Select Your Language

Notifications

webdunia
webdunia
webdunia
webdunia

ಅಮಿತ್ ಶಾಗೆ ರಾಜ್ಯಕ್ಕೆ ಬರದಂತೆ ನಿಷೇಧ ಹೇರುವ ಪ್ರಸ್ತಾಪವಿಲ್ಲ- ರಾಮಲಿಂಗಾರೆಡ್ಡಿ

ಅಮಿತ್ ಶಾಗೆ ರಾಜ್ಯಕ್ಕೆ ಬರದಂತೆ ನಿಷೇಧ ಹೇರುವ ಪ್ರಸ್ತಾಪವಿಲ್ಲ- ರಾಮಲಿಂಗಾರೆಡ್ಡಿ
ಬೆಳಗಾವಿ , ಬುಧವಾರ, 6 ಡಿಸೆಂಬರ್ 2017 (13:35 IST)
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಅವರಿಗೆ ರಾಜ್ಯಕ್ಕೆ ಬರದಂತೆ ನಿಷೇಧ ಹೇರುವ ಪ್ರಸ್ತಾಪವಿಲ್ಲ  ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಹೇಳಿದ್ದಾರೆ.

ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಮಿತ್ ಶಾ ಅವರು ರಾಷ್ಟ್ರೀಯ ಪಕ್ಷದ ಅಧ್ಯಕ್ಷ ಸ್ಥಾನದ ಜವಾಬ್ದಾರಿ ಅರಿತುಕೊಳ್ಳಬೇಕು. ಏನು ಮಾತನಾಡಬೇಕು ಎಂಬುದು ತಿಳಿದುಕೊಂಡು ಮಾತನಾಡಬೇಕು ಎಂದಿದ್ದಾರೆ.

ಹುಣಸೂರಿನಲ್ಲಿ ಗಲಾಟೆಗೆ ಕಾರಣವಾಗಿರುವ ಸಂಸದ ಪ್ರತಾಪಸಿಂಹ ಅವರು ಅಮಿತ್ ಶಾ ಹೇಳಿದಂತೆ ಕೇಳಿದ್ದೇವೆ ಎಂದು ಹೇಳಿರುವುದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇಂತಹ ಗಲಾಟೆಗಳಿಗೆ ಪ್ರಚೋದನೆ ನೀಡಬಾರದು ಎಂದು ತಿಳಿಸಿದ್ದಾರೆ.

ಪ್ರತಾಪಸಿಂಹ ತಮ್ಮ ನಡವಳಿಕೆಯನ್ನು ಸರಿ ಮಾಡಿಕೊಳ್ಳಬೇಕು. ಮತ ಬ್ಯಾಂಕ್ ಗಟ್ಟಿ ಮಾಡಿಕೊಳ್ಳಲು ಶಾಂತಿ ಭಂಗ ಮಾಡುವುದು ಒಳ್ಳೆಯದಲ್ಲ. ಎಸ್ಪಿ ರವಿ ಚೆನ್ನಣ್ಣನವರ್ ಕಾನೂನಿನ ಪ್ರಕಾರ ಕ್ರಮ ಜರುಗಿಸಿದ್ದಾರೆ. ಸಂಸದರು ಇಲ್ಲ ಸಲ್ಲದ ಆರೋಪ ಮಾಡಬಾರದು ಎಂದು ನುಡಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಹನುಮ ಮಾಲೆ ವಿಸರ್ಜಿಸಿದ ಪ್ರತಾಪಸಿಂಹ