Webdunia - Bharat's app for daily news and videos

Install App

ಪಾಕಿಸ್ತಾನಿ ನಿವಾಸಿಯ ಆಸ್ತಿ ಖರೀದಿಸಿ ಪೇಚಿಗೆ ಸಿಲುಕಿದ ಸಚಿವರ ಪುತ್ರ!

Webdunia
ಗುರುವಾರ, 9 ಆಗಸ್ಟ್ 2018 (18:45 IST)
ಪಾಕಿಸ್ತಾನ ನಿವಾಸಿಯೊಬ್ಬರ ಆಸ್ತಿಯನ್ನ ಸಚಿವರ ಪುತ್ರನೊಬ್ಬ ಖರೀದಿ ಮಾಡಿದ್ದು ವಿವಾದಕ್ಕೆ ಕಾರಣವಾಗಿದೆ.
ಸಚಿವ ವೆಂಕಟರಾವ್ ನಾಡಗೌಡ ಪುತ್ರ ಪಾಕಿಸ್ತಾನ ನಿವಾಸಿಯೊಬ್ಬರ ಆಸ್ತಿಯನ್ನ ಖರೀದಿ ಮಾಡಿರುವ ವಿಷಯ ಈಗ ವಿವಾದಕ್ಕೆ ಸಿಲುಕಿದೆ. ಬಹುಕೋಟಿ ಬೆಲೆಯ ಜಮೀನನ್ನು ಅಕ್ರಮವಾಗಿ ಕಬಳಿಕೆ ಮಾಡಿದ್ದು, ಈ ಬಗ್ಗೆ ಸರ್ಕಾರಕ್ಕೆ ಮಾಹಿತಿ ಇದ್ದರೂ ಸಹ ರಾಯಚೂರು ಜಿಲ್ಲಾಧಿಕಾರಿ ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಕೇಳಿಬಂದಿದೆ.

ಸಚಿವ ವೆಂಕಟರಾವ್ ನಾಡಗೌಡರ ಪುತ್ರ ಅಭಿಷೇಕ್ ನಾಡಗೌಡ ಸೇರಿದಂತೆ ನಾಲ್ವರು ಪ್ರಭಾವಿಗಳು ರಾಯಚೂರು ಸೀಮಾಂತರದ 84 ಎಕರೆ ಇನಾಂ ಜಮೀನನ್ನ ಲೂಟಿ ಮಾಡಿದ್ದಾರೆ. ರಾಯಚೂರು ಸೀಮಾಂತರದ ಸರ್ವೇ ನಂಬರ್ 1362, 1359/1 ಹಾಗೂ 1356/2ರಲ್ಲಿನ ಖಾಜಿ ಮೊಹಮ್ಮದ್ ಅಬ್ದುಲ್ ರಸೂಲ್ ಸಿದ್ದಿಕಿ ಎಂಬುವವರಿಗೆ ಸೇರಿದ ಒಟ್ಟು 84 ಎಕರೆ ಜಮೀನು ಇತ್ತು. ಅವರು ದೇಶ ವಿಭಜನೆಯ ಬಳಿಕ ಪಾಕಿಸ್ತಾನಕ್ಕೆ ವಲಸೆ ಹೋಗಿದ್ದಾರೆ. ಆಗ ಸರ್ಕಾರದ ವಶವಾಗಬೇಕಿದ್ದ ಭೂಮಿಯನ್ನು ಪ್ರಭಾವಿಗಳ ಜೊತೆ ಶಾಮೀಲಾದ ಅಧಿಕಾರಿಗಳು ಖಾಸಗಿ ಆಸ್ತಿಯನ್ನಾಗಿ ಮಾಡಿದ್ದಾರೆ. ಇದ್ರಲ್ಲಿ ಸಚಿವ ವೆಂಕಟರಾವ್ ನಾಡಗೌಡ ಪುತ್ರ ಅಭಿಷೇಕ್ ನಾಡಗೌಡ 21 ಎಕರೆ ಜಮೀನು ಕಬಳಿಕೆ ಮಾಡಿದ್ದಾರೆ. ಉಳಿದಂತೆ ಬಿಜೆಪಿ ಮುಖಂಡ ಕಡಗೋಲ ಆಂಜನೇಯ, ಕಾಂಗ್ರೆಸ್ ಮುಖಂಡರಾದ ಶಿವಾನಂದ ಚುಕ್ಕಿ, ಉದಯಕುಮಾರ್ ಹಾಗೂ ಬಸವರಾಜ ವಕೀಲ್ ಎಂಬುವವರು ಜಮೀನು ಕಬಳಿಕೆ ಮಾಡಿದ್ದಾರೆ.

ಇನ್ನು ಕಬಳಿಕೆ ಆಗಿರುವ ಜಮೀನು ವಶಕ್ಕೆ ಪಡೆಯುವಂತೆ ರಾಯಚೂರು ಜಿಲ್ಲಾಧಿಕಾರಿಗಳಿಗೆ ಕಲಬುರಗಿ ಪ್ರಾದೇಶಿಕ ಆಯುಕ್ತರ ಆದೇಶವಿದ್ದರೂ ಕಿಮ್ಮತ್ತಿಲ್ಲದಂತಾಗಿದೆ. ಆರು ತಿಂಗಳ ಹಿಂದೆಯೇ ಡಿಸಿಗೆ ಆದೇಶ ಬಂದಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎನ್ನಲಾಗಿದೆ.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments