Select Your Language

Notifications

webdunia
webdunia
webdunia
webdunia

ಕನಸಿಗೆ ಹೆದರಿ ಗುಂಡಿಯಲ್ಲಿ ಕುಳಿತ ಭಕ್ತ

ಕನಸಿಗೆ ಹೆದರಿ ಗುಂಡಿಯಲ್ಲಿ ಕುಳಿತ ಭಕ್ತ
ಕಲಬುರಗಿ , ಗುರುವಾರ, 7 ಡಿಸೆಂಬರ್ 2017 (08:00 IST)
ಕಲಬುರಗಿ: ಸಾವಿಗೆ ಹೆದರದ ಜನರು ಕನಸಿಗೆ ಹೆದರುತ್ತಾರೆ ಎನ್ನುವುದಕ್ಕೆ ನಿದರ್ಶನವೆಂಬಂತೆ ಕಲಬುರುಗಿಯ ಕೋಟನೂರು ಗ್ರಾಮದಲ್ಲಿ ಒಂದು ವಿಚಿತ್ರ ಘಟನೆ ಸಂಭವಿಸಿದೆ.


ಅದೇನೆಂದರೆ ಕಲಬುರಗಿಯ ಕೋಟನೂರು ಗ್ರಾಮದ ನಿವಾಸಿ ವಿಜಯ್ ಕುಮಾರ್ ಎಂಬಾತ ಕನಸಿಗೆ ಹೆದರಿ ಗುಂಡಿಯಲ್ಲಿ ಹೋಗಿ ಕುಳಿತುಕೊಂಡಿದ್ದ. ಆತನಿಗೆ ರಾತ್ರಿ ಕನಸಿನಲ್ಲಿ ಮಣ್ಣಿನಲ್ಲಿ ಹುದುಗಿಕೊಂಡು ಅನುಷ್ಠಾನಕ್ಕೆ ಕುಳ್ಳಿತುಕೊಳ್ಳಬೇಕು ಎಂದು ದೇವಿಯ ಪ್ರೇರಣೆಯಾಗಿದ್ದು, ಒಂದುವೇಳೆ ಅನುಷ್ಠಾನಕ್ಕೆ ಕೂರದಿದ್ದರೆ ನಿನಗೆ ಸಾವು ಬರುತ್ತದೆ ಎಂದು ದೇವಿ ಹೇಳಿದ ಹಾಗೆ ಕನಸು ಬಿದ್ದಿತ್ತು.
ಆದ್ದರಿಂದ ಆತ ಕರಿಬಸಮ್ಮ ದೇವಿ ಗುಡಿಯ ಮುಂಭಾಗದಲ್ಲಿ ತೋಡಿದ ಗುಂಡಿಯಲ್ಲಿ ಹೋಗಿ ಅನುಷ್ಠಾನಕ್ಕೆ ಕುಳ್ಳಿತಿದ್ದ.


ಮನೆಯವರೆಲ್ಲಾ ಸೇರಿ ಗುಂಡಿಯಿಂದ ಆತನನ್ನು ಮೇಲೆ ಎಳಿಸುವ ನಿರ್ಧಾರ ಮಾಡಿದ್ದಾರೆ. ಜನರಿಗೆ ದೇವರ ಮೇಲೆ ಎಷ್ಟೊಂದು ನಂಬಿಕೆ ಇರುತ್ತೆ ಎಂಬುದಕ್ಕೆ ಈ ಘಟನೆಯೊಂದು ಸಾಕ್ಷಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಚುನಾವಣೆಗೆ ಬಹಿರಂಗ ಪ್ರಚಾರ ಇಂದು ಅಂತ್ಯ