Webdunia - Bharat's app for daily news and videos

Install App

ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ಯುವಕನ ಸಾವು: ಆಕ್ರೋಶ

Webdunia
ಸೋಮವಾರ, 8 ಅಕ್ಟೋಬರ್ 2018 (16:30 IST)
ಸಹೋದ್ಯೋಗಿಗಳ ಕಿರುಕುಳಕ್ಕೆ ಬೇಸತ್ತು ಯುವಕನ ಸಾವು ಪ್ರಕರಣ ಖಂಡಿಸಿ ಪಿಎಸ್ ಆರ್ ಬಟ್ಟೆ ಅಂಗಡಿ ಮುಂದೆ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. 

ಹಾಸನದ ಪಿ.ಎಸ್.ಆರ್. ಬಟ್ಟೆ ಅಂಗಡಿ ಮುಚ್ಚಲು ಆಗ್ರಹಿಸಿ ಕರವೇ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ.  
ಕಳೆದ ಏಳು ವರ್ಷಗಳಿಂದ ಪಿ.ಎಸ್.ಆರ್.ನಲ್ಲಿ ಕೆಲಸ ಮಾಡುತ್ತಿದ್ದ ಸೇವಾರ್ಥ್ (25)ನ ಸಂಸ್ಥೆಯ ಮ್ಯಾನೇಜರ್ ಹಾಲುದೊರೈ, ಸಹಾಯಕ ಮ್ಯಾನೇಜರ್ ಪ್ರದೀಪ್ ಹಾಗೂ ಹಾಸನ ಬ್ರಾಂಚ್ ಮ್ಯಾನೇಜರ್ ಪ್ರಕಾಶ ವಿರುದ್ಧ ಕಿರುಕುಳ ಆರೋಪ ಕೇಳಿಬಂದಿದೆ.
ಯುವಕ ಸೇವಾರ್ಥ ಸಾವಿಗೂ ಮುನ್ನ ಸೆಲ್ಫಿ ಹೇಳಿಕೆ ದಾಖಲು ಮಾಡಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕನ್ನಡಿಗನೆಂಬ ಕಾರಣಕ್ಕೆ ವಿನಾಕಾರಣ‌ ಒಂದೆಡೆಯಿಂದ ಮತ್ತೊಂದೆಡೆಗೆ ವರ್ಗಾವಣೆ ಮಾಡಿದ್ದ ಆರೋಪ ಕೇಳಿಬಂದಿದೆ.

ತಮಿಳುನಾಡು ಮೂಲದ ಪಿ.ಎಸ್.ಆರ್. ಬಟ್ಟೆ ಅಂಗಡಿ ಇದಾಗಿದೆ. ಕೆಲವು‌ ದಿನಗಳ ಹಿಂದೆ ಎರಡು ದಿನ ರಜೆ ಮಾಡಿದ್ದಕ್ಕೆ ಹಾಸನದಿಂದ ಮಂಗಳೂರಿಗೆ ಸೇವಾರ್ಥನನ್ನು ವರ್ಗಾವಣೆ ಮಾಡಲಾಗಿತ್ತು. ಇದರಿಂದ ಮನನೊಂದಿದ್ದ ಸೇವಾರ್ಥ್ ಕಿರುಕುಳಕ್ಕೆ ಬೇಸತ್ತು ಸಾವನ್ನಪ್ಪಿದ್ದಾನೆ.

ಯುವಕನ ಸಾವಿಗೆ ಕಾರಣವಾದವರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹೋರಾಟ ನಡೆಯಿತು.



ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments