ಮೃತಪಟ್ಟ ಕೋತಿ: ಕಣ್ಣೀರಿಟ್ಟ ವ್ಯಾಪಾರಿಗಳು

Webdunia
ಮಂಗಳವಾರ, 3 ಜುಲೈ 2018 (16:59 IST)
ಆ ಕೋತಿ ನಿತ್ಯವೂ ಹಣ್ಣಿನ ತಳ್ಳುಗಾಡಿ ಮಾರಾಟಗಾರರಿಗೆ ಕೀಟಲೆ ಮಾಡುತ್ತಿತ್ತು. ಆದ್ರೆ ಇಂದು ಬೆಳಿಗ್ಗೆ ವಿದ್ಯುತ್ ಟ್ರಾನ್ಸ್​​ಫಾರ್ಮರ್​ಗೆ ಸಿಲುಕಿ ಮೃತಪಟ್ಟಿತು. ನಿತ್ಯವೂ  ಪ್ರೀತಿಯಿಂದ ಗದರುತ್ತಿದ್ದ ಜನರು, ಇಂದು ಅದೇ ಕೋತಿ ಮೃತಪಟ್ಟಾಗ ಕಣ್ಣೀರಿಟ್ಟರು. ತಾವೇ ಮುಂದೆ ನಿಂತು ಅಂತ್ಯ ಸಂಸ್ಕಾರವನ್ನೂ ಮಾಡಿದ್ರು.  
 ಹೌದು. ಈ ಘಟನೆ ನಡೆದಿರುವುದು ಚಾಮರಾಜನಗರದ ಸಂಪಿಗೆ ರಸ್ತೆಯಲ್ಲಿ. ಇಂದು ಬೆಳಿಗ್ಗೆ ಅತ್ತಿಂದಿತ್ತ ಜಿಗಿಯುತ್ತಿದ್ದ ಕೋತಿ, ನೋಡನೋಡುತ್ತಿದ್ದಂತೆಯೇ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಸಿಲುಕಿ ಮೃತಪಟ್ಟಿತು. ಆಗ ಅಲ್ಲಿನ ಬೀದಿ ಬದಿ ವ್ಯಾಪಾರಿಗಳು ಕೋತಿ ಮೃತಪಟ್ಟಿದ್ದನ್ನು ನೋಡಿ ಅಯ್ಯಯ್ಯೋ ಎಂದು ಮರುಕಪಟ್ಟರು. ಎಲ್ಲರೂ ಸೇರಿ ತಳ್ಳುಗಾಡಿಯೊಂದನ್ನು ತಂದು, ಅದರ ಮೇಲೆ ಕೋತಿಯ ಶವವನ್ನು ಮಲಗಿಸಿ, ಅರಿಶಿನ ಕುಂಕುಮ ಹಾಕಿ ಪೂಜೆ ಮಾಡಿದ್ರು. ನಂತರ ಸಂಪಿಗೆ ರಸ್ತೆಯಲ್ಲೇ ಸಾರ್ವಜನಿಕರ ಅಂತಿಮ ದರ್ಶನಕ್ಕೂ ವ್ಯವಸ್ಥೆ ಮಾಡಿದ್ರು.
 
ಮನುಷ್ಯರು ಮೃತಪಟ್ಟಾಗ ಮಾಡುವಂತೆಯೇ ಕೋತಿಗೂ ಸಹ ಅಂತ್ಯ ಸಂಸ್ಕಾರದ ವಿಧಿವಿಧಾನಗಳನ್ನು ನೆರವೇರಿಸಲಾಯಿತು. ಇನ್ನು ಹನ್ನೊಂದು ದಿನಗಳ ನಂತ್ರ ತಿಥಿ ಕಾರ್ಯವನ್ನೂ ಸಹ ಮಾಡಲು ಅಲ್ಲಿನ ಬೀದಿ ಬದಿ ವ್ಯಾಪಾರಿಗಳು ನಿರ್ಧರಿಸಿದ್ದಾರೆ. ತಮ್ಮ ಕೈಲಾದಷ್ಟು ಹಣವನ್ನು ಚಂದಾ ವಸೂಲಿ ಮಾಡಿ, ಆ ಹಣದಲ್ಲಿ ತಿಥಿ ಕಾರ್ಯ ನೆರವೇರಿಸಿ, ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಮಾಡಲೂ ಸಹ ನಿರ್ಧರಿಸಿದ್ದಾರೆ.
 
  
ಒಂದೆಡೆ ಕೋತಿಯ ಸಾವು ಸಾರ್ವಜನಿಕರಿಗೂ ಬೇಸರ ತಂದಿದ್ದರೆ, ಆ ದಿನ ದುಡಿದ ಹಣದಲ್ಲಿ ಬದುಕುವ ಸಾಗಿಸಬೇಕಾದ ಅನಿವಾರ್ಯತೆ ಇರುವ ಬೀದಿ ಬದಿ ವ್ಯಾಪಾರಿಗಳು, ಇಂದು ಶವ ಸಂಸ್ಕಾರ ಮಾಡಿ, ಹನ್ನೊಂದನೇ ದಿನದ ತಿಥಿ ಕಾರ್ಯಕ್ಕೂ ಮುಂದಾಗಿರುವುದು ಅವರ ಹೃದಯ ವೈಶಾಲ್ಯವನ್ನು ತೋರಿಸುತ್ತದೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ತ್ರಿಷಾ ಗುಂಗಿನಿಂದ ವಿಜಯ್ ಆಚೆ ಬರಬೇಕೆಂದ ಬಿಜೆಪಿ ನಾಯಕ ನೈನಾರ್ ವಿರುದ್ಧ ನಟಿ ಗರಂ

ವಿದೇಶಿ ಮಹಿಳೆ, ಹೋಂ ಸ್ಟೆ ಒಡತಿ ಮೇಲೆ ಅತ್ಯಾಚಾರ ಪ್ರಕರಣ: ಅಪರಾಧಿಗಳ ವಿರುದ್ಧ ಮಹತ್ವದ ತೀರ್ಪು

ಭಿವಾಡಿ ಕೆಮಿಕಲ್ ಫ್ಯಾಕ್ಟರಿ ಘಟನೆಗೆ ಪ್ರಧಾನಿ ಮೋದಿ ಸಂತಾಪ

ಚಿತ್ರದುರ್ಗಾ: ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಶಾಲಾ ಕಟ್ಟಡದಿಂದ ಬಿದ್ದು ಸಾವು

ರಾಸಾಯನಿಕ ಕಾರ್ಖಾನೆಯಲ್ಲಿ ಅಗ್ನಿ ಅವಘಡ: 7ಕಾರ್ಮಿಕರು ದುರ್ಮರಣ, 10ಮಂದಿಯ ಸ್ಥಿತಿ ಗಂಭೀರ

ಮುಂದಿನ ಸುದ್ದಿ
Show comments