Webdunia - Bharat's app for daily news and videos

Install App

ಬಸ್ ಗಳಲ್ಲಿ ಲ್ಯಾಪ್ ಟಾಪ್ ಕಳ್ಳತನ ಮಾಡ್ತಿದ್ದ ಆರೋಪಿಗಳು

Webdunia
ಸೋಮವಾರ, 21 ಆಗಸ್ಟ್ 2023 (19:27 IST)
ಬಸ್ ಗಳಲ್ಲಿ ಲ್ಯಾಪ್ ಟಾಪ್ ಗಳನ್ನ ಕದ್ದು ಎಸ್ಕೇಪ್ ಆಗಿದ್ದ ಖತರ್ನಾಕ್ ಕಳ್ಳರಿಬ್ಬರನ್ನ ಕೊಡಿಗೇಹಳ್ಳಿ ಪೊಲೀಸರು ಬಂಧಿಸಿದ್ದಾರೆ.. ಶಬರೀಶ್, ಫಜೀಲ್ ಪಾಷಾ ಬಂಧಿತ ಆರೋಪಿಗಳು.. ಲ್ಯಾಪ್ ಟಾಪ್ ಕಳ್ಳತನವನ್ನೇ ಖಯಾಲಿ ಮಾಡಿಕೊಂಡಿದ್ದ ಕಳ್ಳರನ್ನ ಬಂಧಿಸಿರೋ ಪೊಲೀಸರು ಇಬ್ಬರಿಂದ ಒಂಭತ್ತು ಲಕ್ಷಕ್ಕೂ ಹೆಚ್ಚು ಮೌಲ್ಯದ ಬರೋಬ್ಬರಿ 39ಲ್ಯಾಪ್ ಟಾಪ್ ಗಳನ್ನ ಜಪ್ತಿ ಮಾಡಿದ್ದಾರೆ.

ಅಂದ್ಹಾಗೆ ಇಬ್ಬರೂ ಆರೋಪಿಗಳು ಕೂಡ ಆಂಧ್ರ ಮೂಲದೋರು.. ಆಂಧ್ರದಿಂದ ಬೆಂಗಳೂರಿಗೆ ಬಸ್ ಹತ್ತುತ್ತಿದ್ದೋರು ಬೆಂಗಳೂರು ಬಳಿ ಎಲ್ಲಾದ್ರು ಇಳಿದು ವಾಪಸ್ ಹೋಗ್ತಿದ್ರು.. ಅಷ್ಟರಲ್ಲಿ ಲ್ಯಾಪ್ ಟಾಪ್ ಗಳನ್ಬ ಕದ್ದು ಕೈಗೆತ್ತುಕೊಳ್ತಿದ್ರು.. ರಾತ್ರಿ ಜರ್ನಿ ಬಸ್ ಗಳನ್ನೇ ಹತ್ತುತ್ತಿದ್ದ ಆರೋಪಿಗಳು ಹತ್ತಿದ ನಂತರವೇ ಕಂಡಕ್ಟರ್ ಮೂಲಕ ಟಿಕೆಟ್ ತಗೋತಿದಗರು.. ನಂತರ ಬಸ್ ನಲ್ಲಿರೋ ಪ್ರಯಾಣಿಕರ ವಸ್ತುಗಳನ್ನ ಅಬ್ಸರ್ವ್ ಮಾಡ್ತಿದ್ರು.. ಅವ್ರ ಬಳಿ ಲ್ಯಾಪ್ ಟಾಪ್ ಇದ್ರೆ ಅವ್ರ ಮೇಲೆ ಸಂಪೂರ್ಣ ನಿಗಾ ಇಡ್ತಿದ್ರು.. ರಾತ್ರಿ ಜರ್ನೀ ಟೈಮಲ್ಲಿ ಪ್ರಯಾಣಿಕರು ನಿದ್ದೆ ಮಾಡ್ತಿದ್ದನನ್ನ ಗಮನಸಿ ಅವ್ರ ಬಳಿ ಇದ್ದ ಲ್ಯಾಪ್‌ಟಾಪ್ ಗೊತ್ತಿಲ್ದಂಗೆ ತಗೊಂಡು ಖಾಲಿ ಲ್ಯಾಪ್ ಟಾಪ್ ಬ್ಯಾಗ್ ಇಟ್ಟು ಎಸ್ಕೇಪ್ ಆಗ್ತಿದ್ರು ಅನ್ನೋದು ತನಿಖೆ ವೇಳೆ ಗೊತ್ತಾಗಿದೆ.

ನ್ನು ಈ ಆರೋಪಿಗಳು ಬರೀ ಕೊಡಿಗೇಹಳ್ಳಿ ಮಾತ್ರ ಅಲ್ಲ ಉಪ್ಪಾರಪೇಟೆ ಠಾಣಾ ವ್ಯಾಪ್ತಿಯಲ್ಲಿ ಕೂಡ ಕೈಚಳಕ ತೋರಿಸಿರೋದು ಗೊತ್ತಾಗಿದೆ.. ಸದ್ಯ ಆರೋಪಿಗಳನ್ನ ಬಂಧಿಸಿರೋ ಪೊಲೀಸರು ಅವ್ರನ್ನ ಜೈಲಿಗಟ್ಟಿದ್ದಾರೆ.. ನೀವೇನಾದ್ರು ಬಸ್ ನಲ್ಲಿ ಟ್ರಾವೆಲ್ ಮಾಡ್ಬೇಕಾದ್ರೆ ನಿಮ್ಮ ಬಳಿ ಇರೋ ವಸ್ತುಗಳ ಬಗ್ಗೆ ಗಮನ ಇರ್ಲಿ.. ಕೊಂಚ ಯಾಮಾರಿದ್ರು ಈತರ ನಿಮ್ಮ ವಸ್ತುಗಳನ್ನ ಎಸ್ಕೇಪ್ ಮಾಡ್ತಾರೆ ಹುಷಾರ್.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಸಿಎಂ, ಡಿಸಿಎಂ, ರಾಹುಲ್ ಗಾಂಧಿ ಭೇಟಿ ಹಿಂದಿನ ಗುಟ್ಟು ಬಿಚ್ಚಿಟ್ಟ ವೇಣುಗೋಪಾಲ್‌

Kerala Rain: ಜೂ.15ರ ವರೆಗೆ ಭಾರೀ ಮಳೆಯ ಮುನ್ಸೂಚನೆ , ರಾಜ್ಯದಲ್ಲಿ ಹೇಗಿರಲಿದೆ ಹವಾಮಾನ

Meghalaya Murder Case: ಗಂಡನ ಜತೆಗಿನ ಬೆಡ್‌ ರೂಂ ಸಂಗತಿಯನ್ನು ಪ್ರಿಯಕರನಿಗೆ ಒಪ್ಪಿಸಿದ್ಳು ಸೋನಮ್

Bengaluru Stampede: ಆರ್‌ಸಿಬಿ ಮಾರ್ಕೆಂಟಿಗ್ ಮುಖ್ಯಸ್ಥ ನಿಖಿಲ್ ಸೋಸಲೆಗೆ ಕಾನೂನಿನಲ್ಲಿ ಹಿನ್ನಡೆ

Indore Raja Raguvamshi murder: ಅಬ್ಬಾ.. ಗಂಡನನ್ನು ಕೊಂದು ಸೋನಂ ಪ್ಲ್ಯಾನ್ ಏನಿತ್ತು ಗೊತ್ತಾ

ಮುಂದಿನ ಸುದ್ದಿ
Show comments