Webdunia - Bharat's app for daily news and videos

Install App

ವಾಟ್ಸ್ ಆಪ್ ನಲ್ಲಿ ನಿತ್ಯ ಜೀವನದ ತತ್ತ್ವಜ್ಞಾನಗಳು!

Webdunia
ಗುರುವಾರ, 24 ಮಾರ್ಚ್ 2022 (21:02 IST)
ಸುಮ್ಮನೇ ಹಾಗೇ! ವಾಟ್ಸ್ ಆಪ್  ​​ಬಂದಿದ್ದೇ ಬಂದಿದ್ದು ಜನ ತಮ್ಮ ಜ್ಞಾನ, ತಿಳಿವಳಿಕೆಗಳನ್ನು ನೂರೆಂಟು ಜನಕ್ಕೆ ತಿಳಿಸುತ್ತಿರುತ್ತಾರೆ, ಹರಡುತ್ತಿರುತ್ತಾರೆ. ಎಲ್ಲರೂ ತಮ್ಮದೇ ಮಾರ್ಗದಲ್ಲಿ, ಸಾಮರ್ಥ್ಯದಲ್ಲಿ ತತ್ತ್ವಜ್ಞಾನಿಗಳು, ವಿಚಾರವಂತರೂ ಆಗಿದ್ದಾರೆ. ಮತ್ತು ತಮ್ಮ ಜ್ಞಾನ ಸಂಪತ್ತನ್ನು ಇತರರೊಂದಿಗೆ ಹಂಚಿಕೊಳ್ಳುತ್ತಿದ್ದಾರೆ. ನಿತ್ಯ ಜೀವನದಲ್ಲಿ ತತ್ತ್ವಜ್ಞಾನಗಳ ಹರಿವು ವಿಶಾಲವಾಗುತ್ತಿದೆ. ವಿಭಿನ್ನವಾಗುತ್ತಿದೆ! ಆದರೆ ಇದಕ್ಕೆ ಯಾವುದೇ ಆಧಾರ, ತರ್ಕಗಳ ಗೊಡವೆ ಇಲ್ಲ. ಸಿದ್ಧಸೂತ್ರಗಳು ಇಲ್ಲ. ಟೈಂಪಾಸ್​ಗೇ ಅಂದರೂನೂ ಜ್ಞಾನ ಎಲ್ಲಿದ್ದರೂ ಜ್ಞಾನವೆ ಅಲ್ಲವಾ!? ಅರಿತರೆ ಜೀವನ ಸುಖ ಸಮೃದ್ಧಿಯಾದೀತು.
ಒಂದಷ್ಟು ಉದಾಹರಣೆಗಳು ಇಲ್ಲಿವೆ ನೋಡಿ 
 
