Webdunia - Bharat's app for daily news and videos

Install App

ಸಿಎಂ ಸಿದ್ದರಾಮಯ್ಯಗೆ ತಟ್ಟಿದ ಸಚಿವಕಾಂಕ್ಷಿಗಳ ಬೆಂಬಲಿಗರ ಬಿಸಿ

Webdunia
ಬುಧವಾರ, 24 ಮೇ 2023 (16:32 IST)
ಹ್ಯಾಟ್ರಿಕ್ ಹಿರೋ ಆನೇಕಲ್ ಶಿವಣ್ಣಗೆ ಸಚಿವ ಸ್ಥಾನ ಕೊಡಿ,ಮಂತ್ರಿ ಸ್ಥಾನಬೇಕು ಎಂದು ಸಿದ್ದರಾಮಯ್ಯ ನಿವಾಸದ ಮುಂದೆ ಶಿವಣ್ಣ ಪರ ಕಾರ್ಯಕರ್ತರು ಆಗ್ರಹಿಸಿದ್ದಾರೆ.
 
ಮನೆಯಿಂದ ಸಿಎಂ ಸಿದ್ದರಾಮಯ್ಯ ಹೊರಡುವಾಗ ಕಾರಿಗೆ ಅಡ್ಡಲಾಗಿ ನಿಂತು ಮಂತ್ರಿ ಸ್ಥಾನಕ್ಕೆ ಕಾರ್ಯಕರ್ತರು ಬೇಡಿಕೆ ಇಟ್ಟಿದ್ದಾರೆ.ಆನೇಕಲ್ ಶಿವಣ್ಣ ಹಾಗೂ ಡಿ ಸುಧಾಕರ್ ಬೆಂಬಲಿಗರಿಂದ ಪಟ್ಟು ಹಿಡಿಯಲಾಗಿದೆ.ಮಂತ್ರಿ ಸ್ಥಾನ ಕೊಡಲೇಬೇಕೆಂದು ಕಾರಿಗೆ ಮುತ್ತಿಗೆ ಹಾಕಿದ್ದು,ಈ ವೇಳೆ ಸಿಎಂ ಸಿದ್ದು ಕಾರಿಗೆ ದಾರಿ ಮಾಡಿಕೊಳ್ಳಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.ಬೆಂಬಲಿಗರ ವರ್ತನೆ ನೋಡಿ ಕಾರಿನಿಂದ ಹೊರಗಡೆ ಬಾರದೇ ಸಿಟ್ಟಾಗಿ  ಸಿಎಂ ಸಿದ್ದು ತೆರಳಿದ್ರು.ಸಿಎಂ ಸಿದ್ದರಾಮಯ್ಯಗೆ ಪ್ರತಿ ನಿತ್ಯ ಆಕಾಂಕ್ಷಿ ಗಳ ಬೆಂಬಲಿಗರ ಬಿಸಿ ತಟ್ಟಿದೆ.ನಿನ್ನೆಯೂ ಸಿಎಂ ಕಾರಿಗೆ ಜಿ ಎಸ್ ಪಾಟೀಲ್ ಶಾಸಕರ ಬೆಂಬಲಿಗರು ಕಾರಿಗೆ ಅಡ್ಡ ಹಾಕಿದ್ರು.

ಸಂಬಂಧಿಸಿದ ಸುದ್ದಿ

ಅಯೋಧ್ಯೆ ರಾಮನಿಗೆ ಮೈಸೂರು ಶಿಲ್ಪಿಯ ವಿಗ್ರಹ? ಕುಟುಂಬದವರ ಸಂತಸ

ನಮಗೆ ಸಿದ್ದರಾಮಯ್ಯನೇ ಪ್ರಭು ರಾಮ: ಮಾಜಿ ಸಚಿವ ಆಂಜನೇಯ

ಜಪಾನ್​ನಲ್ಲಿ 7.5 ತೀವ್ರತೆಯ ಪ್ರಬಲ ಭೂಕಂಪ

ರಾಮ ಮಂದಿರ, ಆದಿತ್ಯನಾಥ್​ಗೆ ಬಾಂಬ್ ಬೆದರಿಕೆ

ಬಿಹಾರದಲ್ಲಿ ದಲಿತ ಮಹಿಳೆ ಮೇಲೆ ಖಾಕಿ ದೌರ್ಜನ್ಯ

ಕಿತ್ತಳೆ ಜಾಮ್​​ ತಯಾರಿಸಿದ ರಾಹುಲ್​ ಗಾಂಧಿ

ಹುಟ್ಟುಹಬ್ಬ ಆಚರಿಸಿಕೊಳ್ಳಲು ತೆರಳುತ್ತಿದ್ದ ಯುವಕರು ಬಲಿ

ಕಾಡಾನೆ ದಾಳಿ; ಮಹಿಳೆಗೆ ಗಂಭೀರ ಗಾಯ

ಹೊಸ ವರ್ಷಾಚರಣೆ ಹಿನ್ನೆಲೆ ತಡ ರಾತ್ರಿ ಗಲಾಟೆ

ಹೈಕಮಾಂಡ್ ನಮ್ಮನ್ನ ಕರೆಯುವ ಅವಶ್ಯಕತೆಯಿಲ್ಲ

ಮುಂದಿನ ಸುದ್ದಿ
Show comments