Webdunia - Bharat's app for daily news and videos

Install App

ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ‌ಯಿಂದ ಅಭಿಷೇಕ

Webdunia
ಶುಕ್ರವಾರ, 14 ಜನವರಿ 2022 (19:57 IST)
ಬೆಂಗಳೂರು: ನಾಡಿನೆಲ್ಲೆಡೆ ಮಕರ ಸಂಕ್ರಾಂತಿ ಹಬ್ಬದ ಸಂಭ್ರಮ ಮನೆಮಾಡಿದೆ. ನಗರದ ಗವಿಪುರಂನಲ್ಲಿರುವ ಗವಿಗಂಗಾಧರೇಶ್ವರ ಸ್ವಾಮಿ ದೇಗುಲದಲ್ಲಿ ಸಂಕ್ರಾಂತಿ ಹಬ್ಬದ ವಿಶೇಷ ಪೂಜೆ ನಡೆಯಿತು. ಪ್ರತಿ ವರ್ಷದಂತೆ ಗವಿಗಂಗಾಧರನಿಗೆ ಸೂರ್ಯರಶ್ಮಿಯ ಸ್ಪರ್ಶವು ಸಹ ಆಗುತ್ತಿದೆ.
ಇಂದು ಸೂರ್ಯನು ತನ್ನ ಪಥವನ್ನು ಬದಲಿಸುವ ದಿನ. ಹೀಗಾಗಿ ಸೂರ್ಯನ ಶಿವನಿಗೆ ಪೂಜೆ ಸಲ್ಲಿಸೋ ಮೂಲಕ ಪಥ ಬದಲಿಸ್ತಾನೆ. ಇಂದು ಆ ಕೌತುಕ ಘಟಿಸಿ ರವಿ ತನ್ನ ಹಾದಿ ಬದಲಿಸಿ ಉತ್ತರಾಯಣ ಪ್ರವೇಶ ಮಾಡಿದ್ದಾನೆ. ಕಳೆದ ವರ್ಷ ಮೋಡ ಹೆಚ್ಚಾಗಿದ್ದ ಹಿನ್ನೆಲೆ, ಗವಿ ಗಂಗಾಧರನಿಗೆ ಸೂರ್ಯ ರಶ್ಮಿಯು ಸ್ಪರ್ಶಿಸಲಿಲ್ಲ. ಇಷ್ಟು ವರ್ಷದ ಇತಿಹಾಸದಲ್ಲೇ ಮೊದಲ ಬಾರಿಗೆ ಸೂರ್ಯನ ಕಿರಣಗಳು ಶಿವಲಿಂಗದ ಮೇಲೆ ಬಿದ್ದಿರಲಿಲ್ಲ. ಹೀಗಾಗಿ ಭಕ್ತಾದಿಗಳಲ್ಲಿ ಆತಂಕ ಮೂಡಿತ್ತು. ಹಾಗೂ ಈ ಕೌತುಕ ಕಣ್ತುಂಬಿಕೊಳ್ಳೋದಕ್ಕೆ ಸಾಧ್ಯವಾಗಲಿಲ್ಲ. ಆದರೆ ಈ ವರ್ಷ ಸೂರ್ಯನು ದಕ್ಷಿಣದಿಂದ ಉತ್ತರಕ್ಕೆ ಪಥವನ್ನು ಬದಲಿಸುವ ದಿನ, ಈ ದಿನ ಸೂರ್ಯನು ಶಿವನಿಗೆ ಪೂಜಿಸಿ ತನ್ನ ಪಥವನ್ನು ಬದಲಿಸುತ್ತೇನೆ ಅನ್ನೋ ಪ್ರತೀತಿ ಇರೋದ್ರಿಂದ, ಇವತ್ತು ಗವಿ ಗಂಗಾಧರನನ್ನು ಸೂರ್ಯ ರಶ್ಮಿ ಸ್ಪರ್ಶಿಸಿತು. 
ಸಂಜೆ 5:17ಕ್ಕೆ ಸರಿಯಾಗಿ ಶಿವಲಿಂಗ ಮುಂಭಾಗದಲ್ಲಿರುವ ನಂದಿಕಾಳಿಗೆ ಸ್ಪರ್ಶಿಸಲು ಶುರುವಾದ ಸೂರ್ಯ ರಶ್ಮಿಗಳು. ನಂತರ ನಂದಿವಾಹನವನ್ನು ಆವರಿಸುತ್ತಾ ಶಿವಲಿಂಗದ ಸೋಮಸೂತ್ರಕ್ಕೆ ಸೂರ್ಯ ಕಿರಣಗಳು ಸ್ಪರ್ಶಿಸಿತು. ಅದಾಗಿ ದಕ್ಷಿಣದಿಂದ ಉತ್ತರಕ್ಕೆ ಸಾಗುತ್ತಿದ್ದ ರವಿ ಕಿರಣಗಳು ಕ್ರಮೇಣ ಒಂದು ವರ್ಷದ ಬಳಿಕ ಶಿವನ ಶಿರ ಸ್ಪರ್ಶಿಸಿತು. ಒಟ್ಟಾರೆ 13 ನಿಮಿಷಗಳ ಕಾಲ ಸೂರ್ಯ ರಶ್ಮಿ ಸ್ಪರ್ಶಿಸಿದರೂ ಪಾಣಿಪೀಠದಿಂದ ಶಿವಲಿಂಗದ ಶಿರದವರೆಗೆ 2 ನಿಮಿಷ 13 ಸೆಕೆಂಡ್ ಗಳ ಕಾಲ ರಶ್ಮಿಗಳು ಆವರಿಸಿ ಕೂತಿತ್ತು. ಬಳಿಕ ಮಾತನಾಡಿದ ಗವಿಗಂಗಾಧರೇಶ್ವರ ದೇವಾಲಯದ ಪ್ರಧಾನ ಅರ್ಚಕರು ಸೋಮಸುಂದರ್ ದೀಕ್ಷಿತ್ ಮಾತನಾಡಿ, ವರ್ಷದ ಬಳಿಕ ಸೂರ್ಯ ಸ್ಪರ್ಶವಾಗಿದೆ. ಇದು ಶುಭದ ಸಂಕೇತ. ಕಳೆದ ಬಾರಿ ಸೂರ್ಯ ಕಿರಣಗಳು ಸ್ಪರ್ಶವಾಗಿರುವುದು ನೋಡಲಿಲ್ಲ. ಆ ಮೇಲೆ ಏನೇನಾಯ್ತು ಎಲ್ಲರಿಗೂ ಗೊತ್ತಿದೆ. ಆದರೆ ಈಬಾರಿ ಶುಭದ ಸಂಕೇತ ಸಿಕ್ಕಿದೆ. ಎಲ್ಲವೂ ನಿರುಮ್ಮುಳವಾಗಿ ಬದುಕು ಬಂಗಾರ ಎಂದು ಹೇಳಿದ್ದಾರೆ.
ಈ ಬಾರಿ ಕೋವಿಡ್ ಇದ್ದ ಕಾರಣ ಮುಂಜಾನೆಯಿಂದ ಮಧ್ಯಾಹ್ನ 12 ಗಂಟೆಯವರೆಗೂ ಜನರಿಗೆ ಶಿವನ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಹೀಗಾಗಿ ಸೂರ್ಯ ರಶ್ಮಿ ಬಂದ ಬಳಿಕವೂ ಯಾವ ಭಕ್ತರಿಗೆ ದೇವಾಲಯಕ್ಕೆ ದರ್ಶನಕ್ಕೆ ಬರಲು ಸಾಧ್ಯವಾಗಲಿಲ್ಲ. ಕೊರೊನಾ ಏರಿಕೆಯಾಗುತ್ತಿರುವ ದೇವಾಲಯದ ಹೊರಾಂಗಣದಲ್ಲಿಯೂ ಭಕ್ತರಿಗೆ ಅನುಮತಿ ಇರಲಿಲ್ಲ. ಹೀಗಾಗಿ ಭಕ್ತರ ಉದ್ಘೋಷವಿಲ್ಲದೆ ಸೂರ್ಯ ರಶ್ಮಿ ಮಹಾದೇವನಿಗೆ ನಮಿಸಿ ತನ್ನ ಪಥ ಬದಲಿಸಿದ್ದಾನೆ. 

