬಹುದಿತ್ತು. ಆದರೆ ಎರಡು ತಿಂಗಳು ಯಾಮಾರಿಸ್ತಾ ಇದ್ದಾರೆ ಎಂದು ಹೇಳಿದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಧಾನಸೌಧದ ಎದುರು ಕಿತ್ತಾಟ, 11ಮಂದಿ ಅರೆಸ್ಟ್‌

ತಿರುಮಲ ಲಡ್ಡು ಕಲಬೆರಕೆ ಪ್ರಕರಣ, ಮತ್ತೊಂದು ಬೆಚ್ಚಿಬೀಳಿಸುವ ಅಂಶ

ಕಾಂಗ್ರೆಸ್ ಎರಡೂವರೆ ವರ್ಷ ಪೂರೈಸಿದ್ದೇ ಸಾಧನೆ: ವಿಜಯೇಂದ್ರ

ಸಿದ್ದರಾಮಯ್ಯ ಸಿಎಂ ಸ್ಥಾನ ಬಿಟ್ಟುಕೊಡಲ್ಲ, ಡಿಕೆಶಿ ಆ ಸ್ಥಾನದಲ್ಲಿ ಮುಂದುವರೆಯಲು ಬಿಡಲ್ಲ: ಪ್ರಹ್ಲಾದ್ ಜೋಶಿ

ರೈಲಿನ ಎಸಿ ಕೋಚ್‌ನಲ್ಲಿ ಕೆಟಲ್‌ನಲ್ಲಿ ನೂಡಲ್ಸ್ ಮಾಡಿದ ಮಹಿಳೆಗೆ ಇದೀಗ ಢವಢವ

ಮುಂದಿನ ಸುದ್ದಿ
Show comments