Webdunia - Bharat's app for daily news and videos

Install App

ಸಿದ್ರಾಮಯ್ಯ ಕರೆದ್ರೂ ಬಿಜೆಪಿ ಬಿಡೋಲ್ಲ ಎಂದು ಶಾಕ್ ನೀಡಿದ ಶಾಸಕ

Webdunia
ಬುಧವಾರ, 1 ಮೇ 2019 (18:34 IST)
ನಾನು ಕಾಂಗ್ರೆಸ್ ಸೇರುವ ಕುರಿತು ಹರಿದಾಡುತ್ತಿರುವ ಆಡಿಯೋ ಸುಳ್ಳು.ನಾನು ಬಿಜೆಪಿ ಕಾರ್ಯಕರ್ತ.ಯಡಿಯೂರಪ್ಪ ಅವರ ನಿಷ್ಠಾವಂತ ಬೆಂಬಲಿಗ. ಹೀಗಂತ ಬಿಜೆಪಿ ಶಾಸಕ ಹೇಳಿಕೊಂಡಿದ್ದಾರೆ.

ದೇವಾನಂದ ಚವ್ಹಾಣ ಹಾಗೂ ಇನ್ನೊಬ್ಬರ ನಡುವೆ ನಡೆದ ಆ ಸಂಭಾಷಣೆ ನನಗೆ ಸಂಬಂಧಿಸಿದಲ್ಲ‌. ಶಾಸಕರ ತೆಜೋವಧೆ ಮಾಡಿದ್ದು, ನನಗೆ ನಿನ್ನೆಯಿಂದ ತೊಂದರೆಯಾಗಿದೆ. ನಾನು ಯಾವತ್ತೂ ಬಿಜೆಪಿ ಬಿಡಲ್ಲ, ನಾನು ಶಾಸಕನಾಗಲು ಬಿಜೆಪಿಯೇ ಕಾರಣ ಎಂದರು.

ದೇವಾನಂದ ಚವ್ವಾಣ ಅವರು ನನ್ನ ತೇಜೋವಧೆ ಮಾಡುತ್ತಿದ್ದಾರೆ. ಎಂ.ಎಸ್.ಐ.ಎಲ್ ಕಾನೂನು ಚೌಕಟ್ಟಿನಲ್ಲಿ ಮಾಡುತ್ತಿದ್ದೇನೆ. ಒಂದೆ ಕೋಮಿನ ಜನರು ಅಲ್ಲಿ ಜಗಳವಾಡಿದ್ದು ನನಗೂ ಅದಕ್ಕೂ ಸಂಬಂಧವಿಲ್ಲ. ಕಾಂಗ್ರೆಸ್ ಸೇರುವ ಬಗ್ಗೆ ನಾನು ಮಾತಾಡಿದ್ದರೆ ಪಕ್ಷ ಏನೇ ಶಿಕ್ಷೇ ಕೊಟ್ಟರು ನಾನು ಅದನ್ನು ಸ್ವೀಕರಿಸುತ್ತೇನೆ ಎಂದರು.  

ನಾನು ಸಿದ್ದರಾಮಯ್ಯ ಬಂದು ಕರೆದರೂ ಬಿಜೆಪಿ ಬಿಟ್ಟು ಹೋಗಲ್ಲ. ರಾಜಕೀಯೇತರ ಸಂಬಂಧ ನಮ್ಮ ತಂದೆಯವರ ಕಾಲದಿಂದಲೂ ಎಂ.ಬಿ.ಪಾಟೀಲ್ ಅವರ ಜೊತೆ ಇದೆ. ದೇವಾನಂದ ಚವ್ವಾಣ ಆಡಿಯೋದಲ್ಲಿ ಅಪರಾಧಿಯಾಗಿದ್ದಾರೆ.

ಆಡಿಯೋ ಸತ್ಯಾಸತ್ಯತೆ ಬಗ್ಗೆ ಪರೀಶಿಲನೆ ಬಗ್ಗೆ ಪಕ್ಷದ ಮುಖಂಡರ ಜೊತೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳುತ್ತೇನೆ ಎಂದರು.
ದೇವರ ಹಿಪ್ಪರಗಿ, ಮುಳಸಾವಳಗಿ ಸೇರಿದಂತೆ ನಾಲ್ಕು ಕಡೆ ಎಂ.ಎಸ್.ಐ.ಎಲ್ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ. ಹೀಗಂತ ಮಾಧ್ಯಮಗೋಷ್ಠಿಯಲ್ಲಿ ದೇವರ ಹಿಪ್ಪರಗಿ ಶಾಸಕ ಸೋಮನಗೌಡ ಪಾಟೀಲ ಸಾಸನೂರ ಹೇಳಿಕೆ ನೀಡಿದ್ದಾರೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments