Webdunia - Bharat's app for daily news and videos

Install App

ಹೈಕೋರ್ಟ್ ಮುಖ್ಯನ್ಯಾಯಾಧೀಶರಿಗೆ ದೂರು ನೀಡಿದ್ಲು 7ನೇ ಕ್ಲಾಸ್ ಹುಡುಗಿ

Webdunia
ಶುಕ್ರವಾರ, 22 ಮಾರ್ಚ್ 2019 (14:17 IST)
ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ 7ನೇ ತರಗತಿ ವಿದ್ಯಾರ್ಥಿನಿಯೊಬ್ಬರು ಪತ್ರ ಬರೆದು ದೂರು ನೀಡಿದ ಘಟನೆ ನಡೆದಿದೆ.
ಮಧುಗಿರಿ ನ್ಯಾಯಾಲಯದ ಕ್ಲರ್ಕ್ ವೇಣುಗೋಪಾಲ ಅವರ ವಿರುದ್ಧ ಹೈ ಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ದೂರನ್ನು 7 ನೇ ತರಗತಿ ವಿದ್ಯಾರ್ಥಿನಿ ಬರೆದಿದ್ದಾಳೆ.

ತುಮಕೂರು ಜಿಲ್ಲೆ ಮಧುಗಿರಿ ಪಟ್ಟಣದ ಹೇಮಲತ ದೂರು ಬರೆದ‌ ವಿದ್ಯಾರ್ಥಿನಿಯಾಗಿದ್ದಾರೆ. ತನ್ನ ಸ್ನೇಹಿತ ಅನಿಲ್ ಕುಮಾರ್ ಮತ್ತು ಅನಿಲ್ ತಂದೆ ಅನಂತರಾಜುಗೆ ಆದ ಅನ್ಯಾಯದ ವಿರುದ್ಧ ದೂರಿನಲ್ಲಿ ಬರೆದಿದ್ದಾಳೆ.
ಅನಂತರಾಜು ಮಗ, ಅನಿಲ್ 4 ವರ್ಷಗಳ ಹಿಂದೆ ಅಪಘಾತದಲ್ಲಿ ತೀರಿ ಹೋಗಿದ್ದ. ಅನಿಲ್ ತಂದೆ ಅನಂತರಾಜು ನ್ಯಾಯಾಲಯದಲ್ಲಿ ಕೇಸ್ ಹಾಕಿದ್ದರು, ಜೊತೆಗೆ ಮಗನ ಸಾವಿನಿಂದ ಮನನೊಂದು ಹಾಸಿಗೆ ಹಿಡಿಸಿದ್ದರು.

ಅಪಘಾತದ ಹಣ ಬಂದರೂ, ಅನಿಲ್ ತಂದೆ ಅನಂತರಾಜುಗೆ ಕೊಡದೆ ಸತಾಯಿಸಿದ್ದರು ಕ್ಲರ್ಕ್ ವೇಣುಗೋಪಾಲ್.
ನಿನ್ನೆ ಹಣ ಕೊಡುತ್ತೇವೆಂದು ಕರೆಸಿಕೊಂಡು, ಹಣ ಕೊಡದೆ ಮತ್ತದೆ ವಿಳಂಬ ಧೋರಣೆ ತೋರಿದ್ದಾರೆ.
ಮೊದಲೇ ಅನಾರೊಗ್ಯದಿಂದ ಹಾಸಿಗೆ ಹಿಡಿದಿದ್ದ ಅನಂತರಾಜು, ನ್ಯಾಯಾಲಯದ ಆವರಣದಲ್ಲಿ ಆಟೋದಲ್ಲಿ ಸಾವನ್ನಪ್ಪಿದ್ದಾರೆ.

ಮಗನು ಇಲ್ಲ, ಮಗನ ಹಣ ಬರುತ್ತದೆಂದು ಹೋದ ಅಪ್ಪನೂ ಸಾವನ್ನಪ್ಪಿದ್ದಾನೆ. ಈ ಘಟನೆಯಿಂದ ಮನನೊಂದ ಅನಿಲ್ ಸ್ನೇಹಿತೆ ಹೇಮಲತಾ. ತನ್ನ ಸ್ನೇಹಿತ ಹಾಗೂ ಸ್ನೇಹಿತನ ತಂದೆಗಾದ ಅನ್ಯಾಯದ ವಿರುದ್ಧ ಪತ್ರದ ಮುಖೇ‌‌ನಾ ಹೈ ಕೋರ್ಟ್ ನ್ಯಾಯಾಧೀಶರಿಗೆ ದೂರು ಬರೆದು ನ್ಯಾಯ ಕೇಳಲು ಹೊರಟಿದ್ದಾಳೆ. ಅನಂತರಾಜ್ ಗೆ ಮತ್ತೊಬ್ಬ ಮಗಳಿದ್ದು, ಈಗ ಅವಳ ಗತಿಯೇನು ಎಂದು ಪ್ರಶ್ನೆ ಮಾಡಿದ್ದಾಳೆ.



ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಹಮ್ಮದಾಬಾದ್ ವಿಮಾನ ದುರಂತದಲ್ಲಿ ಸಾವಿಗೀಡಾದವರ ಒಟ್ಟು ಸಂಖ್ಯೆ ಇಲ್ಲಿದೆ

ಕೇರಳದ ರಂಜಿತಾ ಸಾವಿನ ಅಪಹಾಸ್ಯ ಮಾಡಿದ ಉಪ ತಹಶೀಲ್ದಾರ್ ಸಸ್ಪೆಂಡ್

Air India Plane Crash: ಮೃತದೇಹಗಳನ್ನು ಗುರುತಿಸುವುದು ಹೇಗೆ ಇಲ್ಲಿದೆ ಪ್ರಕ್ರಿಯೆ

ಇದ್ದಕ್ಕಿದ್ದಂತೆ ಇಂದು ಚಿನ್ನಸ್ವಾಮಿ ಕಾಲ್ತುಳಿತ ವಿರೋಧಿಸಿ ಬಿಜೆಪಿ ಪ್ರತಿಭಟನೆ ಹಿಂಪಡೆದಿದ್ದೇಕೆ

Indore: ರಾಜ ರಘುವಂಶಿ ಜೊತೆ ಇನ್ನೊಬ್ಬ ಮಹಿಳೆಯ ಹತ್ಯೆಗೆ ಸೋನಂ ಆಂಡ್ ಗ್ಯಾಂಗ್ ಸ್ಕೆಚ್ ಹಾಕಿದ್ದೇಕೆ

ಮುಂದಿನ ಸುದ್ದಿ
Show comments