Select Your Language

Notifications

webdunia
webdunia
webdunia
webdunia

ಗೋವಾ ನಿಯೋಗ ಕದ್ದುಮುಚ್ಚಿ ಭೇಟಿ ನೀಡಿದ್ದು ಸರಿಯಲ್ಲ– ಜಾರಕಿಹೊಳಿ

ಗೋವಾ ನಿಯೋಗ ಕದ್ದುಮುಚ್ಚಿ ಭೇಟಿ ನೀಡಿದ್ದು ಸರಿಯಲ್ಲ– ಜಾರಕಿಹೊಳಿ
ಧಾರವಾಡ , ಭಾನುವಾರ, 28 ಜನವರಿ 2018 (20:20 IST)
ಕಳಸಾ ಬಂಡೂರಿ ಯೋಜನೆಯ ಕಣಕುಂಬಿ ಪ್ರದೇಶದಕ್ಕೆ ಗೋವಾ ನಿಯೋಗ ಕದ್ದು ಮುಚ್ಚಿ ಭೇಟಿ ನೀಡಿರುವುದು ಸರಿಯಲ್ಲ ಎಂದು ಎಐಸಿಸಿ ಕಾರ್ಯದರ್ಶಿ ಸತೀಶ ಜಾರಕಿಹೊಳಿ ಹೇಳಿದ್ದಾರೆ.
 
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಗೋವಾ ಸ್ಪೀಕರ್ ಅವರ ನಿಯೋಗ ಭೇಟಿಯ ಬಗ್ಗೆ ಮಾಹಿತಿ ನೀಡಿದ್ದರೆ, ಅಗತ್ಯ ವ್ಯವಸ್ಥೆ ಕಲ್ಪಿಸಲಾಗುತ್ತಿತ್ತು, ಆದರೆ, ಕದ್ದು ಮುಚ್ಚಿ ಭೇಟಿ ಮಾಡಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮಹಾದಾಯಿ ಪ್ರದೇಶಕ್ಕೆ ಭೇಟಿ ನೀಡಲು ಬರುವವರಿಗೆ ಯಾವುದೇ ತೊಂದರೆ ಇಲ್ಲ. ಮುಕ್ತ ಅವಕಾಶವಿದೆ. ಆದರೆ, ಜನಪ್ರತಿನಿಧಿಗಳು ಬರುವಾಗ ಸರ್ಕಾರಕ್ಕೆ ಮಾಹಿತಿ ನೀಡಬೇಕಾಗಿತ್ತು ಎಂದು ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಶಿವಕುಮಾರ ಸ್ವಾಮೀಜಿ ಅಭಿಮಾನಿಗಳಲ್ಲಿ ನಾನೂ ಒಬ್ಬ– ಸಚಿವ