Webdunia - Bharat's app for daily news and videos

Install App

500 ಸಾಲಕ್ಕಾಗಿ ಸ್ನೇಹಿತನ ಪತ್ನಿಯನ್ನೇ ಹೊತ್ತೊಯ್ದು ಮದುವೆಯಾದ..!

Webdunia
ಮಂಗಳವಾರ, 25 ಸೆಪ್ಟಂಬರ್ 2018 (19:38 IST)
ಸಾಲದ ರೂಪದಲ್ಲಿ ಪಡೆದ 500 ರೂಪಾಯಿ ಕೊಡಲು ವಿಳಂಬ ಮಾಡಿದ್ದಕ್ಕೆ ವ್ಯಕ್ತಿಯೋರ್ವ ತನ್ನ ಸ್ನೇಹಿತನ ಹೆಂಡತಿಯನ್ನೇ ತನ್ನೊಟ್ಟಿಗೆ ಕರೆದೊಯ್ದು ಮದುವೆ ಆಗಿರುವ ವಿಚಿತ್ರ ಘಟನೆಯೊಂದು ನಡೆದಿದೆ.

ಬೆಳಗಾವಿಯಲ್ಲಿ ಈ ಘಟನೆ ಬೆಳಕಿಗೆ ಬಂದಿದೆ. ಬಸವರಾಜ್, ಪತ್ನಿ ಕಳೆದುಕೊಂಡ ಪತಿ. ಗೋಕಾಕ ತಾಲೂಕಿನ ಗ್ರಾಮದ ಮಿಡಕನಟ್ಟಿಯ ರಮೇಶ ಹುಕ್ಕೇರಿ ಎಂಬಾತ ಈ ಕೃತ್ಯ ಎಸಗಿದ ಆರೋಪಕ್ಕೆ ಗುರಿಯಾಗಿದ್ದಾನೆ. ಬೈಲಹೊಂಗಲ ತಾಲೂಕಿನ ಮುರಕಿಬಾವಿ ಗ್ರಾಮದ ಬಸವರಾಜ ಕೋನನ್ನವರ ಎಂಬಾತನ ಪತ್ನಿ ಪಾರ್ವತಿಯ ಜೊತೆ ರಮೇಶ ಹುಕ್ಕೇರಿ ವಿವಾಹವಾಗಿದ್ದಾನೆ.

ವಿಪರ್ಯಾಸವೆಂದರೆ ರಮೇಶನಿಗೆ ಈ ಮೊದಲೇ ವಿವಾಹವಾಗಿದ್ದು, ತನ್ನ ಪತ್ನಿಯನ್ನು ಈತ ತವರು ಮನೆಗೆ ಕಳುಹಿಸಿ, ಪಾರ್ವತಿಯ ಜತೆಗೆ ಸಂಸಾರ ಮಾಡುತ್ತಿದ್ದಾನೆ. ಪತ್ನಿ ಕಾಣೆಯಾಗಿರುವ ಬಗ್ಗೆ ಬಸವರಾಜ ಕೋಣನ್ನವರ ದೂರು ಕೊಡಲು ಮುಂದಾದರೂ ಪೊಲೀಸರು ದಾಖಲಿಸಿಕೊಳ್ಳುತ್ತಿಲ್ಲವಂತೆ. ಈ ಹಿನ್ನೆಲೆಯಲ್ಲಿ ಬಸವರಾಜ್​ ಇಂದು ಜಿಲ್ಲಾಧಿಕಾರಿ ಕಚೇರಿ ಮುಂದೆ ನನಗೆ ನನ್ನ ಹೆಂಡತಿ ಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ.

ಸ್ನೇಹಿತನಿಗೆ ದೋಖಾ; ಪತ್ನಿಗೂ ಮೋಸ!
ಬಸವರಾಜ್ ಪತ್ನಿ, ರಮೇಶ ಹಾಗೂ ಬಸವರಾಜ ಇಬ್ಬರೂ ಈ ಮೊದಲು ಬೆಳಗಾವಿಯ ಹೋಟೆಲ್‌ವೊಂದರಲ್ಲಿ ಸಪ್ಲೈಯರ್‌ ಆಗಿ ಕೆಲಸ ಮಾಡುತ್ತಿದ್ದಾಗ, ಇಬ್ಬರಿಗೂ ಪರಿಚಯವಾಗಿತ್ತು. ಬಸವರಾಜ ಪತ್ನಿ ಕೂಡ ಇದೆ ಹೋಟೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಆಗ ರಮೇಶ್​ನಿಗೆ ಪಾರ್ವತಿ ಪರಿಚಯವಾಗಿದೆ. ಹಣದ ಅವಶ್ಯಕತೆ ಎದುರಾದಾಗ ಬಸವರಾಜ, ರಮೇಶ ಬಳಿ 500 ರೂಪಾಯಿ ಸಾಲ ಪಡೆದಿದುಕೊಂಡಿದ್ದ. ಆದರೆ ಬಸವರಾಜನಿಗೆ ಹಣ ಕೊಡಲು ಸ್ವಲ್ಪ ವಿಳಂಬವಾಗಿದೆ. ಈ ಕಾರಣದಿಂದಾಗಿ ರಮೇಶ ಹುಕ್ಕೇರಿ, ಬಸವರಾಜ ಪತ್ನಿ ಪಾರ್ವತಿಯನ್ನು ಕರೆದೊಯ್ದಿದ್ದಾನೆ. ಈ ಬಗ್ಗೆ ಪ್ರಶ್ನಿಸಿದರೆ ನನಗೆ ಬೆದರಿಕೆ ಹಾಕುತ್ತಿದ್ದಾನೆ ಎಂಬುವುದು ಬಸವರಾಜ ಅವರ ಆರೋಪ ಮಾಡುತ್ತಿದ್ದಾನೆ.


ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments