Webdunia - Bharat's app for daily news and videos

Install App

ಸರ್ಕಾರದ ವಿರುದ್ಧ ವಿಭಿನ್ನ ರೀತಿಯಲ್ಲಿ ಅಭಿಯಾನಕ್ಕಿಳಿದ ರಾಜ್ಯ ಕಾಂಗ್ರೆಸ್

Webdunia
ಶುಕ್ರವಾರ, 25 ನವೆಂಬರ್ 2022 (20:56 IST)
ಚುನಾವಣೆ ಹತ್ತಿರವಾಗುತ್ತಿದ್ದಂತೆ ಜನರಿಗೆ 40 % ಕಮಿಷನ್ ಅಭಿಯಾನ ತಲುಪಿಸಲು ಕಾಂಗ್ರೆಸ್ ಪ್ಲ್ಯಾನ್ ಮಾಡಿದೆ.ಹೀಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್  ವಿಭಿನ್ನ ರೀತಿಯಲ್ಲಿ ಅಭಿಯಾನ ಮಾಡಿದೆ.ಕಾಂಗ್ರೆಸ್ ಅಧಿಕೃತ ಸಾಮಾಜಿಕ ಜಾಲತಾಣ ಬಿಟ್ಟು ಬೇರೆ ಖಾತೆಗಳ ಮೂಲಕ ಅಭಿಯಾನ ಆರಂಭಿಸಿದೆ.ಬೇರೆ ಅಕೌಂಟ್ ಗಳ ಮೂಲಕ 40% ಕಮಿಷನ್ ಅಭಿಯಾ 40% ಸರ್ಕಾರ ಎಂದು ಫೇಸ್ ಬುಕ್ ಪೇಜ್ ರಚನೆ ಮಾಡಿದೆ.ಈ ಪೇಜ್ ಗೆ ಲಕ್ಷಾಂತರ ಫಾಲೋ ವರ್ಸ್ ಇದ್ದಾರೆ.ಆದರೆ ಇದು ಕಾಂಗ್ರೆಸ್ ಅಭಿಯಾನ ಎಂದು ಬಹಳ ಸ್ಪಷ್ಟವಾಗಿ ತಿಳಿಯುತ್ತದೆ.
 
40% ಸರ್ಕಾರ ಫೇಸ್ ಬುಕ್ ಫೇಜ್ ಕಾಂಗ್ರೆಸ್ ಹೆಲ್ಪ್ ಲೈನ್ ನಂಬರ್ ಇದೆ.ಸೆಪ್ಟೆಂಬರ್ 13ರಂದು ಡಿಕೆಶಿ,ಸಿದ್ದು ಸುದ್ದಿಗೋಷ್ಟಿ ನಡೆಸಿ ಬಿಡುಗಡೆ ಮಾಡಿದ್ದ ನಂಬರ್ 8447704040 ಇದೆ. ನಂಬರ್ ಹೆಲ್ಪ್ ಲೈನ್ ಎಂದು ಕೈನಾಯಕರು ಬಿಡುಗಡೆ ಮಾಡಿದರು.ಇದೀಗ ಆ ನಂಬರ್ ಇರುವ 40%  ಸರ್ಕಾರ ಎಂಬ ಫೇಜ್ ನಿಂದ ವಿಭಿನ್ನ ರೀತಿಯ ಅಭಿಯಾನ ಶುರುವಾಗಿದೆ.
 
40% ಕಮಿಷನ್ ರೋಡಲ್ಲಿ ಯಮ ಗುಂಡಿ, ಯಾಮಾರಿ ಬಿದ್ರೆ ಮುಗೀತು ಜೀವನ ಬಂಡಿ ಎಂದು ಪೋಸ್ಟರ್ ನಲ್ಲಿ ಸಿಎಂ ಬೊಮ್ಮಾಯಿ ಅವರನ್ನು ಯಮನಂತೆ ಕಾಂಗ್ರೆಸ್ ಬಿಂಬಿಸಿದೆ.ವಿವಿಧ ಸಿನಿಮಾಗಳ ಹೆಸರಿನ ಮೂಲಕ ಸಿಎಂ ಹಾಗೂ ಸಚಿವರ  ವಿರುದ್ಧ ಅಭಿಯಾನ ನಡೆದಿದ್ದು, ಕಿಲಾಡಿ ಜೋಡಿ ಎಂದು ಸಿಎಂ ಹಾಗೂ ಸಚಿವ ಅಶ್ವಥ್ ನಾರಾಯಣ್ ಪೋಸ್ಟರ್ ರಚನೆಯಾಗಿದೆ.ಸರ್ವರ್ ಸೋಮಣ್ಣ ಎಂದು ಸಚಿವ ವಿ ಸೋಮಣ್ಣ  ಪೋಸ್ಟರ್  ಕೂಡ ರಚನೆಯಾಗಿದೆ.ಚಪಲ ಚನ್ನಿಗರಾಯ ಎಂದು ರಮೇಶ್ ಜಾರಕಿಹೊಳಿಯ ಪೋಸ್ಟರ್ ರಚನೆಯಾಗಿದೆ.ಅಡುಗೆ ಭಟ್ಟರಂತೆ ಸಚಿವ ಬಿಸಿ ನಾಗೇಶ್ ಪೋಸ್ಟರ್ ರಚನೆಯಾಗಿದೆ.ಹೀಗೆ ವಿಭಿನ್ನ ರೀತಿಯಲ್ಲಿ 40% ಸರ್ಕಾರ ಎಂಬ ಫೇಜ್ ಮೂಲಕ ಸರ್ಕಾರದ ವಿರುದ್ಧ ಅಭಿಯಾನ ಮಾಡಲಾಗಿದೆ.
 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಕಂಪ್ಯೂಟರ್ ಮುಂದೆ ಕೆಲಸ ಮಾಡುವವರು ಡಾ ಭುಜಂಗ ಶೆಟ್ಟಿ ನೀಡಿದ್ದ ಈ ಸಲಹೆ ಗಮನಿಸಿ

ವ್ಯಾಪಾರಿಗಳಿಗೆ ಲಕ್ಷ ಲಕ್ಷ ಜಿಎಸ್ ಟಿ ಕೇಂದ್ರವನ್ನು ದೂರಿದ ಸಿಎಂ, ಡಿಸಿಎಂ

ಆಷಾಢದಲ್ಲಿ ವಿರಹ ವೇದನೆ: ಈ ಸಂಜೆ ಯಾಕಾಗಿದೆ ಎಂದು ಪತ್ನಿಗಾಗಿ ಹಾಡಿದ ತೇಜಸ್ವಿ ಸೂರ್ಯ: ವಿಡಿಯೋ

ಡಿಕೆಶಿಗೆ ವೆಲ್ ಕಮ್ ಮಾಡದ ಸಿಎಂ ವಿವಾದ: ಇದೆಲ್ಲಾ ಬಿಜೆಪಿಯವರೇ ಮಾಡಿದ್ದು ಎಂದು ಸಿದ್ದರಾಮಯ್ಯ

Karnataka Weather: ಈ ವಾರವೂ ರಣ ಮಳೆ ಇರುತ್ತಾ ಇಲ್ಲಿದೆ ವಾರದ ಹವಾಮಾನ ವರದಿ

ಮುಂದಿನ ಸುದ್ದಿ
Show comments