Webdunia - Bharat's app for daily news and videos

Install App

ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದ

Webdunia
ಮಂಗಳವಾರ, 5 ಅಕ್ಟೋಬರ್ 2021 (20:44 IST)
ಬೀದಿನಾಯಿಗಳ ವಿಚಾರವಾಗಿ ಶುರುವಾದ ವಿವಾದದ ಸಂಬಂಧ ವಿಚಾರಣೆ ನಡೆಸಿದ ಪಂಜಾಬ್​ ಹಾಗೂ ಹರಿಯಾಣ ಹೈಕೋರ್ಟ್​ ಒಂದೇ ಕುಟುಂಬದ ಮೂವರು ಸದಸ್ಯರಿಗೆ ನಿರೀಕ್ಷಣಾ ಜಾಮೀನು ನೀಡಿದೆ. ಆದರೆ ವಸತಿ ಪ್ರದೇಶಗಳಲ್ಲಿ ಬೀದಿ ನಾಯಿಗಳಿಗೆ ಆಹಾರ ನೀಡದಂತೆ ಸೂಚನೆ ನೀಡಿದೆ. ಇದರಿಂದ ಬೀದಿ ನಾಯಿಗಳು ಆ ಸ್ಥಳದಲ್ಲಿ ಹೆಚ್ಚೆಚ್ಚು ಓಡಾಡುತ್ತವೆ ಎಂದು ಹೇಳಿದೆ.
 
ಬಲಬೀರ್​ ಕೌರ್​​ ದೂರಿನ ಪ್ರಕಾರ ಆರೋಪಿ ಮನದೀಪ್​ ಸಿಂಗ್​​ 8-9 ಬೀದಿ ನಾಯಿಗಳನ್ನು ಸಾಕಿದ್ದಾರೆ. ಇವು ರಸ್ತೆಯಲ್ಲಿ ಗಲೀಜು ಮಾಡುತ್ತವೆ . ಈ ಬಗ್ಗೆ ಗ್ರಾಮದ ಅನೇಕರು ಪರಿವಾರದ ಬಳಿ ಹೇಳಿದ್ದರೂ ಸಹ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ದೂರಿದ್ದರು.
 
ಇದು ಮಾತ್ರವಲ್ಲದೇ ಬೀದಿ ನಾಯಿಗಳು ತಾವು ಬೆಳೆದ ಬೆಳ್ಳುಳ್ಳಿ ಬೆಳೆಯನ್ನು ನಾಶ ಮಾಡಿವೆ. ಹಾಗೂ 2019ರ ನವೆಂಬರ್​ 24ರಂದು ಬಲಬೀರ್​ ಹಾಗೂ ಲವಲೀನ್​ ನಮ್ಮ ಮನೆಯ ಮುಂದೆ ಬಂದು ಹಲ್ಲೆ ನಡೆಸಿದ್ದಾರೆ ಹಾಗೂ ತಮ್ಮ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದೂ ದೂರಿನಲ್ಲಿ ಉಲ್ಲೇಖಿಸಿದ್ದರು.
 
ಆರೋಪಿ ಕುಟುಂಬಕ್ಕೆ ನಿರೀಕ್ಷಣಾ ಜಾಮೀನು ನೀಡಿದ ಹೈಕೋರ್ಟ್, ಬೀದಿ ನಾಯಿಗಳಿಗೆ ವಸತಿ ಪ್ರದೇಶಗಳಲ್ಲಿ ಆಹಾರ ನೀಡದಂತೆ ಆರೋಪಿ ಕುಟುಂಬಕ್ಕೆ ಖಡಕ್​ ಸೂಚನೆ ನೀಡಿದೆ. ಆಹಾರ ಸಿಗುವ ಜಾಗದಲ್ಲಿ ಶ್ವಾನಗಳು ಹೆಚ್ಚು ಓಡಾಡುತ್ತವೆ. ಹೀಗಾಗಿ ಯಾವುದೇ ಕಾರಣಕ್ಕೂ ಜನನಿಬಿಡ ಪ್ರದೇಶಗಳಲ್ಲಿ ಬೀದಿ ನಾಯಿಗೆ ಆಹಾರ ನೀಡುವ ಅಗತ್ಯವಿಲ್ಲ ಎಂದು ಹೇಳಿದೆ.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments