Select Your Language

Notifications

webdunia
webdunia
webdunia
webdunia

ನೀರಿನಲ್ಲಿ ಮುಳುಗಿ ಬಾಲಕರ ಸಾವು

ನೀರಿನಲ್ಲಿ ಮುಳುಗಿ ಬಾಲಕರ ಸಾವು
ಮೈಸೂರು , ಬುಧವಾರ, 24 ಮೇ 2023 (12:43 IST)
ನೀರಿನಲ್ಲಿ ಮುಳುಗಿ ಇಬ್ಬರು ಬಾಲಕರು ಸಾವಿಗೀಡಾಗಿರುವ ಘಟನೆ ಮೈಸೂರು ಜಿಲ್ಲೆ ನರಸೀಪುರ ತಾಲ್ಲೂಕಿನ ತಲಕಾಡಿನ ಕಾವೇರಿ ನಿಸರ್ಗಧಾಮದಲ್ಲಿ ನಡೆದಿದೆ. ಲೋಹಿತ್(15), ಯತೀಶ್(13) ಮೃತ ಬಾಲಕರಾಗಿದ್ದು, ಬೆಂಗಳೂರಿನ ನಂದಿನಿ ಲೇಔಟ್ ನಿವಾಸಿ ರವಿಗೌಡರ ಪುತ್ರರು ಎಂದು ತಿಳಿದುಬಂದಿದೆ. ಸ್ನೇಹಿತರ ಜೊತೆ ಬೆಂಗಳೂರಿನಿಂದ ತಲಕಾಡಿಗೆ ಬಾಲಕರು ಆಗಮಿಸಿದ್ದರು. ಆಳ ನೋಡದೆ ಈಜಲು ನದಿಗೆ ಇಳಿದಿದ್ದ ಬಾಲಕರು ಆಳವಿದ್ದ ಕಡೆಗೆ ಈಜಲು ಹೋಗಿ ಮುಳುಗಿ ಸಾವಿಗೀಡಾಗಿದ್ದಾರೆ.ಇನ್ನು ಈ ವೇಳೆ ಅಲ್ಲೇ ಇದ್ದ ಅಂಬಿಗರಿಂದ 6 ಬಾಲಕರ ರಕ್ಷಣೆ ಮಾಡಲಾಗಿದೆ. ಸ್ಥಳದಲ್ಲಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದ್ದು, ತಲಕಾಡು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಲ್ಲೆಯ ವಿಡಿಯೋ ಸಿಸಿಟಿವಿಯಲ್ಲಿ ಸೆರೆ