Select Your Language

Notifications

webdunia
webdunia
webdunia
webdunia

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ರೈತರನ್ನು ಕಡೆಗಣಿಸಿದ ಬಿಜೆಪಿಗೆ ಪಾಠ ಕಲಿಸಿದೆ- ಸಿಎಂ ಕುಮಾರಸ್ವಾಮಿ

ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ರೈತರನ್ನು ಕಡೆಗಣಿಸಿದ ಬಿಜೆಪಿಗೆ ಪಾಠ ಕಲಿಸಿದೆ- ಸಿಎಂ ಕುಮಾರಸ್ವಾಮಿ
ಬೆಳಗಾವಿ , ಬುಧವಾರ, 12 ಡಿಸೆಂಬರ್ 2018 (07:24 IST)
ಬೆಳಗಾವಿ : ಪಂಚ ರಾಜ್ಯಗಳ ಚುನಾವಣಾ ಫಲಿತಾಂಶದ ಹಿನ್ನಲೆ ಈ ಫಲಿತಾಂಶ ರೈತರನ್ನು ಕಡೆಗಣಿಸಿದ ಬಿಜೆಪಿಗೆ ತಕ್ಕ ಪಾಠ ಕಲಿಸಿದೆ ಎಂದು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.


ಪಂಚ ರಾಜ್ಯಗಳ ಚುನಾವಣೆಯಲ್ಲಿ ಬಿಜೆಪಿ ಹಿನ್ನಡೆಯಾಗಿರುವುದರ ಕುರಿತು ಮಾತನಾಡಿದ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರು,’ ರೈತರನ್ನು ಕಡೆಗಣಿಸಿದರೆ ಯಾವುದೇ ಸರ್ಕಾರ ಸುರಕ್ಷಿತವಾಗಿರಲ್ಲ. ಯಾವುದೇ ಸರ್ಕಾರ ಸುರಕ್ಷಿತವಲ್ಲ ಎಂದು ಫಲಿತಾಂಶದಿಂದ ಗೊತ್ತಾಯ್ತು. ಮೈತ್ರಿ ಸರ್ಕಾರದ ರಚನೆ ಬಳಿಕ ನಡೆದ ಎಲ್ಲಾ ಚುನಾವಣೆಗಳು ಹಾಗೂ ರಾಜ್ಯದಲ್ಲಿ ನಡೆದ ಉಪಚುನಾವಣೆ ಫಲಿತಾಂಶವನ್ನೂ ನೋಡಿದ್ದೇವೆ. ಇದು ಬಿಜೆಪಿಯೇತರ ಪಕ್ಷಗಳು ಒಟ್ಟಾಗಿ ಮುಂದುವರಿಯಬೇಕೆಂಬ ಸುಳಿವು ಎಂದು ಹೇಳಿದ್ದಾರೆ.


ದೇಶಾದ್ಯಂತ ಏಕಪಕ್ಷೀಯ ಆಡಳಿತದ ನಿರೀಕ್ಷೆ ಮುಂದಿಟ್ಟುಕೊಂಡು ಪ್ರತಿಪಕ್ಷಗಳನ್ನು ಹಣಿಯಲು ಹೊರಟಿದ್ದವರಿಗೆ ಈ ಚುನಾವಣೆ ತಕ್ಕ ಪಾಠ ಕಲಿಸಿದೆ. ಸೋನಿಯಾ ಗಾಂಧಿ, ರಾಹುಲ್ ಗಾಂಧಿ ತಂತ್ರ ಫಲಿಸಿದ್ದು, ಅವರನ್ನು ಈ ಸಂದರ್ಭದಲ್ಲಿ ಅಭಿನಂದಿಸುವುದಾಗಿ ಕುಮಾರಸ್ವಾಮಿ ಮಾಧ್ಯಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚೀನಾದ ಕಂಪೆನಿಗಳಲ್ಲಿ ಸಾಲ ನೀಡಲು ಗಿರವಿಯಿಡಬೇಕಾಗಿರುವುದು ಏನು ಗೊತ್ತಾ? ಕೇಳಿದ್ರೆ ದಂಗಾಗ್ತೀರಾ