Publish Date: Fri, 18 Sep 2020 (20:53 IST)
Updated Date: Fri, 18 Sep 2020 (20:55 IST)
ರಾಜ್ಯದಲ್ಲಿ ಸಿಎಂ ಸ್ಥಾನದಿಂದ ಬಿ.ಎಸ್.ಯಡಿಯೂರಪ್ಪನವರನ್ನು ಬದಲಾವಣೆ ಮಾಡುವ ಪ್ರಶ್ನೆಯೇ ಇಲ್ಲ.
ಹೀಗಂತ ಡಿಸಿಎಂ ಲಕ್ಷ್ಮಣ ಸವದಿ ಹೇಳಿದ್ದಾರೆ.
ರಾಜ್ಯ ಸರಕಾರದ ಅವಧಿ ಪೂರ್ಣ ಆಗುವವರೆಗೂ ಯಡಿಯೂರಪ್ಪನವರೇ ಸಿಎಂ ಆಗಿರ್ತಾರೆ.
ಗಾಳಿಸುದ್ದಿಗಳಿಗೆ ಮಹತ್ವ ಕೊಡಬಾರದು ಎಂದು ಡಿಸಿಎಂ ಹೇಳಿದ್ದಾರೆ.
ಇನ್ನು, ಲಿಂಗಾಯತ ಮುಖಂಡ ಇಲ್ಲವೇ ಉತ್ತರ ಕರ್ನಾಟಕ ಭಾಗದ ಶಾಸಕ ಅಥವಾ ಸಂಸದರನ್ನು ಸಿಎಂ ಆಗಿ ನೇಮಕ ಮಾಡುವ ವಿಷಯದ ಬಗ್ಗೆ ಚರ್ಚೆ ನಡೆದಿಲ್ಲ ಎಂದಿದ್ದಾರೆ.