Webdunia - Bharat's app for daily news and videos

Install App

ಹಾವು ಕಚ್ಚಿ ತಾಯಿ ಮಗಳು ಸಾವು

Webdunia
ಮಂಗಳವಾರ, 1 ನವೆಂಬರ್ 2016 (18:57 IST)

ಹುಬ್ಬಳ್ಳಿ: ಈರುಳ್ಳಿ ಶುಚಿಗೊಳಿಸುತ್ತಿದ್ದ ವೇಳೆ ತಾಯಿ ಹಾಗೂ ಮಗಳಿಗೆ ವಿಷಪೂರಿತ ಹಾವು ಕಚ್ಚಿದ ಪರಿಣಾಮ ಇಬ್ಬರೂ ಮೃತಪಟ್ಟಿರುವ ದಾರುಣ ಘಟನೆ ತಾಲೂಕಿನ ಶಿರಗುಪ್ಪಿ ಗ್ರಾಮದಲ್ಲಿ ಸೋಮವಾರ ತಡರಾತ್ರಿ ನಡೆದಿದೆ.
 

ತಾಯಿ ಮಹಾದೇವಿ ಮಲ್ಲಪ್ಪ ಹಸಬಿ(40) ಹಾಗೂ ಮಗಳು ನಾಗಮ್ಮ ಹಸಬಿ (17) ಎಂಬಾತರೇ ಮೃತಪಟ್ಟ ದುರ್ದೈವಿಗಳು. ಮಲ್ಲಪ್ಪ ಅವರಿಗೆ ಸೇರಿದ ಜಮೀನಿನಲ್ಲಿ ಈರುಳ್ಳಿ ಬೆಳೆಯಲಾಗಿತ್ತು. ಅದನ್ನು ಕಿತ್ತು ತಂದು ಮನೆಯ ಹೊರ ಆವರಣದಲ್ಲಿ ರಾಶಿಹಾಕಲಾಗಿತ್ತು. ಮನೆಮಂದಿ ಸೇರಿ ಈರುಳ್ಳಿಯನ್ನು ಶುಚಿಗೊಳಿಸುತ್ತಿದ್ದರು. ಸಂದರ್ಭದಲ್ಲಿ ರಾಶಿಯಲ್ಲಿದ್ದ ನಾಗರ ಹಾವೊಂದು ಮೊದಲು ಮಹಾದೇವಿ ಕೈಗೆ ಕಚ್ಚಿದೆ. ಅದೇನೆಂದು ಅಷ್ಟಾಗಿ ಗಮನಿಸದ ಮಹಾದೇವಿ ಇರುವೆ ಕಚ್ಚಿರಬೇಕೆಂದು ನಿರ್ಲಕ್ಷಿಸಿ ಸುಮ್ಮನಾಗಿದ್ದಳು. ಅದಾದ ಕೆಲವೇ ನಿಮಿಷದ ನಂತರ ಅದೇ ಹಾವು ಈರುಳ್ಳಿ ರಾಶಿಯಿಂದ ಹೆಡೆಯೆತ್ತಿ ಮಗಳು ನಾಗಮ್ಮಳಿಗೆ ಕಚ್ಚಿದೆ.

 

ಅವರ ಜೊತೆಯಲ್ಲಿಯೇ ಈರುಳ್ಳಿ ಶುಚಿಗೊಳಿಸುತ್ತಿದ್ದ ಉಳಿದವರು ಈ ದೃಶ್ಯ ನೋಡಿ ಹೌಹಾರಿದ್ದಾರೆ. ಮಗಳಿಗೆ ಹಾವು ಕಚ್ಚಿದ ಅರೆಕ್ಷಣದಲ್ಲಿಯೇ ತಾಯಿ ಮಹಾದೇವಿ ಕೂತಲಿಂದಲೇ ನೆಲಕ್ಕೆ ಕುಸಿದು ಬಿದ್ದಿದ್ದಾಳೆ. ಮಗಳು ನಾಗಮ್ಮಳಿಗೆ ಹಾವು ಕಚ್ಚಿದೆ ಎಂದು ಕೂಡಲೇ ಅಂಬುನ್ಸ್ ಗೆ ಕರೆಸಿ ಚಿಕಿತ್ಸೆಗಾಗಿ ಕಿಮ್ಸ್ ಗೆ ಕರೆದೊಯ್ಯಲಾಗಿತ್ತು.