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಜಾತಿ ಧರ್ಮ ಯಾವುದೂ ನೋಡಲ್ಲ, ಇದೊಂದು ಮಾತು ಸುಳ್ಳಾದ್ರೆ ವೇದಿಕೆ ಹತ್ತಲ್ಲ: ಸಿದ್ದರಾಮಯ್ಯ

ವಿಮಾನ ದುರಂತವಾದ ಕ್ಷಣದಲ್ಲೇ ನಾಪತ್ತೆಯಾದ ನಿರ್ಮಾಪಕ ಮಹೇಶ್ ಕಲಾವಾಡಿಯಾ ಇನ್ನೂ ಪತ್ತೆಯಾಗಿಲ್ಲ

DC ಅಪಾಯಕಾರಿ ಎಂದು ಘೋಷಿಸಿದ್ದರು,ಇಂದ್ರಾಯಣಿ ನದಿ ಸೇತುವೆ ದುರಂತ ನಡೆದಿದೆ: ಸಿಎಂ ಫಡಣವೀಸ್‌

Bengaluru, ಮಹಿಳೆ ಮೇಲೆ ರಾ‍ಪಿಡೋ ಚಾಲಕ ಕಪಾಳಮೋಕ್ಷ: ಅಸಲಿ ಸತ್ಯಾಂಶನೇ ಬೇರೆ

ಸಿಎಂ ಸಿದ್ದರಾಮಯ್ಯನ ಕಾರಿಗೆ ಅಡ್ಡ ಕಟ್ಟಿ ಆಕ್ರೋಶ ಹೊರಹಾಕಿದ ರೈತನ ಮೇಲೆ ಒದ್ದ ಪೊಲೀಸರು

ಮುಂದಿನ ಸುದ್ದಿ
Show comments