Publish Date: Mon, 01 Aug 2022 (17:14 IST)
Updated Date: Mon, 01 Aug 2022 (17:16 IST)
ಹೊಸ ಅಂಗಡಿಯ ಉದ್ಘಾಟನೆಗೆ ಸಿದ್ಧತೆ ನಡೆಸಿದ್ದ ಟ್ಯಾಟೂ ಅಂಗಡಿ ಮಾಲೀಕನೋರ್ವ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕುಮಟಾ ತಾಲೂಕಿನ ಗೋಕರ್ಣದ ಬೇಲಿ ಹಿತ್ತಲದಲ್ಲಿ ನಡೆದಿದೆ.
ಪತ್ನಿ ಜೊತೆ ಜಗಳವಾಡಿಕೊಂಡು ಪತಿ ಆತ್ಮಹತ್ಯೆಪತ್ನಿ ಜೊತೆ ಜಗಳವಾಡಿಕೊಂಡು ಪತಿ ಆತ್ಮಹತ್ಯೆಹಾವೇರಿ ಮೂಲದ ರಮೇಶ್ ಸುಭಾಷ್ ಲಮಾಣಿ (32) ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ. ಪತ್ನಿಯೊಂದಿಗೆ ಜಗಳವಾಡಿಕೊಂಡು ಅದನ್ನೇ ಮನಸ್ಸಿಗೆ ಹಂಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ. ಗೋಕರ್ಣದಲ್ಲಿ ಹೊಸ ಮಳಿಗೆ ಪ್ರಾರಂಭಿಸಲು ಸುಭಾಷ್ ಸಿದ್ಧತೆ ಮಾಡಿಕೊಂಡಿದ್ದರು ಎನ್ನಲಾಗ್ತಿದೆ. ಆತ್ಮಹತ್ಯೆಗೆ ಸಂಬಂಧಿಸಿದಂತೆ ಗೋಕರ್ಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.