ಬಿಜೆಪಿಯಲ್ಲಿ ಸಮರ್ಥ ಅಭ್ಯರ್ಥಿಗಳ ಕೊರತೆಯಿದೆ ಎಂದ ಸಂಸದ

Webdunia
ಭಾನುವಾರ, 24 ಮಾರ್ಚ್ 2019 (19:00 IST)
ಕಾಂಗ್ರೆಸ್ ಪಕ್ಷವನ್ನ ಬಳಸಿಕೊಂಡು ಈಗ ಬಿಸಾಕಿರುವುದು ಸರಿಯಲ್ಲ ಅಂತ ಕೈ ಪಡೆ ತೊರೆದ ಹಿರಿಯ ನಾಯಕರ ವಿರುದ್ಧ ಸಂಸದರೊಬ್ಬರು ಗರಂ ಆಗಿ ಹೇಳಿಕೆ ನೀಡಿದ್ದಾರೆ.

ಯಾದಗಿರಿಯ ಕಾಂಗ್ರೆಸ್ ಕಚೇರಿಯಲ್ಲಿ ಸಂಸದ ಬಿ.ವಿ ನಾಯಕ ಹೇಳಿಕೆ ನೀಡಿದ್ದು, ಡಾ. ಎ.ಬಿ ಮಾಲಕರೆಡ್ಡಿ ಕಾಂಗ್ರೆಸ್ ತೊರೆದ ಬಿಜೆಪಿ ಸೇರಿದ ವಿಚಾರವಾಗಿ ಮಾತನಾಡಿದ್ರು. ಕಾಂಗ್ರೆಸ್ ನ ಹಿರಿಯ ನಾಯಕರು ಪಕ್ಷ ತೊರೆದೊರುವುದು ದುರಾದೃಷ್ಟಕರ. 70, 80 ರ ಇಳಿವಯಸ್ಸಿನಲ್ಲಿ ಪಕ್ಷ ಬಿಡುವಂಥದು ತಪ್ಪು ನಿರ್ಧಾರ. ಪಕ್ಷವನ್ನು ಬಳಸಿಕೊಂಡು ಬಿಸಾಕುವುದು ನೋವಿನ ಸಂಗತಿ ಎಂದರು.

ಪಕ್ಷ ಬಿಟ್ಟು ಹೋದವರನ್ನ ಬಿಜೆಪಿ ಯಾವ ರೀತಿ ನಡೆಸಿಕೊಳ್ಳುತ್ತಿದೆ ಎನ್ನುವುದು ಅವರ ಸ್ಥಿತಿ ನೋಡಿದ್ರೆ ಗೊತ್ತಾಗುತ್ತದೆ.
ಯಾವುದೋ ಒಂದು ಸಣ್ಣ ಕಾರಣಕ್ಕೆ ಪಕ್ಷ ಬಿಡುವುದು ಸರಿಯಲ್ಲ.  ಹೋಗಿದವರಿಂದ ಪಕ್ಷಕ್ಕೆ ಯಾವುದೇ ನಷ್ಟವಿಲ್ಲ ಎಂದೂ ಹೇಳಿದರು.

ಬಿಜೆಪಿ ಪಕ್ಷದಲ್ಲಿ ಯಾವುದೇ ಸಮರ್ಥ ನಾಯಕರಿಲ್ಲ, ಹೀಗಾಗಿ ಒಂದೆರಡು ಬಾರಿ ಶಾಸಕರಾದವರನ್ನು ಲೋಕಸಭೆಗೆ ನಿಲ್ಲಿಸುತ್ತಿದ್ದಾರೆ ಎಂದು ಉಮೇಶ್ ಜಾಧವ ಬಗ್ಗೆ ಪರೋಕ್ಷ ಟೀಕೆ ಮಾಡಿದ್ರು.

ಬಿಜೆಪಿ ಪಕ್ಷದಲ್ಲಿ ಲೋಕಸಭೆ ನಿಲ್ಲಲು ಅಭ್ಯರ್ಥಿಗಳು ಇಲ್ಲ ಹೀಗಾಗಿ, ಕಾಂಗ್ರೆಸ್ ನಾಯಕರನ್ನು ಸೆಳೆಯಲಾಗುತ್ತಿದೆ. ಡಾ.‌ ಎ.ಬಿ ಮಾಲಕರೆಡ್ಡಿ ಪಕ್ಷ ಬಿಟ್ಟಿರುವುದರಿಂದ ಯಾವುದೇ ತೊಂದರೆ ಇಲ್ಲ, ವೈಯಕ್ತಿಕ ಸಮಸ್ಯೆ ಆಗಬಹುದು ಅಂತ ಯಾದಗಿರಿಯಲ್ಲಿ ರಾಯಚೂರು ಲೋಕಸಭೆ ಸಂಸದ ಹಾಗೂ ಅಭ್ಯರ್ಥಿ ಬಿ.ವಿ. ನಾಯಕ ಹೇಳಿದ್ದಾರೆ.


ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ದೆಹಲಿ ಸ್ಫೋಟದ ಆರೋಪಿಗಳೊಂದಿಗೆ ಯಾವುದೇ ಸಂಪರ್ಕವಿಲ್ಲ: ಅಲ್ ಫಲಾಹ್ ಸ್ಪಷ್ಟನೆ

ಭಯೋತ್ಪಾದಕರನ್ನು ತಯಾರಿಸುವ ಸಾಫ್ಟ್ವೇರ್ ಯಾವುದು: ಸಿಟಿ ರವಿ

ರಾಹುಲ್ ಗಾಂಧಿ ಕಾಲು ಇಟ್ಟ ಕಡೆ ಕಾಂಗ್ರೆಸ್‌ಗೆ ಸೋಲು: ಅಶೋಕ್‌ ಲೇವಡಿ

ಪಿತೂರಿ ಹಿಂದಿರುವವರನ್ನು ಮಟ್ಟಹಾಕುದ್ದೇವೆ: ದೆಹಲಿ ಸ್ಫೋಟದ ಕುರಿತು ಮೋದಿ ವಾರ್ನಿಂಗ್‌

ಬಿಹಾರ ಚುನಾವಣೆಯಲ್ಲಿ ಗೆಲ್ಲಕ್ಕೇ ಬಿಜೆಪಿ ದೆಹಲಿ ಸ್ಪೋಟ ಮಾಡಿರಬಹುದು: ಬಸವರಾಜ ರಾಯರೆಡ್ಡಿ

ಮುಂದಿನ ಸುದ್ದಿ
Show comments