 

ಮಗಳಿಗೆ ಹಾವು ಕಚ್ಚಿದ್ದನ್ನು ನೋಡಿ ತಾಯಿ ಗಾಬರಿಯಿಂದ ತಲೆ ಸುತ್ತಿ ಕುಸಿದು ಬಿದ್ದಿರಬೇಕೆಂದು ತಿಳಿದು ಅವಳನ್ನು ಅಲ್ಲಿಯೇ ಬಿಟ್ಟು ತುಸು ಆರೈಕೆ ಮಾಡಿದ್ದಾರೆ. ಮಗಳನ್ನು ಆಸ್ಪತ್ರೆಗೆ ದಾಖಲಿಸುತ್ತಿದ್ದಂತೆಯೇ ಇತ್ತ ಮಹಾದೇವಿಯ ಬಾಯಿಯಿಂದ ನೊರೆ ಬರುತ್ತಿರುವುದನ್ನು ಕಂಡು ಕರೆ ಮಾಡಿ ಹೇಳಿದ್ದಾರೆ. ಅಷ್ಟರಲ್ಲಾಗಲೇ ಆಕೆಯ ಕೈ ಹಸಿರು ಗಟ್ಟಿ ಅರೆ ಪ್ರಜ್ಞಾವಸ್ಥೆಗೆ ತಲುಪಿದ್ದಳು. ಆದರೂ ಆಸ್ಪತ್ರೆಗೆಂದು ಕರೆದೊಯ್ಯುತ್ತಿರುವಾಗ ದಾರಿ ಮಧ್ಯೆಯೇ ಅಸುನೀಗಿದ್ದಾರೆ. ನಂತರ ನಾಗಮ್ಮ ಸಹ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳಿದಿದ್ದಾಳೆ. ಸಂಬಂಧಿಸಿ ಹುಬ್ಬಳ್ಳಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ರಾಜಕೀಯ ನಿವೃತ್ತಿ ಬಳಿಕ ಅಮಿತ್ ಶಾ ಏನು ಮಾಡ್ತಾರೆ: ಪ್ಲ್ಯಾನ್ ರಿವೀಲ್

ರಕ್ಷಣಾ ಸಚಿವ ರಾಜನಾಥ್ ಸಿಂಗ್‌ರನ್ನು ಭೇಟಿಯಾದ ಸಿದ್ದರಾಮಯ್ಯ, ಮೈಸೂರು ದಸರಾದ ಬಗ್ಗೆ ಮುಖ್ಯ ಚರ್ಚೆ

70 ಗಂಟೆ ಕೆಲಸ ಮಾಡಲು ರೆಡಿಯಾ: ನಾರಾಯಣ ಮೂರ್ತಿ ಹೇಳಿಕೆಯಿಂದ ಟ್ರೋಲ್‌ಗೊಳಗಾದ ರಿಷಿ ಸುನಕ್‌

ನಾನು ಪಕ್ಷಾಂತರ ಮಾಡಲ್ಲ, ನನ್ನದು ತಟಸ್ಥ ನಿಲುವು: ಜಿಟಿ ದೇವೇಗೌಡ

ದೇಶಕ್ಕೆ ಮೋದಿ, ರಾಜ್ಯಕ್ಕೆ ಕುಮಾರಸ್ವಾಮಿ ಸಿಎಂ ಆಗ್ಬೇಕು: ನಿಖಿಲ್ ಕುಮಾರಸ್ವಾಮಿ

ಮುಂದಿನ ಸುದ್ದಿ
Show comments