 ಕುಲ್ಫಿ ತಿ೦ದಾದ ಮೇಲೆ ಕಡ್ಡಿಯನ್ನು ನೆಕ್ಕುವುದು… ಇದನ್ನೇ ಲೋಭ ಎನ್ನಬಹುದು!
ಕಡ್ಡಿ ಬಿಸಾಡಿದ ಮೇಲೆ ಇನ್ನೊಬ್ಬರದ್ದು ಖಾಲಿಯಾಗದೇ ಅವರು ನೆಕ್ಕುವುದನ್ನು ನೋಡಿ ಇವರದ್ದು ಇನ್ನೂ ಖಾಲಿಯಾಗಿಲ್ಲವೆ ಅ೦ದುಕೊಳ್ಳುವುದುದು… ಅಸೂಯೆ ಎನ್ನಬಹುದು!
ಕುಲ್ಫಿ ತಿನ್ನುವಾಗ ಪೂರಾ ಕೆಳಗೆ ಬಿದ್ದು ಕಡ್ಡಿ ಮಾತ್ರ ಉಳಿದಾಗ ಮನಸ್ಸಲ್ಲಿ ಮೂಡುವ ಭಾವನೆಯನ್ನೇ… ಕ್ರೋಧ ಎನ್ನಬಹುದು!
ನಿದ್ದೆಯಿ೦ದ ಎಚ್ಚೆತ್ತ ಮೇಲೂ ಒಂದೆರಡು ಗಂಟೆ ಕಾಲ ಹಾಗೆಯೇ ಮೊಸಳೆಯ೦ತೆ ಬಿದ್ದು ಕೊ೦ಡಿರುವುದನ್ನು… ಆಲಸ್ಯ ಎನ್ನಬಹುದು!
ಹೋಟೆಲಿನಲ್ಲಿ ಚೆನ್ನಾಗಿ ತಿ೦ದಾದ ಮೇಲೆ ಬಾಯಿ ತು೦ಬಾ ಸೋಂಪ್ ಕಾಳು ಮತ್ತು ಸಕ್ಕರೆ ಮಿಶ್ರಣವನ್ನು ಹಾಕಿಕೊಂಡಾದ ಮೇಲೂ ಅಲ್ಲೇ ಇರುವ ಪೇಪರ್ ನಲ್ಲಿ ತು೦ಬಿಕೊಳ್ಳುವುದನ್ನು… ದುರಾಸೆ ಎನ್ನದೆ ವಿಧಿಯಿಲ್ಲ!
ಮನೆಗೆ ಬೀಗ ಜಡಿದು ಎರಡು ಮೂರು ಬಾರಿ ಎಳೆದು ನೋಡುವುದನ್ನೇ… ಭಯ ಎನ್ನಲಾಗುತ್ತದೆ!
ವಾಟ್ಸಪ್ ನಲ್ಲಿ ಮೆಸೇಜ್ ಮಾಡಿದ ಮೇಲೆ ಪದೆ ಪದೆ ನೀಲಿ ಗೆರೆ (ಅಂದರೆ ನೋಡಿದ್ದಾರಾ ಅಂತಾ ಚೆಕ್ ಮಾಡುವುದು) ನೋಡುವುದನ್ನೇ.. ಕೆಟ್ಟ ಕುತೂಹಲ ಅಥವಾ ಕೆಟ್ಟ ಉತ್ಸುಕತೆ ಎನ್ನಬಹುದಲ್ಲವಾ!
ಪಾನಿಪುರಿ ತಿನ್ನುವಾಗ, ಪಾನಿಗಾಗಿ ಪಾನಿಪುರಿ ಅ೦ಗಡಿಯವನನ್ನು ಅಣ್ಣಾ ಎ೦ದು ಗೋಗರೆಯುವುದನ್ನೇ… ಶೋಷಣೆ ಅನ್ನಬಹುದಲ್ಲವಾ?
ಕಾಫಿ ಕುಡಿದು ಕೊನೆ ಸಿಪ್ ವರೆಗೂ ಸುರ್ ಸುರ್ ಅ೦ತ ಹೀರುವುದನ್ನೇ… ಮೃಗತೃಷ್ಣಾ ಎನ್ನಲು ಅಡ್ಡಿಯಿಲ್ಲ.
ಮಾರ್ಕೆಟ್ ನಲ್ಲಿ ಬಾಳೆಹಣ್ಣು ಕೊಳ್ಳುತ್ತಿರುವಾಗ ಅಲ್ಲೇ ಎಳೆ೦ಟು ದ್ರಾಕ್ಷಿಯನ್ನು ಬಾಯಿಗೆ ತುರುಕಿಕೊಂಡು ಸುಮ್ಮ ಸುಮ್ಮನೆ ರೇಟು ಎಷ್ಟು ಎ೦ದು ಕೇಳುವುದನ್ನು… ಅಕ್ಷಮ್ಯ ಅಪರಾಧ ಎನ್ನಬಹುದು!

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮುತ್ತಪ್ಪ ರೈ ಮಗ ರಿಕ್ಕಿ ಮೇಲೆ ಗುಂಡಿನ ದಾಳಿ: ಇಂಚಿಂಚೂ ಮಾಹಿತಿ ಬಿಚ್ಚಿಟ್ಟ ಪ್ರಕಾಶ್ ರೈ

Bappanadu Viral Video: ಬಪ್ಪನಾಡು ದುರ್ಗಾಪರಮೇಶ್ವರಿ ರಥ ಏಕಾಏಕಿ ಕುಸಿತ: ಮೇಲಿದ್ದ ಅರ್ಚಕರನ್ನು ದೇವಿಯೇ ಕಾಪಾಡಿದ್ಳು

Kannada Viral Video: ಬೆಂಗಳೂರಲ್ಲಿ ಬದುಕಬೇಕೆಂದರೆ ಹಿಂದಿ ಕಲಿ: ಕನ್ನಡಿಗ ಆಟೋ ಚಾಲಕನಿಗೆ ಹಿಂದಿವಾಲ ಧಮ್ಕಿ

Arecanut price today: ಅಡಿಕೆಗೂ ಇಲ್ಲ, ಕಾಳುಮೆಣಸಿಗೂ ಇಲ್ಲ, ಇಂದಿನ ಬೆಲೆ ಎಷ್ಟಾಗಿದೆ ನೋಡಿ

DK Shivakumar: ಡಿಕೆ ಶಿವಕುಮಾರ್ ಭೇಟಿಯಾದ ಯಡಿಯೂರಪ್ಪ ಪುತ್ರ ಸಂಸದ ರಾಘವೇಂದ್ರ: ವಿವಾದ ಮಾಡ್ಬೇಡಿ ಎಂದು ರಿಕ್ವೆಸ್ಟ್

ಮುಂದಿನ ಸುದ್ದಿ
Show comments