Webdunia - Bharat's app for daily news and videos

Install App

ಬಸ್ ನಲ್ಲಿ ಕಳೆದುಕೊಂಡಿದ ಹಣ ವಸ್ತುವನ್ನ ಪ್ರಯಾಣಿಕರಿಗೆ ಹಿಂತಿರುಗಿಸಿದ ಸಂಚಾರ ಅಧಿಕ್ಷರು

Webdunia
ಭಾನುವಾರ, 1 ಆಗಸ್ಟ್ 2021 (18:54 IST)
ದಿನಾಂಕ:- 30/07/2021 ರಂದು ಶುಕ್ರವಾರ ಸಮಯ ಸುಮಾರು 10:35 ರಲ್ಲಿ ಇಬ್ಬರು ಪ್ರಯಾಣಿಕರು ವಾಹನ ಸಂಖ್ಯೆ  KA11 F 0465 ರಲ್ಲಿ  ಮಂಡ್ಯ ದಿಂದ ಬೆಂಗಳೂರಿನ ಮೈಸೂರು ರಸ್ತೆ ಬಸ್ ನಿಲ್ದಾಣಕ್ಕೆ ಪ್ರಯಾಣ ಮಾಡಿರುತ್ತಾರೆ.  ಈ ಪ್ರಯಾಣಿಕರು ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಶಸ್ತ್ರಚಿಕಿತ್ಸೆಗಾಗಿ ಬಂದಿರುತ್ತಾರೆ. ಇವರು ಬಸ್ ನ್ನು ಇಳಿದು ಆಟೋ ದಲ್ಲಿ ಹೋಗುವಾಗ ಮಾರ್ಗ ಮದ್ಯೆ ತಮ್ಮ ಹಣದ ಮತ್ತು ಸ್ಕ್ಯಾನಿಂಗ್ ರಿಪೋರ್ಟ್  ನೆನಪಾಗಿ ಮರಳಿ ಅದೇ ಆಟೋ ದಲ್ಲಿ ಬಸ್‌ ನಿಲ್ದಾಣಕ್ಕೆ ಬಂದು
 ಗೋಳಾಡುತ್ತಿದ್ದರು.  ಸ್ಕ್ಯಾನಿಂಗ್ ರಿಪೋರ್ಟ್ ಮತ್ತು 50500 ₹ ಹಣವನ್ನು ಬಸ್‌ ನಲ್ಲಿ  ಬಿಟ್ಟು ಹೋಗಿದ್ದೇವೆ.  ಇದನ್ನು ದಯವಿಟ್ಟು ಹುಡುಕಿಸಿ ಕೊಡಿ ಎಂದು ನಿಲ್ದಾಣ ದಲ್ಲಿ ಕರ್ತವ್ಯ ದಲ್ಲಿದ್ದ  ಲಕ್ಷ್ಮೇ ಗೌಡ ಸಹಾಯಕ ಸಂಚಾರ ಅಧೀಕ್ಷಕ ರವರ ಬಳಿ  ಬಂದು ಗೋಳಾಡಿರುತ್ತಾರೆ.
ನಂತರದಲ್ಲಿ ತಕ್ಷಣವೇ ಮಂಡ್ಯ ಘಟಕದ  ಘಟಕ ವ್ಯವಸ್ಥಾಪಕರೊಂದಿಗೆ ದೂರವಾಣಿ ಮಾತನಾಡಿ ಬಸ್‌ ಚಾಲಕ ಮಹೇಶ್ ಹಾಗೂ ನಿರ್ವಾಹಕ ಸೋಮಶೇಖರಪ್ಪ ಅವರ ಮೊಬೈಲ್ ಸಂಖ್ಯೆ ಯನ್ನು ಪಡೆದು ಮಾತನಾಡಿ ಬಸ್ಸಿನ 5 ನೆಯ ಸೀಟಿನಲ್ಲಿ ಸ್ಕ್ಯಾನಿಂಗ್ ರಿಪೋರ್ಟ್ ಗಳು ಇರುವುದಾಗಿ ತಿಳಿಸಿ ಅದನ್ನು ಹುಡುಕುವಂತೆ ಹೇಳಿ ಅದರೊಂದಿಗೆ 50500 ₹ ಹಣವು ಇರುವುದಾಗಿ ತಿಳಿಸಿ ಈಗಲೇ  ತನಿಖೆ ಮಾಡಿ ನೋಡು ಎಂದು  ತಿಳಿಸಿರುತ್ತಾರೆ. ನಿರ್ವಾಹಕ ಸೋಮಶೇಖರಪ್ಪ   ಹಣ  ಮತ್ತು ಸ್ಕ್ಯಾನಿಂಗ್ ರಿಪೋರ್ಟ್ ಇರುವುದಾಗಿ ತಿಳಿಸಿರುತ್ತಾರೆ. ನಂತರ ಚನ್ನಪಟ್ಟಣ ಘಟಕ  ವ್ಯವಸ್ಥಾಪಕರಿಂದ ಪೂರ್ಣ ಪ್ರಮಾಣದಲ್ಲಿ ಹಣವನ್ನು ಲೆಕ್ಕಾಚಾರ ಮಾಡಿಸಿ ಮಂಡ್ಯದಲ್ಲಿ ಪ್ರಯಾಣಿಕರ ಮಗಳಿಗೆ ಹಣವನ್ನು ಮತ್ತು ಸ್ಕ್ಯಾನಿಂಗ್ ರಿಪೋರ್ಟ್   ಕೊಡಿಸುವ ಕೆಲಸ ಮಾಡಿರುತ್ತಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments