Select Your Language

Notifications

webdunia
webdunia
webdunia
webdunia

ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ದೇವಸ್ಥಾನಕ್ಕೆ ಕನ್ನ

ಬೆಂಗಳೂರಿನಲ್ಲಿ ಹೆಚ್ಚಾಗ್ತಿದೆ ದೇವಸ್ಥಾನಕ್ಕೆ ಕನ್ನ
bangalore , ಮಂಗಳವಾರ, 6 ಡಿಸೆಂಬರ್ 2022 (12:31 IST)
ರಾತ್ರಿ ಪೂಜೆ ಮಾಡಿ ಹೋದ್ರೆ ಬೆಳಗ್ಗೆ ಬಂದಾಗ ಎಲ್ಲಾ‌ ದೇವಸ್ಥಾನದಲ್ಲಿ ಎಲ್ಲ ಮಂಗಮಾಯವಾಗಿರುತ್ತೆ.ಅಂದಹಾಗೆ ಮತ್ತೊಂದು ದೇವಸ್ಥಾನಕ್ಕೆ ಕನ್ನ ಖದೀಮರು ಕನ್ನ ಹಾಕಿದಾರೆ. 
 
ಸಿಲಿಕಾನ್ ಸಿಟೀಲಿ ದೇವರನ್ನೇ ಖದೀಮರು ಬಿಡ್ತಿಲ್ಲ . ಖದೀಮರ ಮೈನ್ ಸ್ಪಾಟ್ ದೇವಸ್ಥಾನವಾಗಿದೆ.ದೇವಸ್ಥಾನಕ್ಕೆ ಕನ್ನ ಹಾಕಿದ್ರೆ ಸಕ್ಸಸ್ ಅನ್ನೋ ಲೆಕ್ಕಾಚಾರ ಕಳ್ಳರದ್ದು.ಇದೀಗ ಬಸವೇಶ್ವರ ನಗರದ ಸತ್ಯಗಣಪತಿ ದೇವಸ್ಥಾನದಲ್ಲಿ ಬೆಳ್ಳಿ ದೀಪಗಳು, ದೇವರ ಆಯುಧ, ಕೀರೀಟ, ಬೆಳ್ಳಿ ಪಾದ ಎಲ್ಲಾ ಕಳ್ಳತನ ಮಾಡಿದ್ದಾರೆ.
 
ದೇವಸ್ಥಾನ ದ ಹುಂಡಿ ಕದಿಯಲು ಮಾತ್ರ ಆಗದೇ ಕಳ್ಳ ವಿಫಲವಾಗಿದ್ದಾನೆ.ಮಾರುವೇಷದಲ್ಲಿ ದೇವಸ್ಥಾನಕ್ಕೆ ಆಗಮಿಸಿದ ಖದೀಮ
ಕಳ್ಳತನದ ಹಿಂದಿನ ದಿನ ದೇವಸ್ಥಾನ ದಲ್ಲಿ ಪೂಜೆ ಮಾಡಿಸಿದ.ಅಮವಾಸ್ಯೆ ಹಿನ್ನೆಲೆ ದೇವಸ್ಥಾನದಲ್ಲಿ ಪೂಜೆಯಲ್ಲಿ 150ರಿಂದ 200 ಜನ ಭಾಗಿಯಾಗಿದ್ರು.ಮರುದಿನವೇ ದೇವಸ್ಥಾನದ ಹಿಂದಿನ ಬಾಗಿಲಿನಿಂದ ದೇವಸ್ಥಾನಕ್ಕೆ ಕಳ್ಳ ಎಂಟ್ರಿಕೊಟ್ಟಿದ್ದಾನೆ.ಕಳ್ಳ ನ ಕೈಚಳಕ ಸಿಸಿಟಿವಿಯಲ್ಲಿ ಸೆರೆಯಾಗಿದ್ದು ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.ಪೊಲೀಸರಿಂದ ಕಳ್ಳನಿಗಾಗಿ ತೀವ್ರ ಶೋಧ ಮುಂದುವರೆಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಗರದಲ್ಲಿ ಆಕ್ಟೀವ್ ಆಗಿದೆ ನಕಲಿ ಡೈಮಂಡ್ ಗ್ಯಾಂಗ್