Webdunia - Bharat's app for daily news and videos

Install App

Tejasvi Surya: ಪಹಲ್ಗಾಮ್ ನಲ್ಲಿ ಬಲಿಯಾದ ಮಂಜುನಾಥ್ ಪುತ್ರನಿಗೆ ನೀಡಿದ್ದ ಭರವಸೆ ಈಡೇರಿಸಿದ ತೇಜಸ್ವಿ ಸೂರ್ಯ

Krishnaveni K
ಶನಿವಾರ, 24 ಮೇ 2025 (14:33 IST)
ಬೆಂಗಳೂರು: ಪಹಲ್ಗಾಮ್ ನಲ್ಲಿ ಉಗ್ರರ ದಾಳಿಗೆ ಬಲಿಯಾದ ಮಂಜುನಾಥ್ ಪುತ್ರ ಅಭಿಜಯನಿಗೆ ಉಚಿತ ಶಿಕ್ಷಣ ಕೊಡಿಸುವುದಾಗಿ ಸಂಸದ ತೇಜಸ್ವಿ ಸೂರ್ಯ ಭರವಸೆ ನೀಡಿದ್ದರು. ಅದೀಗ ಈಡೇರಿದೆ. ಆರ್ ವಿ ಕಾಲೇಜು ಅಭಿಜಯನಿಗೆ ಮುಂದಿನ ಶಿಕ್ಷಣಕ್ಕೆ ತನ್ನ ಕಾಲೇಜಿನಲ್ಲಿ ಸೀಟು ನೀಡಿದೆ.

ಅಭಿಜಯ ಆಗಷ್ಟೇ ದ್ವಿತೀಯ ಪಿಯುಸಿ ಮುಗಿಸಿದ್ದ. ಫಲಿತಾಂಶ ಬಂದ ಖುಷಿಯಲ್ಲಿ ತಂದೆ-ತಾಯಿಯೊಡನೆ ಪಹಲ್ಗಾಮ್ ಪ್ರವಾಸಕ್ಕೆ ತೆರಳಿದ್ದ. ದುರದೃಷ್ಟವಶಾತ್ ಕಣ್ಣೆದುರಲ್ಲೇ ತಂದೆಯನ್ನು ಉಗ್ರರು ಗುಂಡಿಕ್ಕಿ ಹತ್ಯೆ ಮಾಡಿದ್ದರು. ಆ ಸಂದರ್ಭದಲ್ಲಿ ಸಂಸದ ತೇಜಸ್ವಿ ಸೂರ್ಯ ಭೇಟಿ ಮಾಡಿ ಅಭಿಜಯ ಮುಂದೆ ಏನು ಓದಬೇಕೆಂದಿರುವೆ ಎಂದೆಲ್ಲಾ ವಿಚಾರಿಸಿದ್ದರು.

ಅಷ್ಟೇ ಅಲ್ಲದೆ, ಬೆಂಗಳೂರಿನ ಆರ್ ವಿ ವಿಶ್ವ ವಿದ್ಯಾಲಯದ ಬಳಿ ಮಾತನಾಡಿ ಅಭಿಜಯನ ಮುಂದಿನ ಓದಿಗೆ ಸಹಾಯ ಮಾಡುವಂತೆ ಕೋರಿದ್ದರು. ಸಂಸದರ ಮನವಿಗೆ ಸ್ಪಂದಿಸಿದ ವಿಶ್ವ ವಿದ್ಯಾಲಯ ಅಭಿಜಯನಿಗೆ ಉಚಿತ ಶಿಕ್ಷಣದ ಭರವಸೆ ನೀಡಿತ್ತು.

ಇದು ಕೇವಲ ಭರವಸೆ ಮಾತ್ರವಾಗಿಲ್ಲ. ಇದೀಗ ಅಭಿಜಯ ಆರ್ ವಿವಿಯ ಸ್ಕೂಲ್ ಆಫ್ ಬ್ಯುಸಿನೆಸ್ ನಲ್ಲಿ ಪದವಿ ವಿಭಾಗಕ್ಕೆ ದಾಖಲಾಗಿದ್ದಾನೆ. ಆತನಿಗೆ ಉಚಿತ ಶಿಕ್ಷಣ ನೀಡಲು ಆರ್ ವಿ ವಿಶ್ವ ವಿದ್ಯಾಲಯ ಮುಂದಾಗಿದೆ ಎಂದು ತೇಜಸ್ವಿ ಸೂರ್ಯ ಟ್ವೀಟ್ ಮಾಡಿ ಖುಷಿ ಸುದ್ದಿ ಹಂಚಿಕೊಂಡಿದ್ದಾರೆ. ಉಚಿತ ಶಿಕ್ಷಣ ನೀಡಲು ಮುಂದಾಗಿರುವುದಕ್ಕೆ ಆರ್ ವಿ ಶಿಕ್ಷಣ ಸಂಸ್ಥೆಗೆ ಧನ್ಯವಾದ ಸಲ್ಲಿಸಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Kerala Monsoon: ರೈತರಿಗೆ ಮುಂಗಾರಿನ ಸಿಹಿ ಸುದ್ದಿ, ಕೇರಳಕ್ಕೆ ಎಂಟ್ರಿ ಕೊಟ್ಟ ವರುಣ

KCET results live: ಜನಿವಾರ ತೆಗೆಸಿದ ವಿದ್ಯಾರ್ಥಿಯ ಫಲಿತಾಂಶ ಏನಾಗಿದೆ ಗೊತ್ತಾ

KCET Results live: ಕೆಸಿಇಟಿ ಪರೀಕ್ಷೆ ಫಲಿತಾಂಶ ಪ್ರಕಟ: ವಿವರ ಇಲ್ಲಿದೆ

Kodi Seer: ಕೊವಿಡ್ ಬಗ್ಗೆ ಅಪಾಯಕಾರಿಯಾಗುತ್ತಾ: ಕೋಡಿ ಶ್ರೀಗಳ ಸ್ಪೋಟಕ ಭವಿಷ್ಯ

Mysore Pak: ಪಾಕಿಸ್ತಾನದ ಮೇಲಿನ ಸಿಟ್ಟಿಗೆ ಮೈಸೂರ್ ಪಾಕ್ ಗತಿ ಏನಾಗಿದೆ ನೋಡಿ

ಮುಂದಿನ ಸುದ್ದಿ
Show comments