Select Your Language

Notifications

webdunia
webdunia
webdunia
webdunia

ಕೇಸ್ ವಾಪಸ್ ತೆಗೆದುಕೋ! ಸಂತ್ರಸ್ತೆಗೆ ಆಮಿಷ ಒಡ್ಡಿದ್ರಾ ಮುರುಘಾ ಶ್ರೀ?

ಕೇಸ್ ವಾಪಸ್ ತೆಗೆದುಕೋ! ಸಂತ್ರಸ್ತೆಗೆ ಆಮಿಷ ಒಡ್ಡಿದ್ರಾ ಮುರುಘಾ ಶ್ರೀ?
ಚಿತ್ರದುರ್ಗ , ಶುಕ್ರವಾರ, 18 ನವೆಂಬರ್ 2022 (06:05 IST)
ಚಿತ್ರದುರ್ಗ : ದಿನ ಕಳೆದಂತೆ ಮುರುಘಾ ಶ್ರೀಗಳ ವಿರುದ್ಧ ಪೋಕ್ಸೋ ಕೇಸ್ ಕೂಡ ಹಲವು ತಿರುವು ಪಡೆಯುತ್ತಿದೆ. ಶ್ರೀಗಳ ವಿರುದ್ಧ ದೂರು ನೀಡಿದ್ದ ಸಂತ್ರಸ್ತೆಗೆ ಆಮಿಷ ಒಡ್ಡಿದ ಆರೋಪ ಕೇಳಿ ಬಂದಿದೆ.

ಆಮಿಷ ಒಡ್ಡಿರುವ ಬಗ್ಗೆ ವಿಸೃತ ತನಿಖೆ ನಡೆಸುವಂತೆ ಕೋರಿ ಒಡನಾಡಿ ಸಂಸ್ಥೆ, ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಪತ್ರ ಬರೆದಿದೆ. ಸಂತ್ರಸ್ತ ಬಾಲಕಿಗೆ ಆಕೆಯ ತಂದೆ ಬಾಲ ಭವನದ ದೂರವಾಣಿಗೆ ಕರೆ ಮಾಡಿದ್ರು. ಸ್ವಾಮಿಗಳು ನಮ್ಮನ್ನು ನೋಡಿಕೊಂಡಿದ್ದಾರೆ. ಹಣ ಕೊಟ್ಟಿದ್ದಾರೆ.

ನೀನು ಕೇಸ್ ಮುಂದುವರಿಸುವುದು ಬೇಡ. ದೂರನ್ನು ವಾಪಾಸ್ ತೆಗೆದುಕೊಂಡು ನನ್ನ ಜೊತೆ ಬರಲು ನೋಡು ಎಂದು ಹೇಳುತ್ತಿದ್ದುದನ್ನು ಕೇಳಿಸಿಕೊಂಡೆ ಅಂತಾ ಸಂತ್ರಸ್ತೆಯ ಜೊತೆಗಾರ್ತಿ ಹೇಳಿರೋದಾಗಿ ಪತ್ರದಲ್ಲಿ ಒಡನಾಡಿ ಸಂಸ್ಥೆ ಉಲ್ಲೇಖಿಸಿದೆ. 


Share this Story:

Follow Webdunia kannada

ಮುಂದಿನ ಸುದ್ದಿ

ನವೆಂಬರ್ 19ಕ್ಕೆ ಎಎಪಿಯಿಂದ ವಿಧಾನಸೌಧಕ್ಕೆ ಮುತ್ತಿಗೆ