Publish Date: Thu, 13 Jun 2019 (14:01 IST)
Updated Date: Thu, 13 Jun 2019 (14:03 IST)
ನೂತನ ತಂತ್ರಾಂಶ ಮತ್ತು ವೈಬ್ ಸೈಟ್ ನ್ನು ಬಿಡುಗಡೆ ಮಾಡಿದ್ದಾರೆ ಸಿಎಂ ಕುಮಾರಸ್ವಾಮಿ.
ನಗರಾಭಿವೃದ್ಧಿ ಇಲಾಖೆವತಿಯಿಂದ ವೆಬ್ ಸೈಟ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ವೆಬ್ ಸೈಟ್ ಬಿಡುಗಡೆ ಸಮಾರಂಭ ನಡೆಯಿತು. ನಗರಾಭಿವೃದ್ಧಿ ಸಚಿವ ಯು.ಟಿ. ಖಾದರ್, ಮೇಯರ್ ಗಂಗಾಭಿಕೆ, ಸೇರಿ ಇಲಾಖೆ ಅಧಿಕಾರಿಗಳು ಸಭೆಯಲ್ಲಿ ಭಾಗಿಯಾಗಿದ್ದರು.
ದೇಶದಲ್ಲಿ ಮೊದಲ ಬಾರಿಗೆ ಇಂತಹ ವ್ಯವಸ್ಥೆ ಜಾರಿಗೆ ತಂದ ರಾಜ್ಯ ಕರ್ನಾಟಕವಾಗಿದೆ. ಭೂ-ಉಪಯೋಗ ಅನುಮೋದನೆ, ಕಟ್ಟಡ ಪ್ಲಾನ್ ಅನುಮೋದನೆ ಸೇರಿದಂತೆ ಇನ್ನಿತರ ಅನುಮೋದನೆ ಪಡೆಯಲು ತಂತ್ರಾಂಶ ಬಿಡುಗಡೆಗೊಳಿಸಲಾಗಿದೆ ಎಂದು ಸಿಎಂ ಹೇಳಿದ್ರು.