Webdunia - Bharat's app for daily news and videos

Install App

ರಾಜಧಾನಿಯಲ್ಲಿ ರೌಡಿ ಗ್ಯಾಂಗ್‌ಗಳ ಅಂದರ್

Webdunia
ಶನಿವಾರ, 23 ಅಕ್ಟೋಬರ್ 2021 (20:36 IST)
ಬೆಂಗಳೂರು: ರಾಜಧಾನಿಯಲ್ಲಿ ಎರಡು ರೌಡಿ ಗ್ಯಾಂಗ್‌ಗಳನ್ನು ಸಿಸಿಬಿ ಪೊಲೀಸರು ಅಂದರ್ ಮಾಡಿದ್ದಾರೆ.    
 
ರೌಡಿಸಂ ರಾಬರಿ ಮಾಡುತ್ತಿದ್ದ ಆರೋಪದ ಮೇಲೆ ಜೆ.ಜೆ.ನಗರದ ರೌಡಿಶೀಟರ್ ಇಮ್ರಾನ್ ಗ್ಯಾಂಗ್ ಮತ್ತು ವಿದ್ಯಾರಣ್ಯಪುರದ ರೌಡಿ ನಿಶಾಂತ್ ಗ್ಯಾಂಗ್ ಅನ್ನು ಪೊಲೀಸರು ಬಂಧಿಸಿದ್ದಾರೆ.
 
ಇಮ್ರಾನ್ ಗ್ಯಾಂಗ್‌ನ ನವಾಜ್, ಇರ್ಷಾದ್, ಇಮ್ರಾನ್ ಪಾಷಾ, ಮಹಮದ್ ಅಫ್ತಾಬ್ ಬಂಧನಕ್ಕೊಳಗಾಗಿದ್ದು. ಆರೋಪಿಗಳು ಒಂಟಿಯಾಗಿ ತಿರುಗಾಡುವವರನ್ನು ಲಾಂಗ್ ಇಟ್ಟು ಹೆದರಿಸಿ ದರೋಡೆ ಮಾಡುತ್ತಿದ್ದರು. ಇಮಾನ್ 2020ರಲ್ಲಿ ನಡೆದಿದ್ದ ಪಾದರಾಯನಪುರ ಗಲಭೆಯ ಪ್ರಮುಖ ಅರೋಪಿಯಾಗಿದ್ದ. ಗಲಭೆ ಬಳಿಕ ತಲೆಮರಿಸಿಕೊಂಡಿದ್ದ. ನಂತರ ಅರೆಸ್ಟ್ ಮಾಡಲಾಗಿತ್ತು. ಆದರೆ ಬೇಲ್ ಪಡೆದು ಹೊರ ಬಂದು ಮತ್ತೆ ರೌಡಿಸಂ ಮಾಡುತ್ತಿದ್ದ ಎಂದು ಕೇಂದ್ರ  ಅಪರಾಧ ಪತ್ತೆ ದಳದ ಜಂಟಿ ಆಯುಕ್ತ ಸಂದೀಪ್ ಪಾಟೀಲ್ ತಿಳಿಸಿದ್ದಾರೆ. 
 
ವಿದ್ಯಾರಣ್ಯಪುರದ ರೌಡಿ ನಿಶಾಂತ್ ಗ್ಯಾಂಗ್ ಕಟ್ಟಿದ್ದ. ಏರಿಯಾದಲ್ಲಿನ ಸಿವಿಲ್ ವಿಚಾರಗಳಿಗೆ ಕೈಹಾಕಿ, ಸೆಟಲ್ ಮೆಂಟ್ ಮಾಡುವ ಕೆಲಸ ಮಾಡುತ್ತಿದ್ದ. ನಿಶಾಂತ್ ಗ್ಯಾಂಗ್ ಸಹಚರರಾದ ಶರತ್, ಅಜಯ್, ಯತೀಶ್ ಎನ್ನುವವರನ್ನು ಸದ್ಯ ಬಂಧಿಸಲಾಗಿದೆ. ಸಿಸಿಬಿಯ ಒಸಿಡಬ್ಲೂ ವಿಭಾಗದ  ಅಧಿಕಾರಿಗಳು ಎರಡು ರೌಡಿಗ್ಯಾಂಗ್‌ನ ಅರೆಸ್ಟ್ ಮಾಡಿದ್ದಾರೆ ಎಂದು ಸಂದೀಪ್ ಪಾಟೀಲ್ ಮಾಹಿತಿ ನೀಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಾ ರಘುವಂಶಿ ಹತ್ಯೆಗೆ ಬಳಿಸಿದ್ದ ಮಚ್ಚು ವಶಕ್ಕೆ, ಪ್ರಾಣ ಉಳಿಸಿಕೊಳ್ಳಲು ಕೊನೆ ಕ್ಷಣದವರೆಗೂ ಹೊರಡಿದ್ದ ಉದ್ಯಮಿ

ಹರಿಯಾಣ ಮಾಡೆಲ್‌ ಗಂಟಲು ಸೀಳಿದ ಸ್ಥಿತಿಯಲ್ಲಿ ಮೃತದೇಹ ಪತ್ತೆ, ಸಹೋದರಿ ಹೇಳಿದ್ದು ಹೀಗೇ

ಇರಾನ್, ಇಸ್ರೇಲ್ ಯುದ್ಧ ಇಫೆಕ್ಟ್: ಭಾರತದಲ್ಲಿ ಇದರ ಬೆಲೆ ಹೆಚ್ಚೋದು ಗ್ಯಾರಂಟಿ

Video, ನಿನ್ನ ಗುರುತೇ ಸಿಗದ ಹಾಗೇ ಮಾಡುತ್ತೇನೆ: ಗ್ಯಾಸ್ ಸ್ಟೇಷನ್ ಸಿಬ್ಬಂದಿಗೆ ಮಹಿಳೆ ಗನ್ ಪಾಯಿಂಟ್‌

ಪ್ರಧಾನಿ ಮೋದಿ ಬಗ್ಗೆ ಅವಹೇಳನಕಾರಿ ಪೋಸ್ಟ್ ಮಾಡಿದ ವ್ಯಕ್ತಿ ವಿರುದ್ಧ ಬಿಜೆಪಿ ದೂರು

ಮುಂದಿನ ಸುದ್ದಿ
Show comments