Select Your Language

Notifications

webdunia
webdunia
webdunia
webdunia

ಸರಕಾರದ ವಿರುದ್ಧ ವೈದ್ಯರನ್ನು ಎತ್ತಿಕಟ್ಟಿದ್ದೇ ಬಿಜೆಪಿಯವರು: ಸಿಎಂ ಕಿಡಿ

ಸರಕಾರದ ವಿರುದ್ಧ ವೈದ್ಯರನ್ನು ಎತ್ತಿಕಟ್ಟಿದ್ದೇ ಬಿಜೆಪಿಯವರು: ಸಿಎಂ ಕಿಡಿ
ಬೆಂಗಳೂರು , ಗುರುವಾರ, 16 ನವೆಂಬರ್ 2017 (14:48 IST)
ಸರಕಾರದ ವಿರುದ್ಧ ವೈದ್ಯರನ್ನು ಎತ್ತಿಕಟ್ಟಿದ್ದೇ ಬಿಜೆಪಿಯವರು. ಇಲ್ಲವಾದಲ್ಲಿ ವೈದ್ಯರು ಪ್ರತಿಭಟನೆಯನ್ನೇ ಮಾಡುತ್ತಿರಲಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ಧ ಕೆಂಡಾಮಂಡಲವಾಗಿದ್ದಾರೆ.
 
ವಿಧಾನಪರಿಷತ್‌ನಲ್ಲಿ ಮಾತನಾಡಿದ ಅವರು, ನಾನು ಖಾಸಗಿ ವೈದ್ಯರೊಂದಿಗೆ ಚರ್ಚೆ ನಡೆಸಿದ್ದೇನೆ. ವಿಧೇಯಕ ಮಂಡನೆಯ ಮೊದಲೇ ವೈದ್ಯರು ಪ್ರತಿಭಟನೆ ನಡೆಸಲು ಬಿಜೆಪಿಯವರು ಕಾರಣವಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
 
ಖಾಸಗಿ ವೈದ್ಯರು ಸರಕಾರದೊಂದಿಗೆ ಚರ್ಚೆ ನಡೆಸಿದ ನಂತರ ಪ್ರತಿಭಟನೆಯನ್ನು ಹಿಂಪಡೆಯಲು ತೀರ್ಮಾನಿಸಿದ್ದರು. ಆದರೆ, ಬಿಜೆಪಿ ನಾಯಕರು ಪರೋಕ್ಷವಾಗಿ ಅವರಿಗೆ ನೀಡಿದ ಪ್ರೇರಣೆಯಿಂದಾಗಿ ವೈದ್ಯರು ದಾರಿ ತಪ್ಪಿದ್ದಾರೆ ಎಂದರು.
 
ವೈದ್ಯರೊಂದಿಗೆ ಸಮಾಲೋಚಿಸಲು ಸರಕಾರ ಬದ್ಧವಾಗಿದೆ. ಸರಕಾರದ ಸಂಧಾನ ಸೂತ್ರ ಸಿದ್ದವಾಗಿದೆ. ಇಂದು ಸಂಜೆ ನಡೆಯಲಿರುವ ಸಭೆಯಲ್ಲಿ ಒಮ್ಮತದ ನಿರ್ಧಾರಕ್ಕೆ ಬರಲಾಗುವುದು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಈಶ್ವರಪ್ಪ ವಿಪಕ್ಷ ನಾಯಕರಾಗಲು ನಾಲಾಯಕ್: ಎಚ್.ಎಂ.ರೇವಣ್ಣ