Select Your Language

Notifications

webdunia
webdunia
webdunia
webdunia

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವು

ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆ ಚಿಕಿತ್ಸೆ ಫಲಕಾರಿಯಾಗದೇ ಸಾವು
ಮೈಸೂರು , ಸೋಮವಾರ, 22 ಮೇ 2017 (18:08 IST)
ಕೌಟುಂಬಿಕ ಕಲಹದಿಂದ ನೊಂದು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದ ಮಹಿಳೆಯೊಬ್ಬರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿರುವ ಘಟನೆ ಮೈಸೂರಿನಲ್ಲಿ ನಡೆದಿದೆ.
 
ಮೃತ ಮಹಿಳೆ ರಕ್ಷಿತಾ ಎಂದು ತಿಳಿದುಬಂದಿದೆ. ಕೆಎಸ್‍ಆರ್ ಟಿಸಿ ಚಾಲಕ ಕಂ ನಿರ್ವಾಹಕ ಶ್ರೀನಿವಾಸ್‍ನನ್ನು ವಿವಾಹವಾಗಿದ್ದ ರಕ್ಷಿತಾಳೊಂದಿಗೆ ಪತಿ ಕಲಹ ಆರಂಭಿಸಿ ತಾಳಿ ಕಿತ್ತು ಆಕೆಯನ್ನು ಮನೆಯಿಂದ ಹೊರ ಹಾಕಿದ್ದ ಎನ್ನಲಾಗಿದೆ.  ಇದರಿಂದ ಮನನೊಂದ ರಕ್ಷಿತಾ ಗಂಡನ ಮನೆ ಮುಂದೆಯೇ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದರು.
 
ಆಕೆಯನ್ನು ರಕ್ಷಿಸಿದ್ದ ನೆರೆಹೊರೆಯವರು ಕೆಆರ್ ಆಸ್ಪತ್ರೆಗೆ ದಾಖಲು ಮಾಡಿದ್ದರು. ಶೇ.95ರಷ್ಟು ಸುಟ್ಟು ತೀವ್ರವಾಗಿ ಗಾಯಗೊಂಡಿದ್ದ ರಕ್ಷಿತಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಕಲ್ಲಿದ್ದಲು ಹಗರಣ: ಎಚ್‌.ಸಿ.ಗುಪ್ತಾ ಸೇರಿ ಮೂವರಿಗೆ 2 ವರ್ಷ ಜೈಲು