Webdunia - Bharat's app for daily news and videos

Install App

ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೀಗ ಹಾಕಿರುವ ಮನೆಗಳನ್ನ ಗುರುತಿಸಿ ಮನೆಗಳವು

Webdunia
ಶುಕ್ರವಾರ, 8 ಅಕ್ಟೋಬರ್ 2021 (20:38 IST)
ಬಾಡಿಗೆ ಮನೆ ಕೇಳುವ ನೆಪದಲ್ಲಿ ಬೀಗ ಹಾಕಿರುವ ಮನೆಗಳನ್ನು ಗುರುತಿಸಿ ಮನೆಗಳವು ಮಾಡುತ್ತಿದ್ದ ಪ್ರೇಮಿಗಳಿಬ್ಬರನ್ನು ಚಂದ್ರಾ ಲೇಔಟ್ ಠಾಣೆ ಪೆÇಲೀಸರು ಬಂಧಿಸಿದ್ದಾರೆ. 
ಚಂದ್ರಾ ಲೇಔಟ್‍ನ ವಿನಯ್ (32), ಹೊಯ್ಸಳ ನಗರದ ಕೀರ್ತನಾ (25) ಬಂಧಿತ ಪ್ರೇಮಿಗಳು. ಹಣ ಗಳಿಸಲು ಕಳವು ಮಾರ್ಗ ಹಿಡಿದ ಪ್ರೇಯಸಿಗೆ ವಿನಯ್ ಸಾಥ್ ನೀಡಿದ್ದ. ಇದನ್ನು ಮುಂದುವರಿಸುವಂತೆ ಪ್ರಿಯಕರನಿಗೆ ಪ್ರೇಯಸಿಯೇ ಒತ್ತಾಯಿಸುತ್ತಿದ್ದಳು. ಪ್ರಿಯಕರ ಹೊರಗೆ ನಿಂತು ನೋಡಿಕೊಂಡರೆ ಕೀರ್ತನಾ ಮನೆಯೊಳಗೆ ತೆರಳಿ ಕಳ್ಳತನ ಮಾಡಿಕೊಂಡು ಇಬ್ಬರು ಪರಾರಿಯಾಗುತ್ತಿದ್ದರು ಎಂದು ತಿಳಿದು ಬಂದಿದೆ. 
ವಿನಯ್ ವಿರುದ್ಧ ಆರು ಪ್ರಕರಣಗಳು ದಾಖಲಾಗಿದ್ದು, ಈತ ರಾಜಾಜಿನಗರದ ರೌಡಿಶೀಟರ್ ಆಗಿದ್ದಾನೆ. ಜೈಲು ಸೇರಿ ಜಾಮೀನಿನ ಮೇಲೆ ಹೊರಬಂದ ಬಳಿಕ ನಾಲ್ಕು ವರ್ಷಗಳ ಹಿಂದೆ ಕೀರ್ತನಾಳನ್ನು ಪ್ರೇಮಬಲೆಯಲ್ಲಿ ಬೀಳಿಸಿಕೊಂಡಿದ್ದ. ಕೀರ್ತನಾ ಪಿಯುಸಿ ಅನುತ್ತೀರ್ಣಳಾಗಿದ್ದಳು. ಈಕೆ ಪರೀಕ್ಷೆಗೆ ತರಬೇತಿ ಪಡೆಯಲು ಹೋಗುತ್ತೇನೆ ಎಂದು ಮನೆಯಲ್ಲಿ ತನ್ನ ತಾಯಿಗೆ ಸುಳ್ಳು ಹೇಳಿ ಮನೆಯಿಂದ ಹೊರಬಂದು ವಿನಯ್ ಜತೆ ಪ್ರೇಮ ಸಲ್ಲಾಪದಲ್ಲಿ ತೊಡಗುತ್ತಿದ್ದಳು. 
 ಹಣದ ಅವಶ್ಯಕತೆ ಬಿದ್ದಾಗ ಕಳ್ಳತನಕ್ಕೆ ಸಂಚು ರೂಪಿಸಿದ ಕೀರ್ತನಾ, ತನ್ನ ಪ್ರಿಯತಮನ ನೆರವು ಪಡೆದು ಕಳವು ಮಾಡಲು ಸಜ್ಜಾಗಿದ್ದಳು. ವಿನಯ್ ಜತೆ ಬೈಕ್‍ನಲ್ಲಿ ಚಂದ್ರಾಲೇಔಟ್ ಸುತ್ತಾಡಿದ ಕೀರ್ತನಾ, ಮನೆ ಬಾಡಿಗೆ ಇದೆ ಎಂಬ ಫಲಕ ಹಾಕಿರುವ ಮನೆಗಳನ್ನು ಗುರುತಿಸುತ್ತಿದ್ದಳು. ಬೀಗ ಹಾಕಿರುವ ಮನೆ ಗುರುತಿಸಿ ನಕಲಿ ಕೀ ಬಳಸಿ ಬೀಗ ತೆಗೆದು ಮನೆಗಳವು ಮಾಡಿ ಇಬ್ಬರು ಪರಾರಿಯಾಗಿದ್ದರು. ಮನೆ ಮಾಲೀಕ ಕುಲಶೇಖರ್ ಎಂಬುವರು ತಮ್ಮ ಮನೆ ಕಳವಾಗಿರುವ ಬಗ್ಗೆ ಚಂದ್ರಾ ಲೇಔಟ್ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದರು. 
ಕಾರ್ಯಾಚರಣೆಗಿಳಿದ ಪೆÇಲೀಸರು ಮನೆಯ ಹತ್ತಿರದ ರಸ್ತೆಗಳಲ್ಲಿರುವ ಸಿಸಿಟಿವಿ ಕ್ಯಾಮರಾ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments