Select Your Language

Notifications

webdunia
webdunia
webdunia
webdunia

ಮಾಜಿ ಸಿಎಂಗೆ ಮನವಿ ಕೊಡಲು ಬಿಡದ ಪೊಲೀಸರು

ಮಾಜಿ ಸಿಎಂಗೆ ಮನವಿ ಕೊಡಲು ಬಿಡದ ಪೊಲೀಸರು
ದಾವಣಗೆರೆ , ಭಾನುವಾರ, 13 ಅಕ್ಟೋಬರ್ 2019 (15:45 IST)
ಮಾಜಿ ಸಿಎಂ ಸ್ಥಳೀಯ ಮುಖಂಡರು ಮನವಿ ನೀಡಲು ಮುಂದಾಗಿರೋದಕ್ಕೆ ಪೊಲೀಸರು ಅಡ್ಡಿಪಡಿಸಿರೋ ಘಟನೆ ನಡೆದಿದೆ.

ದಾವಣಗೆರೆಗೆ ಮಾಜಿ ಸಿಎಂ ಸಿದ್ದರಾಮಯ್ಯ ಆಗಮಿಸಿದ್ದರು. ದಾವಣಗೆರೆ ಜಿಲ್ಲೆಯ ಹರಿಹರದಲ್ಲಿ ಇಂದಿರಾ ಕ್ಯಾಂಟಿನ್ ಉದ್ಘಾಟನೆಗೆ ಆಗಮಿಸಿದ್ದ ಸಿದ್ದರಾಮಯ್ಯರನ್ನ ಶಿವಮೊಗ್ಗ ಸರ್ಕಲ್ ನಿಂದ ಕಾರ್ಯಕ್ರಮದ ವೇದಿಕೆವರೆಗೆ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಸ್ವಾಗತ ಕೋರಲಾಯಿತು.

ಬಹುದಿನದಿಂದ ನೆನೆಗುದಿಗೆ ಬಿದ್ದಿದ್ದ ಇಂದಿರಾ ಕ್ಯಾಂಟೀನ್ ನನ್ನು ಮಾಜಿ ಸಿ ಎಂ‌ ಸಿದ್ದರಾಮಯ್ಯ ಉದ್ಘಾಟನೆ ಮಾಡಿದ್ರು.

ಆದರೆ, ಮಾಜಿ ಸಿ ಎಂ‌ ಸಿದ್ದರಾಮಯ್ಯ ಅವರಿಗೆ ಮನವಿ‌ ಕೊಡಲು ಮುಂದಾದ ಸ್ಥಳೀಯ ಮುಖಂಡರಿಗೆ ಪೊಲೀಸರು ಅಡ್ಡಿಪಡಿಸಿದ್ರು. ಮನವಿ‌ ಕೊಡಲು ಮುಂದಾಗಿದ್ದ ಡಿಎಸ್ ಎಸ್ ಮುಖಂಡ ಮಹಾಂತೇಶ್ ಗೆ ಅಡ್ಡಿ ಪಡಿಸಿದ ಪೊಲೀಸರು ಹೊರ ತಳ್ಳಿದ ಘಟನೆ ನಡೆಯಿತು.



Share this Story:

Follow Webdunia kannada

ಮುಂದಿನ ಸುದ್ದಿ

ಪತ್ನಿಯೇ ಗೆಳೆಯನ ಜೊತೆ ಲೈಂಗಿಕ ಕ್ರಿಯೆ ನಡೆಸಿದಳು : ಅಂಥ ವಿಡಿಯೋ ನೋಡಿದ ಗಂಡ ಮಾಡಿದ್ದೇನು?